ಮಸ್ಕ್ ನೇತೃತ್ವದ ಟ್ವಿಟ್ಟರ್ಗೆ ಜೋಕೆ, ಭಾರತದಿಂದ ಸಿಗಲಿದೆ ಎಚ್ಚರಿಕೆ
ಬೆಂಗಳೂರು, ಏ. 27: ಎಲಾನ್ ಮಸ್ಕ್ ಲಕ್ಷಕೋಟಿಗಳನ್ನು ಕೊಟ್ಟು ಟ್ವಿಟ್ಟರ್ ಎಂಬ ಜನಪ್ರಿಯ ಸೋಷಿಯಲ್ ಮೀಡಿಯಾ ಕಂಪನಿಯನ್ನು ಖರೀದಿಸಿದ್ದಾರೆ. ಟ್ವಿಟ್ಟರ್ ವಾಕ್ ಸ್ವಾತಂತ್ರ್ಯಕ್ಕೆ ಒಳ್ಳೆಯ ವೇದಿಕೆಯಾಗಿ ಮಾರ್ಪಡಿಸುತ್ತೇನೆ ಎಂಬ ಪ್ರಮುಖ ಘನ ಉದ್ದೇಶದಿಂದ ಎಲಾನ್ ಮಸ್ಕ್ ಅವರು ಈ ವ್ಯವಹಾರಕ್ಕೆ ಕೈಹಾಕಿದ್ದಾರೆ. ಟ್ವಿಟ್ಟರ್ ಎಲ್ಲರ ಅಭಿಪ್ರಾಯಗಳಿಗೆ ಮಣೆಹಾಕುತ್ತದೆ. ಯಾವುದನ್ನೂ ನಿರ್ಬಂಧಿಸುವುದಿಲ್ಲ. ಯಾರು ಬೇಕಾದರೂ ಮುಕ್ತವಾಗಿ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು. ಇವು ಎಲಾನ್ ಮಸ್ಕ್ ಅವರ ಪರಿಕಲ್ಪನೆಯ ಟ್ವಿಟ್ಟರ್.
ಆದರೆ, ಮಸ್ಕ್ ಅವರ ಈ 'ಮುಕ್ತ' ನೀತಿ ಜಾಗತಿಕವಾಗಿ ಜಾರಿಗೊಳ್ಳುವುದು ಅಷ್ಟು ಸುಲಭವಲ್ಲ. ಎಲಾನ್ ಮಸ್ಕ್ ಅಂದುಕೊಂಡಂತೆ ಟ್ವಿಟ್ಟರ್ ಸರ್ವರ ಅಭಿಪ್ರಾಯಗಳಿಗೆ ಅನಿರ್ಬಂಧಿತ ವೇದಿಕೆಯಾದರೆ ಅದು ಭಾರತದಲ್ಲಿ ಬಹಳಷ್ಟು ತೊಂದರೆಗಳನ್ನು ಅನುಭವಿಸಬೇಕಾಗಬಹುದು ಎನ್ನುತ್ತಾರೆ ಕೆಲ ಭಾರತೀಯ ತಂತ್ರಜ್ಞಾನ ನೀತಿ ತಜ್ಞರು.
ಭಾರತದಲ್ಲಿರುವ ಐಟಿ ಕಾನೂನುಗಳು ಮಸ್ಕ್ ಪರಿಕಲ್ಪನೆಯ ಮುಕ್ತ ಅಭಿಪ್ರಾಯಗಳಿಗೆ ಆಸ್ಪದ ಕೊಡುವುದಿಲ್ಲ. ಭಾರತದ ಕಾನೂನುಗಳಿಗೆ ಬದ್ಧವಾಗಿಲ್ಲದೇ ಹೋದರೆ ಟ್ವಿಟ್ಟರ್ ಆಗಲಿ ಅಥವಾ ಬೇರೆ ಸೋಷಿಯಲ್ ಮೀಡಿಯಾ ಕಂಪನಿಗಳಾಗಲೀ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಈ ಕಂಪನಿಗಳ ಹಿರಿಯ ಅಧಿಕಾರಿಗಳೂ ಕೂಡ ಕಾನೂನು ಕ್ರಮಕ್ಕೆ ಸಿದ್ಧವಾಗಿರಬೇಕಾಗುತ್ತದೆ.

"ವಿವಿಧ ಕಾರಣಗಳನ್ನ ಕೊಟ್ಟು ಪೋಸ್ಟ್ಗಳನ್ನು ಡಿಲೀಟ್ ಮಾಡುವಂತೆ ಒತ್ತಾಯಗಳ ಮಹಾಪೂರವೇ ಹರಿದುಬರುತ್ತದೆ. ಇದು ಮಸ್ಕ್ ಪರಿಕಲ್ಪನೆ ವಾಕ್ ಸ್ವಾತಂತ್ರ್ಯಕ್ಕೆ ತಾಳೆ ಹೊಂದುವುದಿಲ್ಲ. ಟ್ವಿಟ್ಟರ್ ಬಹಳಷ್ಟು ಘರ್ಷಣೆ ಎದುರಿಸಬೇಕಾಗುತ್ತದೆ. ಭಾರತದಲ್ಲಿ ಮಾತ್ರವಲ್ಲ ಯೂರೋಪ್ನಲ್ಲೂ ಎಲಾನ್ ಮಸ್ಕ್ ಅವರ ಟ್ವಿಟ್ಟರ್ಗೆ ಒತ್ತಡ ಹೆಚ್ಚಬಹುದು" ಎಂದು ಸೈಬರ್ ತಜ್ಞ ಪ್ರಶಾಂತೋ ಕೆ ರಾಯ್ ಹೇಳುತ್ತಾರೆ.
ಭಾರತೀಯರು ಬಹಳ ಸೂಕ್ಷ್ಮಮತಿಯರು:
ಸೋಷಿಯಲ್ ಮೀಡಿಯಾ ಕಂಪನಿಗಳಿಗೆ ಭಾರತ ಒಂದು ದೊಡ್ಡ ಮಾರುಕಟ್ಟೆ. ಆದರೆ, ಇಲ್ಲಿ ವ್ಯವಹಾರ ನಡೆಸುವುದು ಬಹಳ ಗೋಜಲಿನ ಸಂಗತಿಯೂ ಹೌದು ಎಂಬ ಅನಿಸಿಕೆಗಳಿವೆ.

"ಭಾರತೀಯ ಸಮಾಜ ಬಹಳ ಸಂಕೀರ್ಣ ಹಾಗೂ ವೈವಿಧ್ಯಮಯವಾಗಿದೆ. ಹಾಗೆಯೇ ಬಹಳ ಸೂಕ್ಷ್ಮವೂ ಹೌದು. ಯಾವ ವಿಷಯವೇ ಆಗಲೀ ಯಾರಿಗಾದರೊಬ್ಬರಿಗಾದರೂ ಘಾಸಿ ಮಾಡುತ್ತದೆ," ಎಂದು ಒಬ್ಬ ಉದ್ಯಮ ತಜ್ಞರು ತಿಳಿಸುತ್ತಾರೆ.
"ಇಲಾನ್ ಮಸ್ಕ್ ಅವರ ಪರಿಕಲ್ಪನೆಯ ವಾಕ್ ಸ್ವಾತಂತ್ರ್ಯವು ಪಾಶ್ಚಿಮಾತ್ಯ ದೃಷ್ಟಿಕೋನಕ್ಕೆ ಸಂಬದ್ಧವಾಗಿರುತ್ತದೆ. ಆದರೆ, ನಾವು ಭಾರತೀಯರು ಕಾಣುವ ರೀತಿಯ ವಾಕ್ ಸ್ವಾತಂತ್ರ್ಯವೇ ಬೇರೆಯದ್ದು," ಎಂದು ತಂತ್ರಜ್ಞಾನ ವಿಶ್ಲೇಷಕರೊಬ್ಬರು ಇಂಡಿಯಾಟೈಮ್ಸ್ಗೆ ಹೇಳಿದ್ದಾರೆ.
ಸಚಿವ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯೆ:
ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಖರೀದಿಸಿದ ಬೆಳವಣಿಗೆಯನ್ನು ಭಾರತ ಸರಕಾರ ಎಚ್ಚರದಿಂದ ಗಮನಿಸಿದೆ. ಕೇಂದ್ರ ಐಟಿ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ ಎಲಾನ್ ಮಸ್ಕ್ ಅವರಿಗೆ ಶುಭಾಶಯ ಹೇಳಿದ್ದಾರೆ. ಹಾಗೆಯೇ, ಭಾರತದಲ್ಲಿ ಕಾರ್ಯನಿರ್ವಹಿಸುವ ಯಾವುದೇ ಕಂಪನಿಗಳಿಂದ ಜವಾಬ್ದಾರಿತನ, ಸುರಕ್ಷತೆ ಮತ್ತು ವಿಶ್ವಾಸವನ್ನು ಸರಕಾರ ನಿರೀಕ್ಷಿಸುತ್ತದೆ. ಈ ನೀತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಭಾರತದಲ್ಲಿ ಒಂದು ಧರ್ಮದ ವಿರುದ್ಧ ಯಾರಾದರೂ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೆ ಕೊಟ್ಟರೆ ಆ ಸಮುದಾಯ ರೊಚ್ಚಿಗೆದ್ದು ಪ್ರತಿಭಟಿಸುತ್ತದೆ. ಈ ಸೋಷಿಯಲ್ ಮೀಡಿಯಾ ಪೋಸ್ಟ್ ಡಿಲೀಟ್ ಮಾಡುವವರೆಗೂ ಬಿಡುವುದಿಲ್ಲ. ಪೊಲೀಸ್ ಇಲಾಖೆ, ಸರಕಾರದಿಂದ ಇಂಥ ಹಲವು ಬೇಡಿಕೆಗಳು ಮತ್ತು ಒತ್ತಾಯಗಳು ನಿತ್ಯವೂ ವಿವಿಧ ಸೋಷಿಯಲ್ ಮೀಡಿಯಾಗೆ ಹೋಗುತ್ತಲೇ ಇರುತ್ತವೆ. ಸರಕಾರವನ್ನು ನಿಂದಿಸುವುದು, ಕೋಮುದಳ್ಳುರಿಗೆ ಕಾರಣವಾಗುವುದು, ಹಿಂಸಾಚಾರಕ್ಕೆ ಪ್ರೇರೇಪಿಸುವುದು ಹೀಗೆ ಹಲವು ಕಾರಣಗಳಿಗೆ ಸೋಷಿಯಲ್ ಮೀಡಿಯಾದ ಪೋಸ್ಟ್ಗಳನ್ನು ಸರಕಾರಿ ಅಧಿಕಾರಿಗಳು ಒತ್ತಾಯಪೂರ್ವಕವಾಗಿ ಡಿಲೀಟ್ ಮಾಡಿಸುತ್ತಿರುತ್ತಾರೆ.
ಹೀಗಾಗಿ, ಭಾರತದಂಥ ಸಂಕೀರ್ಣ ಮತ್ತು ಸೂಕ್ಷ್ಮ ಸಮಾಜದ ದೇಶದಲ್ಲಿ ಟ್ವಿಟ್ಟರ್ ಆಗಲೀ ಫೇಸ್ಬುಕ್ ಆಗಲೀ ನಿರ್ವಹಿಸುವುದು ಬಹಳ ಕಷ್ಟ. ಹಾಗಾಗಿಯೇ, ವಿವಿಧ ದೇಶಗಳ ಕಾನೂನುಗಳನ್ನ ಗಮನದಲ್ಲಿಟ್ಟುಕೊಂಡು ಸೋಷಿಯಲ್ ಮೀಡಿಯಾ ಕಂಪನಿಗಳು ಕಮ್ಯೂನಿಟಿ ಗೈಡ್ಲೈನ್ಸ್ ರೂಪಿಸುತ್ತವೆ. ಕೆಲ ಅಸಂಬದ್ಧವೆನಿಸುವ ಪೋಸ್ಟ್ಗಳನ್ನ ಯಾರು ಬೇಕಾದರೂ ಫ್ಲ್ಯಾಗ್ ಮಾಡುವ ಆಯ್ಕೆಯನ್ನು ಎಲ್ಲರಿಗೂ ನೀಡಲಾಗಿರುತ್ತದೆ.
(ಒನ್ಇಂಡಿಯಾ ಸುದ್ದಿ)
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications