Get Updates
Get notified of breaking news, exclusive insights, and must-see stories!

ಕೇಂದ್ರ ಸಚಿವರ ಉಪಸ್ಥಿತಿಯ ಕಾರ್ಯಕ್ರಮದಲ್ಲಿ ಅವಾಂತರ!

ಗುವಾಹಟಿ, ಮೇ 3: ಇಂಡಿಯನ್ ಆಯಿಲ್‌ನ ಕಾರ್ಯಕ್ರಮವೊಂದರಲ್ಲಿ ಆಕಸ್ಮಿಕವಾಗಿ ಪೋರ್ನ್ ಕ್ಲಿಪ್‌ವೊಂದು ಪ್ರಸಾರವಾದ ಘಟನೆ ಶನಿವಾರ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಅಸ್ಸಾಂ ರಾಜ್ಯದ ತೀನ್‌ಸುಕಿಯಾ ನಗರದ ಹೋಟೆಲ್ ಮಿರಾನದಲ್ಲಿ ಮಿಥನಾಲ್ ಮಿಶ್ರಿತ ಎಂ-15 ಪೆಟ್ರೋಲ್ ಅನ್ನ ಪ್ರಯೋಗಾರ್ಥವಾಗಿ ಚಾಲನೆ ಮಾಡಲಾಗಿತ್ತು. ಈ ಉದ್ಘಾಟನಾ ಕಾರ್ಯಕ್ರಮದ ವೇಳೆ ಅಶ್ಲೀಲ ವಿಡಿಯೋ ಪ್ಲೇ ಆಗಿದೆ. ಕೇಂದ್ರ ಸಚಿವರು, ರಾಜ್ಯ ಸಚಿವರು ಹಾಗು ಇಂಡಿಯನ್ ಆಯಿಲ್‌ನ ಹಲವು ಗಣ್ಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾಗಲೀ ಮುಜುಗರದ ಘಟನೆ ನಡೆದಿದೆ.

ಕೇಂದ್ರ ಸಚಿವ ರಾಮೇಶ್ವರ್ ತೇಲಿ ಅವರು ಈ ಕಾರ್ಯಕ್ರಮ ಉದ್ಘಾಟಿಸಿದ್ದರು. ಅಸ್ಸಾಮ್‌ನ ಕಾರ್ಮಿಕ ಸಚಿವ ಸಂಜಯ್ ಕಿಸಾನ್ ಮೊದಲಾದವರು ಪಾಲ್ಗೊಂಡಿದ್ದರು. ಈ ವೇಳೆ, ವೇದಿಕೆಯ ಹಿಂದಿನ ಸ್ಕ್ರೀನ್‌ನಲ್ಲಿ ಕಾರ್ಯಕ್ರಮದ ಲೈವ್ ಫೂಟೇಜ್ ಪ್ರಸಾರ ಮಾಡಲಾಗುತ್ತಿತ್ತು. ಇಂಡಿಯನ್ ಆಯಿಲ್ ಸಂಸ್ಥೆಯ ಅಧಿಕಾರಿಯೊಬ್ಬರು ಸ್ಟೇಜ್ ಮೇಲೆ ಭಾಷಣ ಮಾಡತೊಡಗುತ್ತಿದ್ದಂತೆಯೇ ಹಿಂದಿನ ಪರದೆಯಲ್ಲಿ ಪೋರ್ನ್ ಕ್ಲಿಪ್‌ವೊಂದರ ಪ್ರಸಾರ ಆಗತೊಡಗಿತು.

ಕಾರ್ಯಕ್ರಮದ ಸಂಘಟಕರು ಕೂಡಲೇ ಪರಿಸ್ಥಿತಿ ಸರಿಪಡಿಸಲು ಯತ್ನಿಸಿದರು. ಆದರೆ, ಕೆಲ ಕ್ಷಣಗಳವರೆಗೆ ಪೋರ್ನ್ ಪ್ರಸಾರವಾಗುವುದನ್ನು ತಪ್ಪಿಸಲು ಆಗಲಿಲ್ಲ. ಅಷ್ಟರಲ್ಲಾಗಲೇ ಕಾರ್ಯಕ್ರಮದಲ್ಲಿ ಇದ್ದವರು ತಮ್ಮ ಮೊಬೈಲ್‌ನಿಂದ ಆ ದೃಶ್ಯವನ್ನು ಸೆರೆಹಿಡಿದಾಗಿತ್ತು. ಸೋಷಿಯಲ್ ಮೀಡಿಯಾಗೂ ಕೆಲವರು ಪೋಸ್ಟ್ ಮಾಡಿದರು. ಆನ್‌ಲೈನ್‌ನಲ್ಲೂ ಈ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಗುತ್ತಿತ್ತೆನ್ನಲಾಗಿದೆ.

Indecent video played during Indian Oil event launched by Union Minister

ಕಾರ್ಯಕ್ರಮದಲ್ಲಿ ಪೋರ್ನ್ ವಿಡಿಯೋ ಪ್ರಸಾರವಾದ ಘಟನೆ ನಡೆದ ಬಳಿಕ ಅಸ್ಸಾಮ್‌ನ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಬಂದು ವಿಚಾರಣೆ ನಡೆಸಿದರು. ಬಳಿಕ ತೀನ್‌ಸುಕಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು.

ಝೂಮ್ ಮೀಟಿಂಗ್‌ನಲ್ಲಿ ಪಾಲ್ಗೊಂಡವರಲ್ಲೊಬ್ಬರಿಂದ ಈ ಕೃತ್ಯ:
ಇಂಡಿಯನ್ ಆಯಿಲ್‌ನ ಈ ಕಾರ್ಯಕ್ರಮವನ್ನು ಆನ್‌ಲೈನ್‌ನಲ್ಲೂ ಪ್ರಸಾರ ಮಾಡಲಾಗಿತ್ತು. "ಸಂಸ್ಥೆಯ ಅಧಿಕಾರಿಯೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಝೂಮ್ ಮೀಟಿಂಗ್ ಐಡಿ ಮತ್ತು ಪಾಸ್‌ಕೋಡ್ ಅನ್ನು ಹಾಕಿದ್ದರು. ಈ ವಿವರವನ್ನು ಉಪಯೋಗಿಸಿಕೊಂಡು ಝೂಮ್ ಮೀಟಿಂಗ್‌ಗೆ ಬಂದು ಯಾರೋ ದುಷ್ಕರ್ಮಿಯೊಬ್ಬ ಅಶ್ಲೀಲ ವಿಡಿಯೋ ಪ್ರಸಾರ ಮಾಡಿರಬಹುದು" ಎಂದು ತೀನ್‌ಸುಕಿಯಾ ಎಸ್‌ಪಿ ದೇಬೋಜಿತ್ ದೇವೋರಿ ಅವರು ಶಂಕಿಸಿದ್ದಾರೆ.

ಇಂಡಿಯನ್ ಅಯಿಲ್‌ನ ಎಂ-15 ಪೆಟ್ರೋಲ್ ಉದ್ಘಾಟನೆ ಮಾಡಿದ ಕೇಂದ್ರ ಪೆಟ್ರೋಲಿಯಂ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ಈ ಬಗ್ಗೆ ಪ್ರತಿಕ್ರಿಯಿಸಿ, "ಪೋರ್ನ್ ವಿಡಿಯೋ ಸ್ಕ್ರೀನ್ ಆದಾಗ ನಾನು ನೋಡಲಿಲ್ಲ. ನನ್ನ ಆಪ್ತಸಹಾಯಕರು ಈ ಬಗ್ಗೆ ನನಗೆ ಮಾಹಿತಿ ನೀಡಿದಾಗಲೇ ಗೊತ್ತಾಗಿದ್ದು. ಈ ಘಟನೆಯ ತನಿಖೆ ನಡೆಸಿ, ಇದರಲ್ಲಿ ಭಾಗಿಯಾದವರನ್ನ ಪತ್ತೆ ಮಾಡಿ ಸೂಕ್ತ ಶಿಕ್ಷೆ ವಿಧಿಸಬೇಕು" ಎಂದು ಹೇಳಿದ್ದಾರೆ.

ತೀನ್‌ಸುಕಿಯಾ ಜಿಲ್ಲಾ ಮ್ಯಾಜಿಸ್ಟ್ರೇಟರು ಘಟನೆಯ ತನಿಖೆಗೆ ಆದೇಶ ಮಾಡಿದ್ದಾರೆ. ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಂಜಿತ್ ಬರ್ಕಕಟಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ.

(ಒನ್ಇಂಡಿಯಾ ಸುದ್ದಿ)

Recommended Video

      CSK ವಿರುದ್ಧ ಸೇಡು ತೀರಿಸಿಕೊಳ್ಳಲು ವಿರಾಟ್ ಹೇಗೆ ರೆಡಿಯಾಗಿದ್ದಾರೆ ಗೊತ್ತಾ? | Oneindia Kannad

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+