Tirupati New Ticket: ತಿರುಮಲಕ್ಕೆ ಹೋಗುವ ಭಕ್ತರಿಗೆ ಗುಡ್ ನ್ಯೂಸ್.. ವೈಕುಂಠ ದ್ವಾರ ದರ್ಶನ ಬಳಿಕ ಹೊಸ ಟಿಕೆಟ್ ವಿತರಣೆ ಯಾವಾಗ?
ತಿರುಮಲಕ್ಕೆ ತೆರಳುವ ಭಕ್ತರಿಗೆ ಟಿಟಿಡಿ ಸಿಹಿಸುದ್ದಿ ನೀಡಿದೆ. ವೈಕುಂಠ ದರ್ಶನದ ಟಿಕೆಟ್ಗಳು ಪೂರ್ಣಗೊಂಡಿದ್ದು, ಮುಂದಿನ ಸರ್ವದರ್ಶನದ ಟೋಕನ್ಗಳನ್ನು ಜನವರಿ 2 ರಿಂದ ನೀಡಲಾಗುವುದು ಎಂದು ಟಿಟಿಡಿ ತಿಳಿಸಿದೆ.
ವೈಕುಂಠ ಏಕಾದಶಿ ನಿಮಿತ್ತ ತಿರುಮಲ ವೈಕುಂಠ ದ್ವಾರ ದರ್ಶನಕ್ಕಾಗಿ ಡಿಸೆಂಬರ್ 23 ರಿಂದ 2024 ರ ಜನವರಿ 1 ರವರೆಗೆ ಸರ್ವ ದರ್ಶನ ಟೋಕನ್ ವಿತರಣೆ ಸೋಮವಾರ ಬೆಳಿಗ್ಗೆ 4.27 ಕ್ಕೆ ಪೂರ್ಣಗೊಂಡಿದೆ. ಈಗಾಗಲೇ ಭಕ್ತರು ನಿತ್ಯ ತಿರುಮಲಕ್ಕೆ ಭೇಡಿ ನೀಡಿ ತಿಮ್ಮಪ್ಪನ ದರ್ಶನವನ್ನು ಪಡೆಯುತ್ತಿದ್ದಾರೆ. ಈ ನಡುವೆ ಟಿಟಿಡಿ ಮುಂದಿನ ಸರ್ವದರ್ಶನದ ಟೋಕನ್ಗಳನ್ನು ಜನವರಿ 2 ರಿಂದ ನೀಡಲಾಗುವುದು ಎಂದು ತಿಳಿಸಿದೆ.

ಹೌದು.. ವೈಕುಂಠ ಏಕಾದಶಿ ನಿಮಿತ್ತ ತಿರುಪತಿಗೆ ಭಕ್ತ ಸಾಗರವೇ ಹರಿದು ಬರುತ್ತಿದೆ. ನಿತ್ಯ ಲಕ್ಷಾಂತರ ಭಕ್ತರು ತಿರುಮಲಕ್ಕೆ ಭೇಟಿ ನೀಡುತ್ತಿದ್ದಾರೆ. ಹತ್ತು ದಿನಗಳ ಕಾಲ ಭಕ್ತರು ತಿರುಮಲಕ್ಕೆ ಭೀಟಿ ನೀಡಲು ಬೇಕಾದ ಟೋಕನ್ಗಳನ್ನು ಈಗಾಗಲೇ ನೀಡಲಾಗಿದೆ. ಹತ್ತು ದಿನಗಳ ಬಳಿಕ ಅಂದರೆ ಜನವರಿ 2 ರಿಂದ ಭಕ್ತರು ತಿರುಮಲಕ್ಕೆ ಭೇಡಿ ನೀಡಲು ಹೊಸ ಟೋಕನ್ಗಳನ್ನು ನೀಡಲು ಟಿಟಿಡಿ ನಿರ್ಧರಿಸಿದೆ. ಒಂದು ವೇಳೆ ವೈಕುಂಠ ಏಕಾದಶಿ ಸಮಯದಲ್ಲಿ ತಿಮ್ಮಪ್ಪನ ದರ್ಶನ ಮಾಡಲು ಸಾಧ್ಯವಾಗದೇ ಇರುವವರು ಈ ಟೋಕನ್ಗಳನ್ನು ಪಡೆಯಬಹುದು.
ವಿಷ್ಣು ನಿವಾಸ, ಶ್ರೀನಿವಾಸಂ, ಗೋವಿಂದರಾಜಸ್ವಾಮಿ ಸತ್ರಗಳು, ಭೂದೇವಿ ಕಾಂಪ್ಲೆಕ್ಸ್, ರಾಮಚಂದ್ರ ಪುಷ್ಕರಿಣಿ, ಇಂದಿರಾ ಮೈದಾನ, ಜೀವಕೋಣ ಪ್ರೌಢಶಾಲೆ, ಬೈರಾಗಿಪಟ್ಟೇಡ, ZP ಪ್ರೌಢಶಾಲೆ, MR ಪಳ್ಳಿ, ವಿಷ್ಣು ನಿವಾಸ ಸೇರಿಂದತೆ ತಿರುಪತಿಯಲ್ಲಿ ಒಟ್ಟು 90 ಕೌಂಟರ್ಗಳಲ್ಲಿ 10 ದಿನಗಳಿಗೆ 4 ಲಕ್ಷ ರೂಪಾಯಿ ಟೋಕನ್ಗಳನ್ನು ನೀಡಲಾಗಿದೆ. ಟೋಕನ್ ಇಲ್ಲದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಟಿಟಿಡಿ ಈಗಾಗಲೇ ತಿಳಿಸಿದೆ.
ತಿರುಮಲದಲ್ಲಿ ಶುಕ್ರವಾರ ಮಧ್ಯರಾತ್ರಿ ಶ್ರೀವಾರಿ ವೈಕುಂಠದ ಬಾಗಿಲು ತೆರೆಯಲಾಯಿತು. ಶ್ರೀಗಳಿಗೆ ವಿಶೇಷ ಪೂಜೆ ಬಳಿಕ ಮೊದಲು ಸೆಲೆಬ್ರಿಟಿಗಳಿಗೆ ದರ್ಶನ ಭಾಗ್ಯ ನೀಡಿ ನಂತರ ಸಾಮಾನ್ಯರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು. ಇದರಿಂದಾಗಿ ತಿರುಮಲಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಕಣ್ಣು ಹಾಯಿಸಿದಲೆಲ್ಲಾ ಜನ ಜಮಾಯಿಸಿದ್ದಾರೆ. ಜನವರಿ 1ರ ಮಧ್ಯರಾತ್ರಿ 12 ಗಂಟೆಯವರೆಗೆ ವೈಕುಂಠದ ಬಾಗಿಲು ತೆರೆದಿರುತ್ತದೆ. ಟೋಕನ್ ಹೊಂದಿರುವ ಭಕ್ತರಿಗೆ ಮಾತ್ರ ವೈಕುಂಠನ ದರ್ಶನ ನೀಡಲಾಗುತ್ತಿದೆ.
ಡಿಸೆಂಬರ್ 26 ರಂದು ಗರುಡಸೇವೆ ರದ್ದು
ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ಡಿಸೆಂಬರ್ 26 ರಂದು ನಡೆಯಲಿರುವ ಹುಣ್ಣಿಮೆ ಗರುಡಸೇವೆಯನ್ನು ಟಿಟಿಡಿ ರದ್ದುಗೊಳಿಸಿದೆ. ಪ್ರತಿ ತಿಂಗಳು ಹುಣ್ಣಿಮೆಯಂದು ಶ್ರೀಗಳಿಗೆ ಗರುಡ ಸೇವೆ ನಡೆಯುತ್ತದೆ. ಆದರೆ ಶ್ರೀವಾರಿ ದೇವಸ್ಥಾನದಲ್ಲಿ ಅಧ್ಯಯನ ಮಹೋತ್ಸವಗಳು ನಡೆಯುತ್ತಿರುವುದರಿಂದ ಹುಣ್ಣಿಮೆ ಗರುಡಸೇವೆ ಇರುವುದಿಲ್ಲ. ಈ ವಿಷಯವನ್ನು ಭಕ್ತರು ಗಮನಿಸುವಂತೆ ಟಿಟಿಡಿ ಸಲಹೆ ನೀಡಿದೆ.
ತ್ಯಾಗರಾಜ ಸಂಗೀತೋತ್ಸವಕ್ಕೆ ಆಹ್ವಾನ
ತಿರುಪತಿ ವಾದ್ಯ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆಯಲಿರುವ ಶ್ರೀ ಸದ್ಗುರು ತ್ಯಾಗರಾಜ ಸ್ವಾಮಿಗಳ ಸಂಗೀತೋತ್ಸವಕ್ಕೆ ಎಲ್ಲರೂ ಆಗಮಿಸುವಂತೆ ತಿರುಪತಿ ವೈದ್ಯ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರುದ್ರಕೋಟಿ ಸದಾಶಿವಂ ಕೋರಿದ್ದಾರೆ. ಜನವರಿ 6 ಮತ್ತು 7ರಂದು ಸಂಗೀತೋತ್ಸವ ನಡೆಯಲಿದ್ದು, ರಾಮಚಂದ್ರ ಪುಷ್ಕರಣಿಯಲ್ಲಿ ಅಂತಾರಾಷ್ಟ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.
-
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ












Click it and Unblock the Notifications