ಪಂಜಾಬಿನ ಸಿಂಹಿಣಿ ಸನ್ನಿ ಲಿಯೋನ್ ಚಿತ್ರಕ್ಕೆ ಭೀತಿ!
ಲೂಧಿಯಾನ, ಫೆ. 03: ಪಂಜಾಬಿನ ಲೂಧಿಯಾನ ಬುಧವಾರ ಎರಡನೇ ಬಾರಿಗೆ ಸುದ್ದಿಮನೆ ಕದ ತಟ್ಟಿದೆ. ಹಾಕಿ ಇಂಡಿಯಾ ನಾಯಕ ಸರ್ದಾರ್ ಸಿಂಗ್ ಮೇಲಿನ ರೇಪ್ ಕೇಸ್ ಆದ ಮೇಲೆ ಬಾಲಿವುಡ್ 'ಬೇಬಿ ಡಾಲ್' ಸನ್ನಿ ಲಿಯೋನ್ ವಿರುದ್ಧದ ಪ್ರತಿಭಟನೆಯ ಸುದ್ದಿ ಬಂದಿದೆ.
ಸನ್ನಿ ಲಿಯೋನ್ ಅಭಿನಯದ 'ಮಸ್ತಿಝಾದೆ' ಚಿತ್ರ ಪ್ರದರ್ಶನ ವಿರೋಧಿಸಿ ಬುಧವಾರ (ಫೆಬ್ರವರಿ 03) ದಂದು ಹಿಂದೂ ನ್ಯಾಯ ಪೀಠದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.[ಹಾಕಿ ಇಂಡಿಯಾ ಕ್ಯಾಪ್ಟನ್ ಸರ್ದಾರ್ ಮೇಲೆ ರೇಪ್ ಕೇಸ್]

'ಮಸ್ತಿಝಾದೆ ಚಿತ್ರದ ಟ್ರೈಲರ್ ನೋಡೋಕೆ ಆಗುವುದಿಲ್ಲ. ಅದರಲ್ಲೂ ನಟಿ ಸನ್ನಿ ಲಿಯೋನ್ ವೈಯ್ಯಾರ, ಬಳುಕಾಟ ನಮ್ಮ ಯುವ ಜನತೆ ದಿಕ್ಕು ತಪ್ಪಿಸುತ್ತಿದೆ. ಈ ಚಿತ್ರದಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತಿದೆ. ಸಮಾಜದ ಆರೋಗ್ಯ ಹದಗೆಡಿಸುವ ಇಂಥ ಚಿತ್ರಗಳ ಪ್ರದರ್ಶನಕ್ಕೆ ಅನುಮತಿ ನೀಡುವುದಿಲ್ಲ. ಅವಾಚ್ಯ ಶಬ್ದ ಹಾಗೂ ಅಶ್ಲೀಲ ದೃಶ್ಯಗಳಿರುವ ಇಂಥ ಚಿತ್ರವನ್ನು ಸೆನ್ಸಾರ್ ಮಂಡಳಿ ಹೇಗೆ ಪಾಸ್ ಮಾಡಿದರೋ ಗೊತ್ತಿಲ್ಲ' ಎಂದು ಕಾರ್ಯಕರ್ತರು ಪ್ರಶ್ನಿಸಿದ್ದಾರೆ.
ಮುಖ್ಯವಾಗಿ ಸನ್ನಿ ಲಿಯೋನ್ ಹಾಗೂ ನಟ ತುಷಾರ್ ಕಪೂರ್ ವಿರುದ್ಧ ಘೋಷಣೆಗಳು ಕೇಳಿಬಂದಿದೆ. ಕೇಂದ್ರ ಸರ್ಕಾರ ಈ ವಿಷಯದಲ್ಲಿ ಮುಂದೆ ಬಂದು ಚಿತ್ರವನ್ನು ದೇಶದೆಲ್ಲೆಡೆ ನಿಷೇಧವಾಗುವಂತೆ ಮಾಡುವ ತನಕ ನಮ್ಮ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.
ಸೆನ್ಸಾರ್ ಬೋರ್ಡ್ ನಿಂದ 'ಎ' ಪ್ರಮಾಣ ಪತ್ರ ಪಡೆದು ಜನವರಿ 29, 2016ರಂದು ದೇಶದೆಲ್ಲೆಡೆ ಬಿಡುಗಡೆಯಾಗಿರುವ ವಯಸ್ಕರ ಕಾಮಿಡಿ ಚಿತ್ರ 'ಮಸ್ತಿಝಾದೆ' ಈಗಾಗಲೇ 20ಕೋಟಿ ರು ಗೂ ಅಧಿಕ ಮೊತ್ತ ಬಾಚಿಕೊಂಡಿದೆ.
ಚಿತ್ರದ ಪೋಸ್ಟರ್, ಟ್ರೈಲರ್ ರಿಲೀಸ್ ಆದ ದಿನದಿಂದ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಸೆನ್ಸಾರ್ ಮಂಡಳಿಯಲ್ಲೂ ಕೂಡಾ ಎರಡು ಬಾರಿ ರಿಜೆಕ್ಟ್ ಆಗಿತ್ತು. ಸೆಂಟರ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಟ್ ಅಥವಾ ಸಂಕ್ಷಿಪ್ತವಾಗಿ ಸೆನ್ಸಾರ್ ಬೋರ್ಡ್ ನ ಎರಡು ಸಮಿತಿಗಳಿಂದ ಮಸ್ತಿಝಾದೆ ತಿರಸ್ಕರಿಸಲ್ಪಟ್ಟು ನಂತರ ಎ ಸರ್ಟಿಫಿಕೇಟ್ ಪಡೆದು ತೆರೆ ಕಂಡಿದೆ.(ಒನ್ ಇಂಡಿಯಾ ಸುದ್ದಿ)
-
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!












Click it and Unblock the Notifications