ಪ್ಲಾಸ್ಟಿಕ್ ಅಕ್ಕಿ ಪರೀಕ್ಷಿಸೋದು ಹೇಗೆ? ಇಲ್ಲಿವೆ 5 ಹಾದಿಗಳು
ತೆಲಂಗಾಣ, ಜೂನ್ 9: ಸದ್ಯಕ್ಕೆ ಎಲ್ಲೆಡೆ ಗುಲ್ಲೆದ್ದಿರುವ ಪ್ಲಾಸ್ಟಿಕ್ ಅಕ್ಕಿ ಮತ್ತು ಸಕ್ಕರೆಯ ಸುದ್ದಿ 'ಸುಳ್ಳು' ಎಂದು ತೆಲಂಗಾಣ ಸರ್ಕಾರ ಸ್ಪಷ್ಟಪಡಿಸಿದ್ದರೂ ಜನರಲ್ಲಿ ಮಾತ್ರ ಪ್ಲಾಸ್ಟಿಕ್ ಅಕ್ಕಿ-ಸಕ್ಕರೆಯ ಭಯ ಆರಿಲ್ಲ.
ತೆಲಂಗಾಣದ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಅಕ್ಕಿ ಮತ್ತು ಸಕ್ಕರೆಗಳು ಲಗ್ಗೆಯಿಟ್ಟಿವೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಕರ್ನಾಟಕದಲ್ಲೂ ಅದರು ಕುರಿತು ಗುಲ್ಲೆದ್ದಿತ್ತು. ಆದರೆ ಈ ಎಲ್ಲ ವದಂತಿಗಳೂ ಸುಳ್ಳು ಎಂದಿರುವ ತೆಲಂಗಾಣ ಸರ್ಕಾರ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದೆ.
ಇತ್ತೀಚೆಗೆ ಗದಗದ ಗೃಹಿಣಿಯೊಬ್ಬರು ಪ್ಲಾಸ್ಟಿಕ್ ಸಕ್ಕರೆಯ ಬಗ್ಗೆ ದೂರು ನೀಡಿದ್ದರು. ಈ ಸಂಬಂಧ, ಆಕೆ ಸಕ್ಕರೆ ಕೊಂಡ ದಿನಸಿ ಅಂಗಡಿಯ ಮುಂದೆ ಸಾರ್ವಜನಿಕರು ಪ್ರತಿಭಟನೆಯನ್ನೂ ಮಾಡಿದ್ದರು. ಪ್ಲಾಸ್ಟಿಕ್ ಅಕ್ಕಿ, ಸಕ್ಕರೆ, ಮೊಟ್ಟೆ ಕುರಿತು ದಿನೇ ದಿನೇ ಇಂಥ ಸುದ್ದಿ ಕೇಳಿಬರುತ್ತಿರುವುದರಿಂದ ನಮ್ಮ ಆರೋಗ್ಯದ ಕತೆ ಏನು ಎಂಬ ಚಿಂತೆ ಜನಸಾಮಾನ್ಯರಲ್ಲಿ ಕಾಡುತ್ತಿದೆ.
ಈ ವದಂತಿ ಎಲ್ಲ ಸುಳ್ಳು ಎಂದು ಹಲವು ಆರೋಗ್ಯ ತಜ್ಞರೇ ಹೇಳಿದ್ದರೂ ಜನರು ಅಷ್ಟು ಬೇಗನೆ ಅದನ್ನು ನಂಬುವ ಸ್ಥಿತಿಯಲ್ಲಿಲ್ಲ. ಅದಕ್ಕೆಂದೇ ಇದೀಗ ಹಲವರು ಕೊಂಡು ತಂದ ಅಕ್ಕಿಯನ್ನು ಮನೆಯಲ್ಲಿಯೇ ಪರೀಕ್ಷೆ ಮಾಡಿ ಪ್ಲಾಸ್ಟಿಕ್ ಅಕ್ಕಿ, ಹೌದೋ, ಅಲ್ಲವೋ ಎಂದು ತೀರ್ಮಾನಿಸುತ್ತಿದ್ದಾರೆ.
ಹಾಗೊಮ್ಮೆ ನಿಮಗೂ ಪ್ಲಾಸ್ಟಿಕ್ ಅಕ್ಕಿಯ ಭಯವಿದ್ದಲ್ಲಿ ಅದನ್ನು ಸ್ವತಃ ಪರೀಕ್ಷಿಸಿಕೊಳ್ಳುವುದಕ್ಕೂ ಸಾಧ್ಯವಿದೆ. ಅದಕ್ಕಾಗಿ ಈ ಐದು ಮಾರ್ಗಗಳನ್ನು ಅನುಸರಿಸಿ:

ಫಂಗಸ್ ಸೋಂಕು ಬಂದರೆ
ಅಕ್ಕಿಯನ್ನು ಬೇಯಿಸಿ ಎರಡು ದಿನಗಳ ಕಾಲ ಒಂದು ಪ್ಲಾಸ್ಟಿಕ್ ಬಾಟಲಿಯಲ್ಲಿಡಿ. ಎರಡು ದಿನದ ನಂತರವೂ ಅದಕ್ಕೆ ಫಂಗಸ್ ಸೋಂಕದಿದ್ದರೆ ಅದು ಪ್ಲಾಸ್ಟಿಕ್ ಅಕ್ಕಿ ಎಂಬುದು ದಿಟ.

ಬಿಸಿ ಎಣ್ಣೆ ಹಾಕಿ
ಅಕ್ಕಿಯ ಮೇಲೆ ಬಿಸಿ ಬಿಸಿ ಎಣ್ಣೆಯನ್ನು ಸ್ವಲ್ಪ ಹಾಕಿ. ಅದನ್ನು ಪ್ಲಾಸ್ಟಿಕ್ ಅಕ್ಕಿಯೇ ಆಗಿದ್ದರೆ ಕರಗುತ್ತದೆ.

ಅಕ್ಕಿಯನ್ನು ಸುಟ್ಟು ನೋಡಿ
ಅಕ್ಕಿಯನ್ನು ಒಮ್ಮೆ ಸುಟ್ಟು ನೋಡಿ, ಪ್ಲಾಸ್ಟಿಕ್ಕಿನದೇ ಆಗಿದ್ದರೆ ಅದು ಸುಟ್ಟು, ವಾಸನೆ ಬರುತ್ತದೆ.

ದಪ್ಪ ಪದರ ಬಂದರೆ...
ಅಕ್ಕಿಯನ್ನು ಬೇಯಿಸಿ, ಅದು ಪ್ಲಾಸ್ಟಿಕ್ಕಿನದೇ ಆಗಿದ್ದರೆ ಅನ್ನದ ಮೇಲೆ ದಪ್ಪ ಪದರವಿರುತ್ತದೆ.

ನೀರಿನಲ್ಲಿ ತೇಲಿದರೆ...
ಒಂದು ಬಾಟಲ್ ನೀರಿನಲ್ಲಿ ಅಕ್ಕಿಯನ್ನು ಹಾಕಿ ಕೆಲ ಸಮಯದ ನಂತರ ಅಕ್ಕಿ ಬಾಟಲಿಯ ಮೇಲ್ಭಾಗಕ್ಕೆ ಬಂದರೆ ಅದು ಪ್ಲಾಸ್ಟಿಕ್ ಅಕ್ಕಿ. ನೈಸರ್ಗಿಕ ಅಕ್ಕಿ ನೀರಿನಲ್ಲಿ ತೇಲುವುದಿಲ್ಲ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications