ಹಿಜಾಬ್ ಧರಿಸಿದ ಮಹಿಳೆಯನ್ನೇ ಪ್ರಧಾನಿ ಸ್ಥಾನದಲ್ಲಿ ನೋಡುವ ಆಸೆ; ಓವೈಸಿ ಹೇಳಿಕೆಗೆ ಬಿಜೆಪಿ ತಿರುಗೇಟು
ವಿಜಯಪುರ, ಅಕ್ಟೋಬರ್ 26: ಹಿಜಾಬ್ ಧರಿಸಿದ ಮಹಿಳೆಯನ್ನೇ ಭಾರತದ ಪ್ರಧಾನಮಂತ್ರಿಯಾಗಿ ನೋಡುವುದಕ್ಕೆ ಬಯಸುವುದಾಗಿ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ನೀಡಿದ ಹೇಳಿಕೆಯನ್ನು ಬಿಜೆಪಿ ಗೇಲಿ ಮಾಡಿದೆ.
ಕಳೆದ ಮಂಗಳವಾರ ವಿಜಯಪುರದಲ್ಲಿ ಮಾತನಾಡಿದ ಅಸಾದುದ್ದೀನ್ ಓವೈಸಿ, ಬಿಜೆಪಿ ಜಾತ್ಯತೀತತೆಯನ್ನು ತೊಡೆದುಹಾಕಲು ಬಯಸುತ್ತದೆ ಎಂದು ಆರೋಪಿಸಿದ್ದರು. ಅಲ್ಲದೇ ದೇಶದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುವ ಸಿದ್ದಾಂತಕ್ಕೆ ವಿರುದ್ಧವಾಗಿದೆ ಎಂದು ದೂಷಿಸಿದ್ದರು.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಇಲ್ಲ: ಓವೈಸಿ
ಅಸಾದುದ್ದೀನ್ ಓವೈಸಿ ನೀಡಿದ ಹೇಳಿಕೆಗೆ ಬಿಜೆಪಿಯ ಶೆಹಜಾದ್ ಪೂನವಾಲಾ ಪ್ರತಿಕ್ರಿಯೆ ನೀಡಿದ್ದಾರೆ. "ಹಿಜಾಬ್ ಧರಿಸಿದ ಮಹಿಳೆಯೇ ಭಾರತದ ಪ್ರಧಾನಿಯಾಗಬೇಕೆಂದು ಓವೈಸಿ ಜೀ ಆಶಿಸುತ್ತಿದ್ದಾರೆ! ಸರಿ, ಸಂವಿಧಾನವು ಯಾರನ್ನೂ ನಿಷೇಧಿಸುವುದಿಲ್ಲ, ಆದರೆ ಹಿಜಾಬ್ ಧರಿಸಿದ ಮಹಿಳೆಯು ಎಐಎಂಐಎಂ ಅಧ್ಯಕ್ಷರಾಗುವುದು ಯಾವಾಗ ಎಂದು ನಮಗೆ ತಿಳಿಸಿ. ನಾವು ಅದರೊಂದಿಗೆ ಪ್ರಾರಂಭಿಸೋಣ?," ಎಂದು ತಿರುಗೇಟು ಕೊಟ್ಟಿದ್ದಾರೆ.
ಸುಪ್ರೀಂ ಕೋರ್ಟ್ನ ತೀರ್ಪು ಉಲ್ಲೇಖಿಸಿದ ಓವೈಸಿ:
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿನ ವಿಭಜನೆಯ ತೀರ್ಪನ್ನು ಅಸಾದುದ್ದೀನ್ ಓವೈಸಿ ಉಲ್ಲೇಖಿಸಿದರು. ಮುಸ್ಲಿಂ ಹೆಣ್ಣುಮಕ್ಕಳು ಓದುವುದು ಅವಶ್ಯಕ ಮತ್ತು ಅವರು ಹಿಜಾಬ್ ಧರಿಸಲು ಮತ್ತು ಅಧ್ಯಯನಕ್ಕೆ ಹೋಗಲು ಬಯಸಿದರೆ ಅದು ಸಮಸ್ಯೆಯಲ್ಲ ಎಂದು ನ್ಯಾಯಾಧೀಶರು ಹೇಳಿದರು. ಇದು ಅತ್ಯಂತ ಸಕಾರಾತ್ಮಕ ತೀರ್ಪು ಎಂದು ಎಐಎಂಐಎಂ ಮುಖ್ಯಸ್ಥರು ಹೇಳಿದ್ದರು.
ಹಲಾಲ್ ಮಾಂಸ, ಮುಸ್ಲಿಮರ ಟೋಪಿ ಮತ್ತು ಅವರ ಗಡ್ಡದಿಂದ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಬಿಜೆಪಿ ಭಾವಿಸುತ್ತದೆ. ನಮ್ಮ ಆಹಾರ ಪದ್ಧತಿಯಲ್ಲಿ ಅವರಿಗೆ ಸಮಸ್ಯೆಗಳಿವೆ. ಪಕ್ಷವು ಮುಸ್ಲಿಂ ಅಸ್ಮಿತೆಗೆ ವಿರುದ್ಧವಾಗಿದೆ ಎಂದು ಎಐಎಂಐಎಂ ಮುಖ್ಯಸ್ಥರು ಉಲ್ಲೇಖಿಸಿದ್ದರು.
ಪ್ರಧಾನಿ ಮಾತುಗಳು ಖಾಲಿ ವಾಕ್ಚಾತುರ್ಯ:
"ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್" ಎಂಬ ಪ್ರಧಾನಿ ಮಾತುಗಳು ಖಾಲಿ ವಾಕ್ಚಾತುರ್ಯವಾಗಿದೆ. ಬಿಜೆಪಿಯ ನಿಜವಾದ ಅಜೆಂಡಾ ಭಾರತದ ವೈವಿಧ್ಯತೆ ಮತ್ತು ಮುಸ್ಲಿಂ ಅಸ್ಮಿತೆಯನ್ನು ಕೊನೆಗೊಳಿಸುವುದಾಗಿದೆ" ಎಂದು ಓವೈಸಿ ದೂಷಿಸಿದ್ದಾರೆ.