ಧಿಕ್ಕರಿಸುವ ಮಕ್ಕಳನ್ನೇ ಮುದ್ದಿಸುವ ಹುಚ್ಚು ಆಸಾಮಿ ಅಪ್ಪ!
ಅಪ್ಪ ಅಂದ್ರೆ ಹಾಗೇ. ಆಕಾಶಕ್ಕೂ ಮಿಗಿಲಾದವನು. ಅನುಭವದ ಖನಿ, ಸಾಂತ್ವನದ ಗಣಿ. ಬಡತನ, ಬೇಸರ, ಕೊರಗು, ಅವಮಾನ ಎಲ್ಲವನ್ನೂ ತನ್ನ ಜೋಳಿಗೆಯೊಳಗೇ ಬಚ್ಚಿಟ್ಟು ಮಕ್ಕಳ ಮುಂದೆ ಮನಸಾರೆ ನಕ್ಕವನು. ಆತ ಫಲಾಪೇಕ್ಷೆಯಿಲ್ಲದೆ ಮೊಗೆ ಮೊಗೆದು ಕೊಟ್ಟ ಪ್ರೀತಿಯನ್ನು ಲೆಕ್ಕವಿಟ್ಟವರ್ಯಾರು?
ಪ್ರತಿವರ್ಷ ಜೂನ್ ತಿಂಗಳ ಮೂರನೇ ಭಾನುವಾರ( ಈ ಬಾರಿ ಜೂನ್ 17) ವನ್ನು ಜಗತ್ತಿನಾದ್ಯಂತ ಅಪ್ಪಂದಿರ ದಿನವನ್ನಾಗಿ ಆಚರಿಸುತ್ತಾರಂತೆ. ಅಪ್ಪಂಗೆ ಈ ವಿಷಯ ಗೊತ್ತೋ ಇಲ್ಲವೋ! 'ಅಪ್ಪತನ'ವೆಂಬ ಆಕಾಶದಂಥ ಜವಾಬ್ದಾರಿಯನ್ನು ಹೊತ್ತ ಅಪ್ಪಂಗೆ ತನಗಾಗಿಯೇ ಒಂದು ದಿನವಿದೆ ಎಂದು ಗೊತ್ತಿಲ್ಲದಿದ್ದರೆ ಅಚ್ಚರಿಯೇನಿಲ್ಲ!
ಮಗು ತೊದಲು ಮಾತಲ್ಲಿ ಅಪ್ಪ ಎಂದಾಗ, ಮೊದಲ ಹೆಜ್ಜೆ ಇಟ್ಟಾಗ, ಮಡಿಲಲ್ಲಿ ಬೆಚ್ಚಗೆ ಮಲಗಿದಾಗ, ಮೊದಲ ದಿನ ಶಾಲೆಗೆ ಹೋದಾಗ, ಕೆಲಸ ಹಿಡಿದಾಗ... ಮನಸ್ಸಲ್ಲಿ ಹುಟ್ಟಿದ ಸಂಭ್ರಮ, ಹೆಮ್ಮೆಯನ್ನೆಲ್ಲ ಎಂದೂ ವ್ಯಕ್ತಪಡಿಸದೆ ನಿರ್ಲಪ್ತಮೂರ್ತಿಯಾಗಿಯೇ ಉಳಿದುಬಿಡುವವನು ಅಪ್ಪ!

ಮುಗುಳ್ನಕ್ಕು ಸುಮ್ಮನಾಗುವ ಬುದ್ಧ ಈ ಅಪ್ಪ
ಹೆಗಲೆತ್ತರಕ್ಕೆ ಬೆಳೆದ ಮಗ, 'ನೀನು ಹಳೇ ಕಾಲದೋನು. ನಿಂಗೇನು ಗೊತ್ತು?' ಎಂದು ಕೇಳಿದಾಗಲೂ ಮುಗುಳ್ನಕ್ಕು ಸುಮ್ಮನಾಗುವ ಬುದ್ಧ ಈ ಅಪ್ಪ! ಅಪ್ಪಂಗಾಗಿ ಮಗ ವೃದ್ಧಾಶ್ರಮ ಹುಡುಕಿದಾಗಲೂ ಹಣೆಯ ಮೇಲೆ ಗೆರೆಯೇ ಮೂಡದಷ್ಟು ಸಹಜವಾಗಿ ಮಗನ ನಿಲುವನ್ನು ಸ್ವೀಕರಿಸಿದವನು ಅಪ್ಪ!

ಏಕಾಂಗಿಯಾಗಿ ಬಿಕ್ಕುವವನು ಅಪ್ಪ!
ಕಲಿತ ಮಗಳು ಬಂದು ಆಸ್ತಿಯಲ್ಲಿ ಪಾಲು ಕೇಳಿದಾಗಲೂ ಕಣ್ಮುಚ್ಚಿ, 'ಸರಿ' ಎಂದವನು ಅಪ್ಪ! ಉಣ್ಣುವುದಕ್ಕೆ ಅನ್ನವಿಲ್ಲದಿದ್ದರೂ ಮಕ್ಕಳ ಮುಂದೆ ಕೈಚಾಚದ ಸ್ವಾಭಿಮಾನಿ ಅಪ್ಪ! ಮಗಳು ಮದುವೆಯಾಗಿ ಗಂಡನ ಮನೆಗೆ ಹೊರಟರೆ ಕಣ್ಣೀರ ಕೋಡಿಯಾಗುವ ಅಮ್ಮನನ್ನು ಧೈರ್ಯವಾಗಿ ಸಂತೈಸುವವನು ಅಪ್ಪ. ಮಗಳು ಹೋದ ದಾರಿಯನ್ನೇ ನೋಡುತ್ತ, ಯಾರು ಇಲ್ಲದಾಗ ಬಿಕ್ಕುವವನೂ ಇದೇ ಅಪ್ಪ!

ಹುಚ್ಚು ಆಸಾಮಿ ಈ ಅಪ್ಪ!
ಅಪ್ಪನ ವಿರೋಧದ ನಡುವೆಯೂ ತಮ್ಮಿಷ್ಟದ ಬದುಕನ್ನೇ ಆಯ್ಕೆ ಮಾಡಿಕೊಂಡ ಮಕ್ಕಳನ್ನು ಎಂದಿಗೂ ದ್ವೇಷದಿಂದ ನೋಡದವನು ಅಪ್ಪ. ಜೀವನ ಹಿಮ್ಮುಖವಾಗಿ ನಡೆಯುವುದಿಲ್ಲವಲ್ಲ ಎಂದು ತನಗೆ ತಾನೇ ಸಾಂತ್ವನ ಹೇಳಿಕೊಂಡವನು! ತನ್ನಿಷ್ಟ ಮೀರಿ ಬದುಕು ಕಟ್ಟಕೊಂಡ ಮಕ್ಕಳು, ತನ್ನನ್ನು ಒಂಟಿಯಾಗಿ ತೊರೆದು ಹೋದಾಗಲೂ ಅದೇ ನಿರ್ಲಿಪ್ತ ಮುಖಭಾವದಲ್ಲೇ ಉಳಿದವನು ಅಪ್ಪ! ಅದೇ ಮಕ್ಕಳು ಕಷ್ಟದಲ್ಲಿದ್ದಾರೆ ಎಂದಾಗ ಸವೆದ ಚಪ್ಪಲಿಯಲ್ಲೇ ಓಡೋಡಿ ಬರುವ ಹುಚ್ಚು ಆಸಾಮಿ ಈ ಅಪ್ಪ!

'ಅಪ್ಪಂದಿರ ದಿನದ ಶುಭಾಶಯಗಳು
ಪುಸ್ತಕ, ಶಾಲೆ ಯಾವುದೂ ಕಲಿಸಲಾಗದ ಬದುಕಿನ ಪಾಠವನ್ನು ತನ್ನ ನಡೆ-ನುಡಿಯಲ್ಲೇ ತೋರಸಿಕೊಟ್ಟವನು ಅಪ್ಪ. ಮಕ್ಕಳು ಅಪ್ಪನಿಗೆ ಮಾನಸಿಕವಾಗಿ ಅದೆಷ್ಟು ಪೆಟ್ಟುಕೊಟ್ಟರೂ ಅವನ್ನೆಲ್ಲ ತನ್ನ ಹೊಟ್ಟೆಗೆ ಹಾಕಿಕೊಂಡು ಕ್ಷಮಿಸಿಬಿಡುವ ಕ್ಷಮಯಾಧರಿತ್ರಿ ಹಾಗೆ ಈ ಅಪ್ಪ. ತನ್ನ ಪ್ರತಿ ನಡೆಯಲ್ಲೂ, ನುಡಿಯಲ್ಲೂ ಮಹೋನ್ನತ ಸಂದೇಶವನ್ನೇ ಕೊಟ್ಟು ಪ್ರತಿಯೊಬ್ಬರ ಬದುಕಿನ ಜೀವಂತ ಪವಾಡವಾಗಿರುವ ಎಲ್ಲ ಅಪ್ಪಂದಿರಿಗೂ ''ಅಪ್ಪಂದಿರ ದಿನದ ಶುಭಾಶಯಗಳು"
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications