ಹೆಂಡತಿ ನೋಡಲು ಬಂದು ಬಲಿಯಾದ ಉಗ್ರ ಅಬು ದುಜಾನ!
ಜಮ್ಮು ಮತ್ತು ಕಾಶ್ಮೀರ, ಆಗಸ್ಟ್ 1: ಲಷ್ಕರ್ ಇ ತಯ್ಯಬಾದ ಚೀಫ್ ಕಮಾಂಡರ್ ಅಬು ದುಜಾನ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾನೆ. ವಿಧ್ವಂಸಕ ಕೃತ್ಯಗಳನ್ನು ಮಾಡುವುದರಲ್ಲಿ ದುಜಾನ ಎತ್ತಿದ ಕೈ. ಇಂಥಹ ಕ್ರೂರ ಕಿರಾತಕ ಉಗ್ರನನ್ನು ಸೇನೆ ತನ್ನ ಬಲೆಯೊಳಕ್ಕೆ ಕೆಡವಿದ್ದೇ ಒಂದು ಕುತೂಹಲಕಾರಿ ಕತೆ.
ವರದಿಗಳ ಪ್ರಕಾರ ದುಜಾನ ತನ್ನ ಹೆಂಡತಿಯನ್ನು ಭೇಟಿಯಾಗಲು ಪುಲ್ವಾಮದ ಮನೆಯೊಂದಕ್ಕೆ ಬಂದಿದ್ದ. ಹಾಗೆ ನೋಡಿದರೆ ಆತ ತನ್ನ ಹೆಂಡತಿಯನ್ನು ಭೇಟಿಯಾಗುತ್ತಿರುವುದು ಇದೇ ಮೊದಲೇನೂ ಅಲ್ಲ. ಆಗಾಗ ಆತ ತನ್ನ ಹೆಂಡತಿಯನ್ನು ಸಂಧಿಸಲು ಬರುತ್ತಿದ್ದ ವಿಷಯ ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ ಗೊತ್ತಿತ್ತು.

ಈ ಹಿಂದೆ ಆತ ಎರಡು ಬಾರಿ ಈ ರೀತಿ ಬಂದಾಗ ಆತನ ಚಲನವಲನಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಆತ ಬರುವ ಸಮಯ, ಮೊದಲಿಗೆ ಬಂದು ಇರುತ್ತಿದ್ದ ಜಾಗ, ಅಲ್ಲಿನ ವಾತವರಣ ಈ ಎಲ್ಲದರ ಮೇಲೆಯೂ ನಿಗಾ ಇಡಲಾಗಿತ್ತು.
ಇದೇ ಸಂದರ್ಭದಲ್ಲಿ ಸೋಮವಾರ ದುಜಾನ ಹಕ್ರಿಪೋರಾದ ವಸತಿ ಸಂಕೀರ್ಣಕ್ಕೆ ಬಂದಿದ್ದ. ಈ ವಾಸನೆ ಪೊಲೀಸರ ಮೂಗಿಗಿಗೆ ಬಡಿದಿತ್ತು. ಮನೆಯನ್ನು ಸುತ್ತುವರಿದ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮರೆಯಲ್ಲಿ ನಿಂತು ಸುಮಾರು ಎರಡು ಗಂಟೆಗಳ ಕಾಲ ಎಲ್ಲವನ್ನೂ ಗಮನಿಸುತ್ತಾ ಹೆಚ್ಚಿನ ಪಡೆಗಳಿಗಾಗಿ ಕಾಯುತ್ತಾ ನಿಂತಿದ್ದರು.
ಯಾವಾಗ ಸ್ಥಳಕ್ಕೆ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ವಿಶೇಷ ಕಾರ್ಯಾಚರಣೆ ಪಡೆಗಳ ಪ್ರವೇಶವಾಯಿತೋ ಇಡೀ ಪ್ರದೇಶವನ್ನು ಸುತ್ತುವರಿಯಲಾಯಿತು. ಇವರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆ, 55 ರಾಷ್ಟ್ರೀಯ ರೈಫಲ್ಸ್ ನ ಪಡೆಗಳು ಸಾಥ್ ನೀಡಿದವು. ಎಲ್ಲಾ ಆಗಗುವಷ್ಟರಲ್ಲಿ ಮುಂಜಾನೆ ಗಂಟೆ 4.30.

ಅಷ್ಟೊತ್ತಿಗೆ ಗುಪ್ತಚರ ಇಲಾಖೆಯಿಂದ ಸ್ಥಳದಲ್ಲಿ ದುಜಾನ ಮತ್ತು ಆತನ ಸಹಚರರು ಇರುವ ಮಾಹಿತಿ ಬಂದು ಖಚಿತಪಟ್ಟಿತು. ಅಲ್ಲಿಂದ ನೇರ ಕಾರ್ಯಾಚರಣೆ ಆರಂಭವಾಯಿತು.
ಉಗ್ರರು ವಸತಿ ಸಂಕೀರ್ಣವೊಂದರಲ್ಲಿ ಅಡಗಿ ಕುಳಿತಿದ್ದರಿಂದ ಭದ್ರತಾ ಪಡೆಗಳು ಒಳಗೆ ನುಗ್ಗಲೇ ಬೇಕಾಗಿತ್ತು. ಬೇರೆ ಆಯ್ಕೆ ಇರಲಿಲ್ಲ. ಕೊನೆಗೆ ಒಳ ನುಗ್ಗಿ ಉಗ್ರರನ್ನು ಸೈನಿಕರು ಹೊಡೆದು ಹಾಕಿದರು.
ಅಂತಿಮವಾಗಿ ಅಬು ದುಜಾನ ಮತ್ತು ಆತನ ಸಹಚರರು ಸಾವನ್ನಪ್ಪಿರುವುದಾಗಿ ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ಎಸ್.ಪಿ ವಾಯಿದ್ ಖಚಿತಪಡಿಸಿದರು. ಹೀಗೆ ಸ್ಥುರದ್ರೂಪಿ ತರುಣ, ಇನ್ನೂ 30ರ ಹರೆಯ ದಾಟದ ಉಗ್ರ ಅಬು ದುಜಾನಾ ಸಾವನ್ನಪ್ಪಿದ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications