Fast Tag: ಫಾಸ್ಟ್ಟ್ಯಾಗ್ ಕಿರಿಕಿರಿ ತಪ್ಪಿಸಲು ಮಹತ್ವದ ಕ್ರಮ ಫೆ. 1ರಿಂದ ಜಾರಿ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ಆದೇಶ
ನವದೆಹಲಿ: ಕೇಂದ್ರ ಸರ್ಕಾರವು ಫಾಸ್ಟ್ಟ್ಯಾಗ್ಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್ ನೀಡಿದೆ. ಫಾಸ್ಟ್ ಟ್ಯಾಗ್ಗೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಹಲವು ಮಹತ್ವದ ಬದಲಾವಣೆಗಳು ಆಗುತ್ತಿವೆ. ಕೆಲವೊಂದು ಬದಲಾವಣೆಗಳಿಂದ ವಾಹನ ಸವಾರರಿಗೆ ಸಮಸ್ಯೆ ಸಹ ಆಗುತ್ತಿದೆ. ಇದೀಗ ಈ ಸಮಸ್ಯೆಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕೆಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಫಾಸ್ಟ್ಟ್ಯಾಗ್ಗಳಿಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್ ನೀಡಿದೆ. ಎಲ್ಲಾ ಕಾರುಗಳಿಗೆ ನೋ ಯುವರ್ ವೆಹಿಕಲ್ ಪರಿಶೀಲನೆಯನ್ನು ನಡೆಸುವಂತೆ ಬ್ಯಾಂಕ್ಗಳು ನಿಯಮಿತವಾಗಿ ಒತ್ತಾಯಿಸುವುದನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಫಾಸ್ಟ್ಟ್ಯಾಗ್ಗೆ ಸಂಬಂಧಿಸಿದಂತೆ ಕೆಲವೊಂದು ನಿರ್ದಿಷ್ಟ ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದೆ. ಅಲ್ಲದೇ ಬ್ಯಾಂಕ್ಗಳ ಕೆವೈವಿ (ನೋ ಯುವರ್ ವೆಹಿಕಲ್) ಕಿರುಕುಳವನ್ನು ತಪ್ಪಿಸುವ ಉದ್ದೇಶದಿಂದಲೂ ಕೆಲವೊಂದು ಕಟ್ಟುನಿಟ್ಟಿನ ಸೂಚನೆಗಳನ್ನು ಕೊಡಲಾಗಿದೆ.

ನೋ ಯುವರ್ ವೆಹಿಕಲ್ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸುವ ಕ್ರಮವು ವಾಹನ ಸವಾರರಿಗೆ ಅನುಕೂಲವಾಗಲಿದೆ. ಅಲ್ಲದೇ ಹೆದ್ದಾರಿ ಬಳಕೆದಾರರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ. ಹೊಸ ನಿಬಂಧನೆಗಳ ಅಡಿಯಲ್ಲಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬ್ಯಾಂಕ್ಗಳಿಗೆ ಮೊದಲು ಫಾಸ್ಟ್ಟ್ಯಾಗ್ ನೀಡಲು ಮತ್ತು ನಂತರ ಕೆವೈವಿ ನಡೆಸಲು ಅವಕಾಶ ನೀಡುವ ಪ್ರಕ್ರಿಯೆಯನ್ನು ನಿಲ್ಲಿಸಲು ನಿರ್ಧರಿಸಿದೆ.
ಹೊಸ ಬದಲಾವಣೆ ಫೆಬ್ರವರಿ 1ರಿಂದ ಜಾರಿ
ನೋ ಯುವರ್ ವೆಹಿಕಲ್ ಎನ್ನುವ ಫಾಸ್ಟ್ಟ್ಯಾಗ್ಗಳನ್ನು ವಾಹನ ನೋಂದಣಿ ಸಂಖ್ಯೆಗಳಿಗೆ ಸರಿಯಾಗಿ ಜೋಡಿಸಲಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಇದು ಟೋಲ್ ಪ್ಲಾಜಾಗಳಲ್ಲಿ ದುರುಪಯೋಗ ಮತ್ತು ಆದಾಯ ಸೋರಿಕೆಯನ್ನು ತಡೆಯುತ್ತದೆ. ಫಾಸ್ಟ್ಟ್ಯಾಗ್ಗಳನ್ನು ಹೊಂದಿರುವ ಅಸ್ತಿತ್ವದಲ್ಲಿರುವ ವಾಹನಗಳಿಗೆ ಕೆವೈವಿ ನಿಯಮಿತ ಅವಶ್ಯಕತೆಯಾಗಿರುವುದಿಲ್ಲ. ಸಡಿಲ ಅಥವಾ ನಕಲಿ ಟ್ಯಾಗ್ಗಳ ಪ್ರಕರಣಗಳು ಅಥವಾ ವಾಹನ ಸಂಖ್ಯೆ ಮತ್ತು ಫಾಸ್ಟ್ ಟ್ಯಾಗ್ ನಡುವೆ ಹೊಂದಾಣಿಕೆ ಆಗಿಲ್ಲ ಎನ್ನುವಂತಹ ದೂರುಗಳು ಬಂದರೆ ಮಾತ್ರ ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ. ಅಂತಹ ಸಂದರ್ಭಗಳಲ್ಲಿ ಸಮಸ್ಯೆಯನ್ನು ಟೋಲ್ ಪ್ಲಾಜಾದಲ್ಲಿ ಫ್ಲ್ಯಾಗ್ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ವಾಹನ ಮಾಲೀಕತ್ವ ಮತ್ತು ಗುರುತಿಗೆ ಸಂಬಂಧಿಸಿದ ಎಲ್ಲಾ ಪರಿಶೀಲನೆಗಳನ್ನು ಫಾಸ್ಟ್ ಟ್ಯಾಗ್ ಸಕ್ರಿಯಗೊಳಿಸುವ ಮೊದಲು ಪೂರ್ಣಗೊಳಿಸಬೇಕು. ನಂತರ ಬ್ಯಾಂಕುಗಳು ಹೆಚ್ಚುವರಿ ದಾಖಲೆಗಳನ್ನು ಪಡೆಯಲು ಅಥವಾ ಕೆವೈವಿ ಪರಿಶೀಲನೆಗಳನ್ನು ಪ್ರಾರಂಭಿಸಲು ಅನುಮತಿ ನೀಡುವುದಿಲ್ಲ ಎಂದು ಸಚಿವಾಲಯದ ಪ್ರಕಟಣೆಯು ತಿಳಿಸಿದೆ.
40 ಬ್ಯಾಂಕ್ಗಳಿಂದ ಕಾರುಗಳಿಗೆ ಫಾಸ್ಟ್ಟ್ಯಾಗ್
ಇನ್ನು ದೇಶದಲ್ಲಿ ಅಂದಾಜು 40ಕ್ಕೂ ಹೆಚ್ಚು ಬ್ಯಾಂಕ್ಗಳಿಂದ ಕಾರುಗಳಿಗೆ ಫಾಸ್ಟ್ಟ್ಯಾಗ್ ಸೇವೆ ನೀಡಲಾಗುತ್ತಿದೆ. ನಿಖರತೆ ಮತ್ತು ವ್ಯವಸ್ಥೆಯ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಎನ್ಎಚ್ಎಐ ವಿತರಕ ಬ್ಯಾಂಕ್ಗಳಿಗೆ ಪೂರ್ವ ಸಕ್ರಿಯಗೊಳಿಸುವಿಕೆ ಮೌಲ್ಯೀಕರಣ ಮಾನದಂಡಗಳನ್ನು ಏಕಕಾಲದಲ್ಲಿ ಬಲಪಡಿಸಿದೆ ಎಂದು ಹೇಳಲಾಗಿದೆ.
ವಾಹನ್ ಪೋರ್ಟಲ್ (VAHAN)ನಲ್ಲಿ ವಾಹನ ವಿವರಗಳು ಲಭ್ಯವಿಲ್ಲದಿದ್ದರೆ, ವಿತರಕ ಬ್ಯಾಂಕ್ಗಳು ನೋಂದಣಿ ಪ್ರಮಾಣಪತ್ರ (RC) ಬಳಸಿಕೊಂಡು ವಿವರಗಳನ್ನು ಸಕ್ರಿಯಗೊಳಿಸುವ ಮೊದಲು ಪೂರ್ಣ ಹೊಣೆಗಾರಿಕೆಯೊಂದಿಗೆ ಮೌಲ್ಯೀಕರಿಸಬೇಕು ಎಂದು ತಿಳಿಸಲಾಗಿದೆ. ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಮಾತ್ರ ಈ ಪ್ರಕ್ರಿಯೆಯನ್ನು ಅನುಸರಿಸುವುದಕ್ಕೆ ಅವಕಾಶ ಇದೆ ಎಂದು ಸ್ಪಷ್ಟಪಡಿಸಲಾಗಿದೆ. ಆನ್ಲೈನ್ ಚಾನೆಲ್ಗಳ ಮೂಲಕ ಮಾರಾಟವಾಗುವ ಫಾಸ್ಟ್ಟ್ಯಾಗ್ಗಳನ್ನು ಬ್ಯಾಂಕ್ಗಳಿಂದ ಸಂಪೂರ್ಣ ಮೌಲ್ಯೀಕರಣದ ನಂತರವೇ ಸಕ್ರಿಯಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ.
ಆದಾಗ್ಯೂ ಪರಿಷ್ಕೃತ ನಿಯಮಗಳು ಕಾರುಗಳಿಗೆ ಮಾತ್ರ ಅನ್ವಯಿಸುತ್ತವೆ. ಟ್ರಕ್ಗಳು ಮತ್ತು ಮಲ್ಟಿ-ಆಕ್ಸಲ್ ವಾಹನಗಳಂತಹ ವಾಣಿಜ್ಯ ವಾಹನಗಳಿಗೆ ಅಲ್ಲ. ಇದು ಪ್ರಯಾಣಿಕ ಕಾರುಗಳಿಗೆ ಸೀಮಿತವಾಗಿದೆ. ವಾಣಿಜ್ಯ ವಾಹನಗಳಿಗೆ ಈ ಹೊಸ ನಿಯಮಗಳು ಅನ್ವಯವಾಗುವುದಿಲ್ಲ ಎಂದೂ ಹೇಳಲಾಗಿದೆ.
ಫಾಸ್ಟ್ ಟ್ಯಾಗ್ನಲ್ಲಿ ಆಗುತ್ತಿರುವಂತಹ ಗೊಂದಲಗಳನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರವು ಹೊಸ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications