Get Updates
Get notified of breaking news, exclusive insights, and must-see stories!

ಸ್ವಯಂಘೋಷಿತ ದೇವಮಾನವ ಚಂದ್ರಸ್ವಾಮಿ ಕಣ್ಮರೆ

ಬಹುಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಯಂಘೋಷಿತ ದೇವಮಾನವ ಚಂದ್ರಸ್ವಾಮಿ (66) ಕಣ್ಮರೆಯಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಮಂಗಳವಾರ ಮೃತಪಟ್ಟಿದ್ದಾರೆ. ಬಹುಕಾಲದಿಂದ ಡಯಾಲಿಸಿಸ್ ನಲ್ಲಿದ್ದರು.

ನವದೆಹಲಿ, ಮೇ 23 : ಬಹುಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಯಂಘೋಷಿತ ದೇವಮಾನವ ಚಂದ್ರಸ್ವಾಮಿ (66) ಕಣ್ಮರೆಯಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಮಂಗಳವಾರ ಮೃತಪಟ್ಟಿದ್ದಾರೆ. ಬಹುಕಾಲದಿಂದ ಡಯಾಲಿಸಿಸ್ ನಲ್ಲಿದ್ದರು.

ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಚಂದ್ರಸ್ವಾಮಿ ಅವರ ಹೆಸರು ಕೇಳಿ ಬಂದಿತ್ತು.ಹಣ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ರಾಜಸ್ಥಾನಿ ಮೂಲದ ವ್ಯಕ್ತಿಯೊಬ್ಬನ ಮಗನಾದ ನೇಮಿ ಚಂದ್ ತಾಂತ್ರಿಕನಾಗಿ, ವಿವಾದಿತ ವ್ಯಕ್ತಿಯಾಗಿ, ಸ್ವಯಂಘೋಷಿತ ದೇವಮಾನವನಾಗಿ, ರಾಜಕೀಯ ಮುಖಂಡರ ಗುರುವಾಗಿ ಬೆಳೆದವರು.

Godman Chandraswami has passed away.

ರಾಜೀವ್ ಗಾಂಧಿ ಹತ್ಯೆ ಸಂಚಿನಲ್ಲೂ ಚಂದ್ರಸ್ವಾಮಿ ಹೆಸರು ಬಲವಾಗಿ ಕೇಳಿ ಬಂದಿತ್ತು. ತನ್ನ ಅಂತಾರಾಷ್ಟ್ರೀಯ ಸಂಪರ್ಕ, ಶಸ್ತ್ರಾಸ್ತ್ರ, ವಾಣಿಜ್ಯ ಡೀಲ್ ಮೂಲಕ ಎಲ್ ಟಿಟಿಐ ಸಂಘಟನೆಗೆ ನೆರವಾಗುತ್ತಿದ್ದರು.

1997ರಲ್ಲಿ ರಾಜೀವ್ ಗಾಂಧಿ ಹತ್ಯೆ ಕೇಸ್ ನಲ್ಲಿ ಸ್ವಾಮಿ ಭಾಗಿಯಾಗಿರುವ ಬಗ್ಗೆ ಐಐಸಿಸಿ ವಕೀಲ ಆರ್ ಎನ್ ಮಿತ್ತಲ್ ಆರೋಪಿಸಿದ್ದರು. ತನಿಖೆ ನಡೆಸುತ್ತಿದ್ದ ಜೈನ್ ಆಯೋಗದ ಮುಂದೆ ಕೂಡಾ ಇದೇ ವಾದ ಮಂಡಿಸಲಾಗಿತ್ತು.

ಚಂದ್ರಸ್ವಾಮಿ ಬಂಧನವಾದರೂ ನಂತರ ಬಿಡುಗಡೆಗೊಂಡಿದ್ದರು. ಇದಲ್ಲದೆ ಹಲವಾರು ವಿದೇಶಿ ವಿನಿಮಯ ಕಾಯ್ದೆ (ಎಫ್ ಇಎಂ ಕಾಯ್ದೆ) ಉಲ್ಲಂಘನೆ ಆರೋಪವನ್ನು ಸ್ವಾಮಿ ಮೇಲೆ ಜಾರಿ ನಿರ್ದೇಶಾನಲಯ ಹೊರೆಸಿತ್ತು. ಅಂದಿನ ಪ್ರಧಾನಿ ಪಿವಿ ನರಸಿಂಹ ರಾವ್ ಅವರ ಆಧಾತ್ಮ ಸಲಹೆಗಾರ ಎನಿಸಿಕೊಂಡಿದ್ದ ಸ್ವಾಮಿ, ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿದವರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+