ಕಿರಿಕ್ ವಿಮಾನ ಪ್ರಯಾಣಿಕರಿಗೆ ಇನ್ಮುಂದೆ 2 ವರ್ಷ 'ಹಾರಾಟ ನಿಷೇಧ'
ನವದೆಹಲಿ, ಸೆಪ್ಟೆಂಬರ್ 8: ವಿಮಾನಯಾನ ಸಂಸ್ಥೆಗಳ ಸಿಬ್ಬಂದಿಗಳ ಮೇಲೆ ನಡೆದ ಸರಣಿ ದೌರ್ಜನ್ಯ ಘಟನೆಗಳ ನಂತರ ಇದೀಗ ಕಿರಿಕ್ ಪ್ರಯಾಣಿಕರಿಗೆ ಹಾರಾಟ ನಿಷೇಧ ವಿಧಿಸಲು ವಿಮಾನಯಾನ ಸಚಿವಾಲಯ ನಿರ್ಧರಿಸಿದೆ. ಈ ಸಂಬಂಧ ಇಂದು ಹಾರಾಟ ನಿಷೇಧದ ಮಾರ್ಗಸೂಚಿಯನ್ನು ಸಚಿವಾಲಯ ಬಿಡುಗಡೆ ಮಾಡಿದೆ.
ಇದು ಭಾರತದ ಮೊದಲ ನೋ ಫ್ಲೈ ಲಿಸ್ಟ್ ಮಾರ್ಗಸೂಚಿಯಾಗಿದೆ. ಮಾರ್ಗಸೂಚಿ ಬಿಡುಗಡೆ ಮಾಡಿದ ನಾಗರೀಕ ವಿಮಾನಯಾನ ರಾಜ್ಯ ದರ್ಜೆ ಸಚಿವ ಜಯಂತ್ ಸಿನ್ಹಾ, ಪ್ರಯಾಣಿಕರ ಸುರಕ್ಷತೆಯ ಕಾರಣಕ್ಕೆ ಈ ರೀತಿಯ ಪಟ್ಟಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಪ್ರಯಾಣಿಕರ ಅಶಿಸ್ತಿನ ವರ್ತನೆಗೆ ಅನುಸಾರವಾಗಿ ಈ ನಿಯಮಾವಳಿಗಳ ಪ್ರಕಾರ ಶಿಕ್ಷೆ ನೀಡಲಾಗುತ್ತದೆ. ಒಟ್ಟು ಮೂರು ಹಂತದ ನೋ ಫ್ಲೈ ಲಿಸ್ಟ್ ಈ ನಿಯಮಾವಳಿಯಲ್ಲಿದೆ.
ಹಂತ 1 : ಮೌಖಿಕ ಅಶಿಸ್ತಿನ ವರ್ತನೆಗಳು; ಕೀಳು ಭಾಷೆಯಲ್ಲಿ ಬೈಯುವುದು ಇತ್ಯಾದಿ. ಈ ರೀತಿಯ ನಡವಳಿಕೆಗೆ ಮೂರು ತಿಂಗಳವರೆಗೆ ಹಾರಾಟ ನಿಷೇಧ ವಿಧಿಸಬಹುದಾಗಿದೆ.
ಹಂತ 2: ದೈಹಿಕ ದೌರ್ಜನ್ಯಗಳು; ಹಲ್ಲೆ ಮಾಡುವುದು, ಹಲ್ಲೆಗೆ ಯತ್ನಿಸುವುದು, ತಳ್ಳುವುದು, ಹೊಡೆಯುವುದು ಇತ್ಯಾದಿ. ಈ ರೀತಿಯ ನಡವಳಿಕೆಗಳಿಗೆ 6 ತಿಂಗಳವರೆಗೆ ಹಾರಾಟ ನಿಷೇಧ ಹೇರಲು ಹೊಸ ನಿಯಮಾವಳಿಗಳಲ್ಲಿ ಅವಕಾಶವಿದೆ.
ಹಂತ 3: ಜೀವ ಬೆದರಿಕೆಯ ನಡವಳಿಕೆಗಳು; ಇದರಡಿಯಲ್ಲಿ ಗಂಭೀರವಾಗಿ ಹಲ್ಲೆ ಮಾಡುವುದು, ಜೀವ ಬೆದರಿಕೆ ಹಾಕುವುದು, ವಿಮಾನಯಾನ ಸಂಸ್ಥೆಯ ವಸ್ತುಗಳಿಗೆ ಹಾನಿ ಮಾಡುವಂಥ ನಡವಳಿಕೆಗಳನ್ನು ಪರಿಗಣಿಸಲಾಗುತ್ತದೆ. ಈ ರೀತಿಯ ಕೃತ್ಯಗಳಿಗೆ ಕನಿಷ್ಠ 2 ವರ್ಷ ಮತ್ತು ಗರಿಷ್ಠ ಮಿತಿಯಲ್ಲದಷ್ಟು ವರ್ಷಗಳವರೆಗೆ ಹಾರಾಟ ನಿಷೇಧ ವಿಧಿಸಲು ಹೊಸ ನಿಯಮಾವಳಿಗಳಲ್ಲಿ ಅವಕಾಶವಿದೆ.
ಹಾರಾಟ ನಿಷೇಧದ ಅಂತಿಮ ತೀರ್ಮಾನವನ್ನು ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಸಮಿತಿ ತೆಗೆದುಕೊಳ್ಳಲಿದೆ. 30 ದಿನಗಳ ಒಳಗೆ ತನ್ನ ತೀರ್ಪನ್ನು ಸಮಿತಿಯು ನೀಡಲಿದೆ.
ಇನ್ನು ಸದ್ಯಕ್ಕೆ ಅಸ್ತಿತ್ವದಲ್ಲಿರುವ ಕಾನೂನುಗಳ ಪ್ರಕಾರವೂ ಈ ಎಲ್ಲಾ ಕೃತ್ಯಗಳ ಬಗ್ಗೆ ಕ್ರಮ ಕೈಗೊಳ್ಳಬಹುದಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ ಈ ಹಾರಾಟ ನಿಷೇಧವನ್ನು ಕಿರಿಕ್ ಪ್ರಯಾಣಿಕರ ಮೇಲೆ ಹೇರಲಾಗುತ್ತದೆ
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications