Get Updates
Get notified of breaking news, exclusive insights, and must-see stories!

ಆಶೀರ್ವಾದ ಪಡೆಯಲು ಹಾವಿನ ಹೆಡೆಯ ಮೇಲೆ ಕಂದಮ್ಮ: ಮುಂದೇನಾಯ್ತು?

ರಾಯಪುರ, ಅ 17: ಜೀವಂತ ನಾಗರಹಾವಿನ ಆಶೀರ್ವಾದ ಪಡೆಯಲು ಹೋದ ದಂಪತಿಗಳ ಮೂರ್ಖತನದಿಂದ, ಐದು ತಿಂಗಳ ಕಂದಮ್ಮ ಸಾವನ್ನಪ್ಪಿದ ಘಟನೆ, ಛತ್ತೀಸಗಢದ ರಾಜಧಾನಿ ರಾಯಪುರ ಬಳಿಯ ಹಳ್ಳಿಯಿಂದ ವರದಿಯಾಗಿದೆ.

ರಾಯಪುರದಿಂದ 72ಕಿ.ಮೀ ದೂರದ ರಜ್ನಾನಂದಗಾವ್ ಎನ್ನುವ ಹಳ್ಳಿಯ ದಂಪತಿಗಳು, ಹಾವಾಡಿಗನೊಬ್ಬನ ಮಾತನ್ನು ನಂಬಿ ತಮ್ಮ ಮಗುವನ್ನು ಕಳೆದುಕೊಂಡಿದ್ದಾರೆ. ಮಗುವಿಗೆ ಪದೇಪದೇ ಆರೋಗ್ಯದ ಸಮಸ್ಯೆ ಎದುರಾಗುತ್ತಿದ್ದರಿಂದ, ಬಿಲ್ಲುರಾಮ್ ಎನ್ನುವ ಹಾವಾಡಿಗನ ಬಳಿಗೆ ದಂಪತಿಗಳು ಬಂದಿದ್ದಾರೆ.

ನಾಗಪೂಜೆಯನ್ನು ಮಾಡಿದರೆ ನಿಮ್ಮ ಮಗುವಿನ ಆರೋಗ್ಯದ ಸಮಸ್ಯೆ ಪರಿಹಾರವಾಗುತ್ತದೆ ಎಂದು ಹಾವಾಡಿಗ ಹೇಳಿದ ನಂತರ, ನಾಗಪೂಜೆಯನ್ನು ದಂಪತಿಗಳು ನೆರವೇರಿಸಿದ್ದಾರೆ. ನಂತರ, ಜೀವಂತ ನಾಗರಹಾವಿನ ಆಶೀರ್ವಾದ ಪಡೆಯಲು ಸೂಚಿಸಿದ್ದಾನೆ.

Shocking: In the name of superstition, snake bite kills 5-month-old baby

ತನ್ನ ಬಳಿಯಿರುವ ನಾಗರಹಾವಿನ ಹೆಡೆಯ ಮೇಲೆ, ಮಗುವಿನ ತಲೆಯನ್ನು ಇಟ್ಟು ಆಶೀರ್ವಾದ ಪಡೆದುಕೊಳ್ಳಿ ಎನ್ನುವ ಹಾವಾಡಿಗನ ಸೂಚನೆಯಂತೆ ದಂಪತಿಗಳು ನಡೆದುಕೊಂಡಿದ್ದಾರೆ. ಆದರೆ, ನಾಗಪ್ಪ ಮಗುವನ್ನು ಕಚ್ಚಿ ಬಿಟ್ಟಿದೆ.

ಇದರಿಂದ ಗಾಭರಿಗೊಳಗಾದ ದಂಪತಿಗಳಿಗೆ ಇದೊಂದು ಹಲ್ಲುಕಿತ್ತ ನಾಗರಹಾವು ಎಂದು ದಂಪತಿಗಳನ್ನು ಹಾವಾಡಿಗ ಸಾಗಹಾಕಿದ್ದಾನೆ. ಆದರೆ, ಇದಾದ ಒಂದು ಗಂಟೆಯಲ್ಲಿ ಮಗುವಿಗೆ ಉಸಿರಾಟದ ತೊಂದರೆ ಉಂಟಾಗಿದೆ.

ಕೂಡಲೇ, ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ದಂಪತಿಗಳು ಹೋಗುವಷ್ಟರಲ್ಲಿ ಮಗುವಿನ ದೇಹಕ್ಕೆ ವಿಷ ಸಂಪೂರ್ಣವಾಗಿ ಆವರಿಸಿ, ಮಗು ಸಾವನ್ನಪ್ಪಿದೆ. ಪೊಲೀಸರು, ಹಾವಾಡಿಗನನ್ನು ಬಂಧಿಸಿದ್ದಾರೆ. ಆದರೆ, ಮೂಢನಂಬಿಕೆಯಿಂದ ಮಗು ಕಳೆದುಕೊಂಡ ದಂಪತಿಗಳಿಗೆ, ತಮ್ಮ ಮಗು ವಾಪಸ್ ಬರುತ್ತಾ...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+