ಕೊರೊನಾ: ಮಾಸ್ಕ್ ಧರಿಸುವಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ
ದುಬೈನಿಂದ ಭಾರತಕ್ಕೆ ವಾಪಸ್ ಆಗಿದ್ದ 64 ವರ್ಷದ ವ್ಯಕ್ತಿಗೆ ಕೋವಿಡ್-19 ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ವ್ಯಕ್ತಿ ಇಂದು (ಮಾ 17) ಮೃತಪಟ್ಟಿದ್ದಾನೆ. ಈ ಮೂಲಕ, ಭಾರತದಲ್ಲಿ ಕೊರೊನಾ ವೈರಸ್ ಮೂರು ಜನರನ್ನು ಬಲಿತೆಗೆದುಕೊಂಡಿದೆ.
Recommended Video
ಮಹಾರಾಷ್ಟ್ರದ ಇನ್ನೊಂದು ವಿದ್ಯಮಾನದಲ್ಲಿ, ಮಾರ್ಚ್ 14ರಂದು ಅಮೆರಿಕಾದಿಂದ ಮುಂಬೈಗೆ ಬಂದಿದ್ದ ಟೆಕ್ಕಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ಆ ಟೆಕ್ಕಿ ಜೊತೆ ವಾಸವಾಗಿದ್ದ ಪತ್ನಿ ಮತ್ತು ಮಗುವನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಪತ್ನಿ ಮತ್ತು ಮೂರು ವರ್ಷದ ಮಗು ಇಬ್ಬರಿಗೂ ಕೊರೊನಾ ಇರುವುದು ಖಚಿತವಾಗಿದೆ.
ಕೊರೊನಾ ವೈರಸ್ ನಿಂದಾಗಿ ಮಾಸ್ಕ್ ಮತ್ತು ಸ್ಯಾನಿಟೈಜರ್ ಗೆ ಭಾರೀ ಡಿಮಾಂಡ್ ಇರುವುದು ಗೊತ್ತಿರುವ ವಿಚಾರ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರಕಾರ, ಈ ಬಗ್ಗೆ ಪ್ರಕಟಣೆಯೊಂದನ್ನು ಹೊರಡಿಸಿದೆ.
ಮಾಸ್ಕ್ ಯಾವಾಗ ಧರಿಸಬೇಕು, ಎಲ್ಲರೂ ಮಾಸ್ಕ್ ಧರಿಸುವ ಅವಶ್ಯಕತೆಯಿದೆಯೇ, ಮಾಸ್ಕ್ ಧರಿಸುವಾಗ, ಪಾಲಿಸಬೇಕಾದ ನಿಯಮಗಳನ್ನು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಅದು ಹೀಗಿದೆ:

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರಕಾರ
ಇಲಾಖೆಯ ಪ್ರಕಟಣೆಯ ಪ್ರಕಾರ ಎಲ್ಲರೂ ಮಾಸ್ಕ್ ಧರಿಸುವ ಅವಶ್ಯಕತೆಯಿಲ್ಲ. ಕೆಮ್ಮು, ಜ್ವರ, ಉಸಿರಾಟದ ತೊಂದರೆ ಇದ್ದವರು ಮಾತ್ರ ಮಾಸ್ಕ್ ಧರಿಸಿದರೆ ಸಾಕು. ಮತ್ತು ಇಂತಹ ವ್ಯಕ್ತಿಗಳನ್ನು ನೋಡಿಕೊಳ್ಳುವ ರಕ್ಷಣಾ ತಂಡದವರು ಮಾತ್ರ ಮಾಸ್ಕ್ ಮೊರೆಹೋದರೆ ಸಾಕು.

ಮಾಸ್ಕ್ ನ ನೆರಿಗೆಗಳನ್ನು ಬಿಚ್ಚಿಡಬೇಕು. ಆ ನೆರಿಗೆಗಳು ಕೆಳಮುಖವಾಗಿರಬೇಕು
ಮಾಸ್ಕ್ ನ ನೆರಿಗೆಗಳನ್ನು ಬಿಚ್ಚಿಡಬೇಕು. ಆ ನೆರಿಗೆಗಳು ಕೆಳಮುಖವಾಗಿರಬೇಕು. ಆರು ಗಂಟೆಗಳ ನಂತರ ಮಾಸ್ಕ್ ಅನ್ನು ಬದಲಾಯಿಸಬೇಕು ಅಥವಾ ಮಾಸ್ಕ್ ತೇವವಾಗಿದ್ದಲ್ಲಿ ತಕ್ಷಣ ಬದಲಾಯಿಸಬೇಕು. ಮೂಗು, ಬಾಯಿ ಮತ್ತು ಗಲ್ಲವನ್ನು ಮುಚ್ಚುವ ಹಾಗೆ ಮಾಸ್ಕ್ ಕಟ್ಟಬೇಕು.

ಮಾಸ್ಕ್ ಧರಿಸಿದಾಗ ಕೈಯಿಂದ ಅದನ್ನು ಪದೇಪದೇ ಮುಟ್ಟಬಾರದು
ಮಾಸ್ಕ್ ನ ಎರಡೂ ಬದಿ ಯಾವುದೇ ಜಾಗವನ್ನು ಬಿಡಬಾರದು. ಒಂದು ಬಾರಿ ಉಪಯೋಗಿಸಿದ ಮಾಸ್ಕ್ ಅನ್ನು ಮತ್ತೊಮ್ಮೆ ಉಪಯೋಗಿಸಬಾರದು. ಮಾಸ್ಕ್ ಬಳಸಿದ ನಂತರ ಅದನ್ನು ಮುಚ್ಚಿದ ಕಸದ ಡಬ್ಬದಲ್ಲಿ ಹಾಕಬೇಕು. ಮಾಸ್ಕ್ ಧರಿಸಿದಾಗ ಕೈಯಿಂದ ಅದನ್ನು ಪದೇಪದೇ ಮುಟ್ಟಬಾರದು.

ಸಾಬೂನು ಅಥವಾ ಸ್ಯಾನಿಟೈಜರ್ ನಿಂದ ತೊಳೆದುಕೊಳ್ಳಬೇಕು
ಮಾಸ್ಕ್ ಅನ್ನು ಕುತ್ತಿಗೆಯ ಕೆಳಗೆ ತೂಗಿಬಿಡಬಾರದು. ಮಾಸ್ಕ್ ತೆಗೆದ ನಂತರ ಕೈಯನ್ನು ಸಾಬೂನು ಅಥವಾ ಸ್ಯಾನಿಟೈಜರ್ ನಿಂದ ತೊಳೆದುಕೊಳ್ಳಬೇಕು. ಮಾಸ್ಕ್ ನ ಹೊರಭಾಗ ಕಲುಷಿತವಾಗಿರುವುದರಿದ, ಹೊರಭಾಗವನ್ನು ಮುಟ್ಟಬಾರದು.
-
Pomegranate Juice Benefits: 6 ದಿನಗಳಲ್ಲಿ ಕಾಣುವ ಆರೋಗ್ಯ ಬದಲಾವಣೆಗಳು -
Lockdown: ಭಾರತದಲ್ಲಿ ಲಾಕ್ಡೌನ್ ಇಲ್ಲ: ವದಂತಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ -
ಮನೆಯಲ್ಲಿ ಕಸದ ಬುಟ್ಟಿ ಎಲ್ಲಿ ಇಡಬೇಕು? ಈ ವಾಸ್ತು ನಿಯಮಗಳು ತಿಳಿದುಕೊಳ್ಳಿ -
Top 3 Job Sectors: 2026ರಲ್ಲಿ ಯಾವ ಕ್ಷೇತ್ರ ಆಯ್ಕೆ ಮಾಡಬೇಕು? ಟಾಪ್ 3 ಉದ್ಯೋಗ ವಲಯಗಳು -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ












Click it and Unblock the Notifications