ಛೋಟಾ ಸತ್ತಿದ್ದು ನಿಜವಾದ್ರೆ, ಮಾಧ್ಯಮಗಳಿಗೆ ಕರೆ ಮಾಡಿದ್ದು ಯಾರು?
ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ ಛೋಟಾ ಶಕೀಲ್ ಸತ್ತಿದ್ದಾನೆ. ಶಕೀಲ್ ನ ಸಂಬಂಧಿ ಹಾಗೂ ಗ್ಯಾಂಗ್ ಸದಸ್ಯನ ನಡುವಣ ಸಂಭಾಷಣೆ ಕೇಳಿ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ದಾವೂದ್ ಹೋಟೆಲ್ ಖರೀದಿಸಲು ಮುಂದಾದ ಹಿಂದೂ ಮುಖಂಡ!
ಆದರೆ, ಇದು ಅರ್ಧಸತ್ಯ ಮಾತ್ರ. ಒಂದು ವೇಳೆ ಛೋಟಾ ಸತ್ತಿದ್ದು ನಿಜವಾಗಿದ್ರೆ, ಮಾಧ್ಯಮಗಳಿಗೆ ಕರೆ ಮಾಡಿದ್ದು ಯಾರು? ಏನಿದು ಗೊಂದಲ? ವಿವರಗಳಿಗಾಗಿ ಮುಂದೆ ಓದಿ..
ಛೋಟಾ ಶಕೀಲ್ ಸತ್ತಿದ್ದಾನೆ ಎಂದು ಬಂದಿರುವ ಸುದ್ದಿಯನ್ನು ಯಾರೂ ದೃಢಪಡಿಸಿಲ್ಲ. ಸತ್ಯಾಸತ್ಯತೆ ಬಗ್ಗೆ ತನಿಖೆ ಆಗಬೇಕಿದೆ ಎಂದು ಮುಂಬೈ ಪೊಲೀಸರು ಹಾಗೂ NSCS ಅಧಿಕಾರಿಗಳು ಹೇಳಿದ್ದಾರೆ.
ಛೋಟಾ ಹೇಳಿಕೆ: ನಾನು ಡಿ ಗ್ಯಾಂಗ್ ಜತೆ ಸಂಬಂಧ ಕಡಿದುಕೊಂಡಿಲ್ಲ. 'ನಾನು ಭಾಯ್ ಜತೆಗಿದ್ದೇನೆ, ದಾವೂದ್ ತಮ್ಮ ಅನೀಸ್ ಜತೆ ಸಂಬಂಧ ಹಳಸಿದೆ' ಎಂಬುದು ಸುಳ್ಳು ಎಂದು ಹೇಳಿದ್ದ.
80ರ ದಶಕದಿಂದ ದಾವೂದ್ ಹಾಗೂ ಶಕೀಲ್ ಕರಾಚಿಯಲ್ಲಿ ನೆಲೆಸಿದ್ದಾರೆ.ಡಿ ಕಂಪನಿ ನಡೆಸುವ ವಿಚಾರದಲ್ಲಿ ದಾವೂದ್ ಅವರ ಸೋದರ ಅನೀಸ್ ಹಾಗೂ ಛೋಟಾ ಶಕೀಲ್ ನಡುವೆ ವೈಮನಸ್ಯ ಉಂಟಾಗಿತ್ತು.
ಈ ವಿಷಯದಲ್ಲಿ ದಾವೂದ್ ಕೂಡಾ ಅನೀಸ್ ಪರ ನಿಂತಿದ್ದು, ಶಕೀಲ್ ನನ್ನು ಕೆರಳಿಸಿತ್ತು. ಹೀಗಾಗಿ, ಡಿ ಕಂಪನಿ ತೊರೆದು, ಪೂರ್ವ ಏಷ್ಯಾ ದೇಶಗಳಲ್ಲಿ ಹೊಸ ನೆಲೆ ಕಂಡುಕೊಳ್ಳಲು ಶಕೀಲ್ ಯತ್ನಿಸಿದ್ದಾನೆ ಎಂಬ ಸುದ್ದಿ ಹಬ್ಬಿತ್ತು.

ಹೃದಯಾಘಾತದಿಂದ ಮೃತಪಟ್ಟ ಸುದ್ದಿ
ವರ್ಷನ್ 1: 57 ವರ್ಷದ ಚೋಟಾ ಶಕೀಲ್ ಜನವರಿ 6ರಂದು ಇಸ್ಲಾಮಾಬಾದ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಆವೃತ್ತಿಯ ಕಥೆ ಹಬ್ಬಿದೆ. ಶಕೀಲ್ ಗೆ ಹೃದಯಾಘಾತವಾದ ಕೂಡಲೇ ರಾವಲ್ಪಿಂಡಿಯ ಕಂಬೈನ್ಡ್ ಮೆಡಿಕಲ್ ಆಸ್ಪತ್ರೆಗೆ ಕರೆತರಲಾಯ್ತು. ಆದರೆ, ಆಸ್ಪತ್ರೆ ತಲುಪುವ ಮೊದಲೇ ಆತ ಮೃತಪಟ್ಟಿದ್ದ ಎಂದು ಹೇಳಲಾಗಿದೆ.

ಪಾಕಿಸ್ತಾನದ ಐಎಸ್ಐನಿಂದಲೇ ಶಕೀಲ್ ಹತ್ಯೆ
ವರ್ಷನ್ 2: ಪಾಕಿಸ್ತಾನದ ಐಎಸ್ಐ ಜತೆ ಶಕೀಲ್ ಸಂಬಂಧ ಹಳಸಿರುವುದರಿಂದ ಶಕೀಲ್ ನನ್ನು ಹೊಸಕಿ ಹಾಕಲಾಗಿದೆಯಂತೆ. ಎರಡು ದಿನ ಆತನ ಶವವನ್ನು ಶವಾಗಾರದಲ್ಲಿ ಇಡಲಾಗಿತ್ತು. ನಂತರ ವಿಮಾನದ ಮೂಲಕ ಕರಾಚಿಗೆ ಕಳುಹಿಸಲಾಗಿದೆ. ಡಿಫೆನ್ಸ್ ಹೌಸಿಂಗ್ ಅಥಾರಿಟಿಯ ಸ್ಮಶಾನದಲ್ಲೇ ದಫನ್ ಮಾಡಲಾಗಿದೆ ಎಂಬ ಸುದ್ದಿಯಿದೆ.

ದಾವೂದ್ ಗ್ಯಾಂಗಿನಿಂದ ದೂರ
ದಾವೂದ್ ಗ್ಯಾಂಗಿನಿಂದ ದೂರ ಸುದ್ದಿ ಹಬ್ಬಿದ್ದು ಏಕೆ?: ಶಕೀಲ್ ನ ಎರಡನೇ ಪತ್ನಿ ಆಯೇಶಾ ಹಾಗೂ ಕುಟುಂಬದವರೆಲ್ಲ ಮನೆ ಖಾಲಿ ಮಾಡಿಸಿ ಲಾಹೋರ್ ನ ಐಎಸ್ಐ ಹೌಸ್ ಗೆ ರವಾನೆಯಾಗಿದ್ದಾರೆ. ಶಕೀಲ್ ಗೆ ಇಬ್ಬರು ಪತ್ನಿಯರು ಹಾಗೂ ಮೂವರು ಮಕ್ಕಳಿದ್ದಾರೆ. ದಾವೂದ್ ಗ್ಯಾಂಗ್ ಜತೆ ಕಿತ್ತಾಡಿಕೊಂಡ ಬಳಿಕ ಕರಾಚಿ ತೊರೆದ ಬಳಿಕ ಲಾಹೋರ್ ನಲ್ಲಿದ್ದಾನೆ ಎಂಬ ಸುದ್ದಿ ಬಂದಿತ್ತು.

ಛೋಟಾ ಧ್ವನಿ ಮಿಮಿಕ್ರಿಯೇ?
ಛೋಟಾ ಶಕೀಲ್ ನ ಆಪ್ತ ರಹೀಮ್ ಮರ್ಚಂಟ್ ಎಂಬಾತ ಒಳ್ಳೆ ಮಿಮಿಕ್ರಿ ಪಟುವಾಗಿದ್ದಾನೆ. ಡಿ ಕಂಪನಿ ಪರವಾಗಿ ಶಕೀಲ್ ಧ್ವನಿ ನಕಲು ಮಾಡಿ ಅನೇಕ ಬಾರಿ ಬೆದರಿಕೆ ಕರೆ ಮಾಡಿದ್ದಾನೆ. ಮಾಧ್ಯಮಗಳ ಜತೆ ಮಾತನಾಡಿದ್ದಾನೆ. ಒಂದು ಮೂಲಗಳ ಪ್ರಕಾರ ಯುಎಇನಿಂದ ಪಾಕಿಸ್ತಾನಕ್ಕೆ ಐಎಸ್ಐ ಆತನನ್ನು ಕರೆ ತಂದ ಬಳಿಕ, ಶಕೀಲ್ ಯಾವುದೇ ಮಾಧ್ಯಮಗಳ ಜತೆ ಸಂಪರ್ಕ ಹೊಂದಿಲ್ಲ ಎಂಬ ಸುದ್ದಿಯಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications