ವಿಯೆಟ್ನಾಂ ಕೈ ಕುಲುಕಿದರೆ ಚೀನಾ ಮುಖ ಕೆಂಪಾಯಿತೇಕೆ?
ನವದೆಹಲಿ, ಅ.29: ವಿಯೆಟ್ನಾಂ ದೇಶದ ಜೊತೆಗೆ ಭಾರತ ಕೈ ಜೋಡಿಸಿದೆ. ರಕ್ಷಣೆ, ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹ ಸೇರಿದಂತೆ ಏಳು ಪ್ರಮುಖ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಮೂಲಕ ದಕ್ಷಿಣ ಚೀನಾ ಸಮುದ್ರಕ್ಕೆ ಭಾರತ ಲಗ್ಗೆ ಇಡುತ್ತಿದ್ದಂತೆ ಅತ್ತ ಚೀನಾದ ಮುಖ ಕೆಂಪಾಗಿದೆ.ಹೈಡ್ರೋಕಾರ್ಬನ್ ಮತ್ತು ತೈಲ ನಿಕ್ಷೇಪಗಳ ಅಧ್ಯಯನಕ್ಕೆ ಭಾರತಕ್ಕೆ ಮುಂದಾಗಿರುವುದು ಚೀನಿಯರ ಹುಬ್ಬೇರಿಸಿದೆ.
ಭಾರತ ಪ್ರವಾಸದಲ್ಲಿರುವ ವಿಯೆಟ್ನಾಂ ಪ್ರಧಾನಿ ನಾಗ್ವೆನ್ ಟಾನ್ಡಂಗ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಿದರು. ದಕ್ಷಿಣ ಚೀನಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಂಶೋಧನಾ ಚಟುವಟಿಕೆಗೆ ಉಭಯ ದೇಶಗಳು ಒಪ್ಪಂದ ಮಾಡಿಕೊಂಡಿರುವುದನ್ನು ಚೀನಾ ಆಕ್ಷೇಪಿಸಿದೆ. ಚೀನಾ ದೇಶಕ್ಕೆ ಈಗ ಈ ವ್ಯಾಪ್ತಿಯಲ್ಲಿರುವ ದ್ವೀಪ ಸಮೂಹಗಳ ಮೇಲೆ ನಿಯಂತ್ರಣ ಕಳೆದುಕೊಳ್ಳುವ ಭೀತಿ ಆವರಿಸಿದೆ.
"ವಿಯೆಟ್ನಾಮ್ ಜೊತೆಗಿನ ರಕ್ಷಣಾ ಸಂಬಂಧವು ನಮ್ಮ ಪ್ರಮುಖ ವಿಚಾರ ಗಳಲ್ಲೊಂದಾಗಿದೆ. ವಿಯೆಟ್ನಾಮಿನ ಭದ್ರತೆ ಹಾಗೂ ರಕ್ಷಣಾ ಪಡೆಗಳನ್ನು ಆಧುನೀಕರಿಸುವ ವಿಚಾರದಲ್ಲಿ ಭಾರತವು ಎಂದಿಗೂ ಆ ರಾಷ್ಟ್ರಕ್ಕೆ ಬದ್ಧರಾಗಿದ್ದೇವೆ.ಜಂಟಿ ಸಮರಾಭ್ಯಾಸ ಹಾಗೂ ರಕ್ಷಣಾ ಸಾಮಗ್ರಿಗಳಲ್ಲಿ ಸಹಕಾರಕ್ಕೂ ಭಾರತ ಬದ್ಧವಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಮೋದಿ ಹಾಗೂ ಟಾನ್ ಡಂಗ್ ದ್ವೀಪಕ್ಷೀಯ ಮಾತುಕತೆ ನಂತರ ಸಹಿ ಹಾಕಿದ ಒಪ್ಪಂದಗಳು:
* 2020ರ ವೇಳೆಗೆ ಉಭಯ ದೇಶಗಳ ನಡುವಿನ ವ್ಯವಹಾರ ಮೌಲ್ಯ 7 ಬಿಲಿಯನ್ ಯುಎಸ್ ಡಾಲರ್ ನಿಂದ 20 ಮಿಲಿಯನ್ ಡಾಲರ್ ಗೆ ಏರಿಕೆಯಾಗಲಿದೆ.
* ಜೇಟ್ ಏರ್ ವೇಸ್ ಹಾಗೂ ವಿಯೆಟ್ನಾಂ ಏರ್ ಲೈನ್ಸ್ ನಡುವೆ ಒಪ್ಪಂದವಾಗಿದ್ದು, ನ.5ರಿಂದ ಹೊ ಚಿನ್ ಮಿನ್ ನಗರಕ್ಕೆ ನೇರ ವಿಮಾನ ಸಂಪರ್ಕ ಸಾಧ್ಯವಾಗಲಿದೆ.
* ನಲಂದಾ ವಿಶ್ವವಿದ್ಯಾಲಯ ಅಭಿವೃದ್ಧಿ ಹಾಗೂ ಕೌಶಲ್ಯ ವಿನಿಮಯ ಕಾರ್ಯಕ್ರಮ
* ವಿಯೆಟ್ನಾಂನ ಕ್ವಾಂಗ್ ನಾಮ್ ಪ್ರಾಂತ್ಯದ ವಿಶ್ವ ಪಾರಂಪರಿಕ ತಾಣದ ಉಳಿವಿಗಾಗಿ ಭಾರತದ ನೆರವು.
* ವಿಯೆಟ್ನಾಂನಲ್ಲಿ ಭಾರತದಿಂದ ಇಂಗ್ಲೀಷ್ ಭಾಷೆ ಹಾಗೂ ಮಾಹಿತಿ ತಂತ್ರಜ್ಞಾನ ತರಬೇತಿ ಕೇಂದ್ರ ಸ್ಥಾಪನೆ.
* 2015-17 ರ ತನಕ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು/
* ಆಡಿಯೋ ವಿಡಿಯೋ ಕಾರ್ಯಕ್ರಮಗಳ ವಿನಿಮಯ.
* ಓಎಮ್ ಜಿಸಿ ಹಾಗೂ ಪೆಟ್ರೋ ವಿಯೆಟ್ನಾಂ ನಡುವೆ ಸಂಶೋಧನಾ ಚಟುವಟಿಕೆ ಒಪ್ಪಂದ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications