Get Updates
Get notified of breaking news, exclusive insights, and must-see stories!

Tirupati New Ticket: ತಿರುಮಲಕ್ಕೆ ಹೋಗುವ ಭಕ್ತರಿಗೆ ಗುಡ್ ನ್ಯೂಸ್.. ವೈಕುಂಠ ದ್ವಾರ ದರ್ಶನ ಬಳಿಕ ಹೊಸ ಟಿಕೆಟ್ ವಿತರಣೆ ಯಾವಾಗ?

ತಿರುಮಲಕ್ಕೆ ತೆರಳುವ ಭಕ್ತರಿಗೆ ಟಿಟಿಡಿ ಸಿಹಿಸುದ್ದಿ ನೀಡಿದೆ. ವೈಕುಂಠ ದರ್ಶನದ ಟಿಕೆಟ್‌ಗಳು ಪೂರ್ಣಗೊಂಡಿದ್ದು, ಮುಂದಿನ ಸರ್ವದರ್ಶನದ ಟೋಕನ್‌ಗಳನ್ನು ಜನವರಿ 2 ರಿಂದ ನೀಡಲಾಗುವುದು ಎಂದು ಟಿಟಿಡಿ ತಿಳಿಸಿದೆ.

ವೈಕುಂಠ ಏಕಾದಶಿ ನಿಮಿತ್ತ ತಿರುಮಲ ವೈಕುಂಠ ದ್ವಾರ ದರ್ಶನಕ್ಕಾಗಿ ಡಿಸೆಂಬರ್ 23 ರಿಂದ 2024 ರ ಜನವರಿ 1 ರವರೆಗೆ ಸರ್ವ ದರ್ಶನ ಟೋಕನ್ ವಿತರಣೆ ಸೋಮವಾರ ಬೆಳಿಗ್ಗೆ 4.27 ಕ್ಕೆ ಪೂರ್ಣಗೊಂಡಿದೆ. ಈಗಾಗಲೇ ಭಕ್ತರು ನಿತ್ಯ ತಿರುಮಲಕ್ಕೆ ಭೇಡಿ ನೀಡಿ ತಿಮ್ಮಪ್ಪನ ದರ್ಶನವನ್ನು ಪಡೆಯುತ್ತಿದ್ದಾರೆ. ಈ ನಡುವೆ ಟಿಟಿಡಿ ಮುಂದಿನ ಸರ್ವದರ್ಶನದ ಟೋಕನ್‌ಗಳನ್ನು ಜನವರಿ 2 ರಿಂದ ನೀಡಲಾಗುವುದು ಎಂದು ತಿಳಿಸಿದೆ.

Good news for the devotees going to Tirumala.. Tirupati New Ticket Issue on monday

ಹೌದು.. ವೈಕುಂಠ ಏಕಾದಶಿ ನಿಮಿತ್ತ ತಿರುಪತಿಗೆ ಭಕ್ತ ಸಾಗರವೇ ಹರಿದು ಬರುತ್ತಿದೆ. ನಿತ್ಯ ಲಕ್ಷಾಂತರ ಭಕ್ತರು ತಿರುಮಲಕ್ಕೆ ಭೇಟಿ ನೀಡುತ್ತಿದ್ದಾರೆ. ಹತ್ತು ದಿನಗಳ ಕಾಲ ಭಕ್ತರು ತಿರುಮಲಕ್ಕೆ ಭೀಟಿ ನೀಡಲು ಬೇಕಾದ ಟೋಕನ್‌ಗಳನ್ನು ಈಗಾಗಲೇ ನೀಡಲಾಗಿದೆ. ಹತ್ತು ದಿನಗಳ ಬಳಿಕ ಅಂದರೆ ಜನವರಿ 2 ರಿಂದ ಭಕ್ತರು ತಿರುಮಲಕ್ಕೆ ಭೇಡಿ ನೀಡಲು ಹೊಸ ಟೋಕನ್‌ಗಳನ್ನು ನೀಡಲು ಟಿಟಿಡಿ ನಿರ್ಧರಿಸಿದೆ. ಒಂದು ವೇಳೆ ವೈಕುಂಠ ಏಕಾದಶಿ ಸಮಯದಲ್ಲಿ ತಿಮ್ಮಪ್ಪನ ದರ್ಶನ ಮಾಡಲು ಸಾಧ್ಯವಾಗದೇ ಇರುವವರು ಈ ಟೋಕನ್‌ಗಳನ್ನು ಪಡೆಯಬಹುದು.

ವಿಷ್ಣು ನಿವಾಸ, ಶ್ರೀನಿವಾಸಂ, ಗೋವಿಂದರಾಜಸ್ವಾಮಿ ಸತ್ರಗಳು, ಭೂದೇವಿ ಕಾಂಪ್ಲೆಕ್ಸ್, ರಾಮಚಂದ್ರ ಪುಷ್ಕರಿಣಿ, ಇಂದಿರಾ ಮೈದಾನ, ಜೀವಕೋಣ ಪ್ರೌಢಶಾಲೆ, ಬೈರಾಗಿಪಟ್ಟೇಡ, ZP ಪ್ರೌಢಶಾಲೆ, MR ಪಳ್ಳಿ, ವಿಷ್ಣು ನಿವಾಸ ಸೇರಿಂದತೆ ತಿರುಪತಿಯಲ್ಲಿ ಒಟ್ಟು 90 ಕೌಂಟರ್‌ಗಳಲ್ಲಿ 10 ದಿನಗಳಿಗೆ 4 ಲಕ್ಷ ರೂಪಾಯಿ ಟೋಕನ್‌ಗಳನ್ನು ನೀಡಲಾಗಿದೆ. ಟೋಕನ್ ಇಲ್ಲದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಟಿಟಿಡಿ ಈಗಾಗಲೇ ತಿಳಿಸಿದೆ.

ತಿರುಮಲದಲ್ಲಿ ಶುಕ್ರವಾರ ಮಧ್ಯರಾತ್ರಿ ಶ್ರೀವಾರಿ ವೈಕುಂಠದ ಬಾಗಿಲು ತೆರೆಯಲಾಯಿತು. ಶ್ರೀಗಳಿಗೆ ವಿಶೇಷ ಪೂಜೆ ಬಳಿಕ ಮೊದಲು ಸೆಲೆಬ್ರಿಟಿಗಳಿಗೆ ದರ್ಶನ ಭಾಗ್ಯ ನೀಡಿ ನಂತರ ಸಾಮಾನ್ಯರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು. ಇದರಿಂದಾಗಿ ತಿರುಮಲಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಕಣ್ಣು ಹಾಯಿಸಿದಲೆಲ್ಲಾ ಜನ ಜಮಾಯಿಸಿದ್ದಾರೆ. ಜನವರಿ 1ರ ಮಧ್ಯರಾತ್ರಿ 12 ಗಂಟೆಯವರೆಗೆ ವೈಕುಂಠದ ಬಾಗಿಲು ತೆರೆದಿರುತ್ತದೆ. ಟೋಕನ್ ಹೊಂದಿರುವ ಭಕ್ತರಿಗೆ ಮಾತ್ರ ವೈಕುಂಠನ ದರ್ಶನ ನೀಡಲಾಗುತ್ತಿದೆ.

ಡಿಸೆಂಬರ್ 26 ರಂದು ಗರುಡಸೇವೆ ರದ್ದು

ತಿರುಮಲ ಶ್ರೀವಾರಿ ದೇವಸ್ಥಾನದಲ್ಲಿ ಡಿಸೆಂಬರ್ 26 ರಂದು ನಡೆಯಲಿರುವ ಹುಣ್ಣಿಮೆ ಗರುಡಸೇವೆಯನ್ನು ಟಿಟಿಡಿ ರದ್ದುಗೊಳಿಸಿದೆ. ಪ್ರತಿ ತಿಂಗಳು ಹುಣ್ಣಿಮೆಯಂದು ಶ್ರೀಗಳಿಗೆ ಗರುಡ ಸೇವೆ ನಡೆಯುತ್ತದೆ. ಆದರೆ ಶ್ರೀವಾರಿ ದೇವಸ್ಥಾನದಲ್ಲಿ ಅಧ್ಯಯನ ಮಹೋತ್ಸವಗಳು ನಡೆಯುತ್ತಿರುವುದರಿಂದ ಹುಣ್ಣಿಮೆ ಗರುಡಸೇವೆ ಇರುವುದಿಲ್ಲ. ಈ ವಿಷಯವನ್ನು ಭಕ್ತರು ಗಮನಿಸುವಂತೆ ಟಿಟಿಡಿ ಸಲಹೆ ನೀಡಿದೆ.

ತ್ಯಾಗರಾಜ ಸಂಗೀತೋತ್ಸವಕ್ಕೆ ಆಹ್ವಾನ

ತಿರುಪತಿ ವಾದ್ಯ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆಯಲಿರುವ ಶ್ರೀ ಸದ್ಗುರು ತ್ಯಾಗರಾಜ ಸ್ವಾಮಿಗಳ ಸಂಗೀತೋತ್ಸವಕ್ಕೆ ಎಲ್ಲರೂ ಆಗಮಿಸುವಂತೆ ತಿರುಪತಿ ವೈದ್ಯ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರುದ್ರಕೋಟಿ ಸದಾಶಿವಂ ಕೋರಿದ್ದಾರೆ. ಜನವರಿ 6 ಮತ್ತು 7ರಂದು ಸಂಗೀತೋತ್ಸವ ನಡೆಯಲಿದ್ದು, ರಾಮಚಂದ್ರ ಪುಷ್ಕರಣಿಯಲ್ಲಿ ಅಂತಾರಾಷ್ಟ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+