ಮಹದಾಯಿ ತೀರ್ಪು: ಗೋವಾದಿಂದಲೂ ಮೇಲ್ಮನವಿ ಸಾಧ್ಯತೆ
ಪಣಜಿ, ಆಗಸ್ಟ್ 17: ಮೊನ್ನೆಯಷ್ಟೆ ಪ್ರಕಟವಾಗಿದ್ದ ಮಹದಾಯಿ ಕುರಿತ ನ್ಯಾಯಾಧಿಕರಣದ ಐತೀರ್ಪಿನ ಬಗ್ಗೆ ಆರಂಭದಲ್ಲಿ ತೃಪ್ತಿ ವ್ಯಕ್ತಪಡಿಸಿದ್ದ ಗೋವಾ ಸರ್ಕಾರ ಈಗ ಅತೃಪ್ತಿ ವ್ಯಕ್ತಪಡಿಸುತ್ತಿದೆ.
ಮಹದಾಯಿ ನ್ಯಾಯಾಧಿಕರಣ ತೀರ್ಪಿನ ಪ್ರಕಾರ ಗೋವಾಕ್ಕೆ 24 ಟಿಎಂಸಿ ಅಡಿ ನೀರು ದೊರೆಯಲಿದೆ. ಕರ್ನಾಟಕದ ಪಾಲಿಗೆ 13.42 ಟಿಎಂಸಿ ಅಡಿ ನೀರು ದೊರಕಿದ್ದರೆ ಮಹರಾಷ್ಟ್ರ ಪಾಲಿಗೆ 1.30 ಟಿಎಂಸಿ ಅಡಿ ನೀರು ದೊರೆತಿದೆ.
ತೀರ್ಪು ಬಂದ ದಿನ ಟ್ವೀಟ್ ಮಾಡಿದ್ದ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು, ನ್ಯಾಯಾಧಿಕರಣ ತೀರ್ಪು ತೃಪ್ತಿ ತಂದಿದೆ, ಗೋವಾ ಜನತೆಗೆ ನ್ಯಾಯ ದೊರೆತಿದೆ ಎಂದಿದ್ದರು ಆದರೆ ಈಗ ವರಸೆ ಬದಲಾಯಿಸಿದ್ದಾರೆ.

ಗೋವಾ ಕಾಂಗ್ರೆಸ್ನಿಂದ ಸರ್ಕಾರದ ಮೇಲೆ ಒತ್ತಡ
ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ನ್ಯಾಯಾಧಿಕರಣ ತೀರ್ಪಿನ ಬಗ್ಗೆ ವಿರೋಧ ವ್ಯಕ್ತಪಡಿಸಿ ಸರ್ಕಾರದ ಮೇಲೆ ಒತ್ತಡ ಹಾಕಿರುವ ಕಾರಣ ಗೋವಾ ಸರ್ಕಾರವು ನ್ಯಾಯಾಧಿಕರಣ ತೀರ್ಪು ಪ್ರಶ್ನಿಸಿ ಸುಪ್ರಿಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಿದೆ.

ಡಿ.ಕೆ.ಶಿವಕುಮಾರ್ ಅಸಮಾಧಾನ
ರಾಜ್ಯ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ಸಹ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಹಾಗಾಗಿ ಕರ್ನಾಟಕ ಸರ್ಕಾರ ಸಹ ಸುಪ್ರಿಂಕೋರ್ಟ್ಗೆ ಮೇಲ್ಮವಿ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಕೆಲವೇ ದಿನದಲ್ಲಿ ಸರ್ವ ಪಕ್ಷ ಸಭೆ ಕರೆದು ಚರ್ಚಿಸಿ ನಿರ್ಧಾರ ಪ್ರಕಟಿಸಲಿದೆ.

ಮಹದಾಯಿ ಹೋರಾಟಗಾರರದ್ದೂ ಇದೇ ಅಭಿಪ್ರಾಯ
ಮಹದಾಯಿ ಹೋರಾಟಗಾರರದ್ದೂ ಸಹ ಇದೇ ಅಭಿಪ್ರಾಯವಾಗಿದ್ದು, ರಾಜ್ಯ ಸರ್ಕಾರವು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ಅವರು ತಿಳಿಸಿದ್ದರು.

ಎಚ್ಡಿಕೆ-ಡಿಕೆಶಿ ಸಭೆ
ನಿನ್ನೆ (ಆಗಸ್ಟ್ 17) ರಂದು ಮುಖ್ಯಮಂತ್ರಿ ಕುಮಾರಸ್ವಾಮಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಕಾನೂನು ತಜ್ಞರು, ನೀರಾವರಿ ತಜ್ಞರುಗಳ ಜೊತೆ ಸಭೆ ನಡೆಸಿದ್ದು, ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಆದರೆ ಅದಕ್ಕೆ ಮುನ್ನಾ ಸರ್ವ ಪಕ್ಷ ಸಭೆಯೊಂದನ್ನು ನಡೆಸಲಿದ್ದಾರೆ.












Click it and Unblock the Notifications