Go First: ಸಂಸ್ಥೆಗೆ 400 ಕೋಟಿ ರೂ. ನಿಧಿ ಅನುಮೋದನೆ, ಜುಲೈನಲ್ಲಿ ದೇಶಿ ವಿಮಾನ ಕಾರ್ಯಾಚರಣೆ ನಿರೀಕ್ಷೆ
ನವದೆಹಲಿ, ಜೂನ್ 25: ಹಣಕಾಸಿನ ಕೊರತೆ ಎದುರಿಸುತ್ತಿರುವ ಗೋಫಸ್ಟ್ (GoFirst) ಗೆ ಪರಿಹಾರವಾಗಿ ಏರ್ಲೈನ್ನ ಸಾಲದಾತರು ಸುಮಾರು 400 ಕೋಟಿ ರೂಪಾಯಿಗಳ ಮಧ್ಯಂತರ ನಿಧಿ ಅನುಮೋದಿಸಿದ್ದಾರೆ. ಇದರಿಂದಾಗಿ ಗೋಫ್ಟ್ ನಿರಾಳವಾಗಿದೆ.
ತಿಂಗಳ ಹಿಂದಷ್ಟೇ ಗೋಫಸ್ಟ್ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಮುಂದೆ ಸ್ವಯಂಪ್ರೇರಿತ ದಿವಾಳಿತನ ಪರಿಹಾರ ಪ್ರಕ್ರಿಯೆ ಕುರಿತು ಅರ್ಜಿ ಸಲ್ಲಿಸಿತ್ತು. ಈ ಮೂಲಕ ಆರ್ಥಿಕ ದಿವಾಳಿ ಹಂತದ ಈ ವಿಮಾನಯಾನ ಸಂಸ್ಥೆಯು ರದ್ದಾದ ತನ್ನ ವಿಮಾನಗಳ ದೇಶೀಯ ಕಾರ್ಯಾಚರಣೆ ಆರಂಭಿಸಲು ಹಣದ ಹುಡುಕಾಟ ಆರಂಭಿಸಿತ್ತು.

ಅದೇ ಬೆನ್ನಲ್ಲೇ ಇದೀಗ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಡಾಯ್ಚೆ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್ ಒಳಗೊಂಡ ಏರ್ಲೈನ್ಸ್ ಸಾಲಗಾರರ ಸಮಿತಿಯು (ಸಿಒಸಿ) ಹೆಚ್ಚುವರಿ ನಿಧಿಯ ಕೋರಿಕೆಯನ್ನು ಅನುಮೋದಿಸಿದೆ.
ಒಕ್ಕೂಟದ ಭಾಗವಾಗಿ ಬ್ಯಾಂಕ್ನ ಉನ್ನತ ಸಾಲದಾತರು ಗೋಫಸ್ಟ್ ವ್ಯವಹಾರ ಯೋಜನೆ ಮನಗಂಡು ಕಾರ್ಯಾಚರಣೆ ಆರಂಭಕ್ಕೆ ಬೆಂಬಲಿಸಲು ಸುಮಾರು 400 ಕೋಟಿ ರೂಪಾಯಿ ಒದಗಿಸಲು ಅನುಮೋದನೆ ನೀಡಿದ್ದಾರೆ. ಇದು ಗೋಫಸ್ಟ್ ವಿಮಾನಗಳ ಕಾರ್ಯಾಚರಣೆ ಪುನಾರಂಭಕ್ಕೆ ಅನುಕೂಲವಾಗಿದೆ ಎಂದು ಬ್ಯಾಂಕರ್ ಒಬ್ಬರು ಹೇಳಿದ್ದಾರೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
ಗೋಫಸ್ಟ್ ಸಂಸ್ಥೆ ಕೇಳಿದ ಮೊತ್ತ
ಸಮಿತಿ ಅನುಮೋದಿಸಿದ ಒಟ್ಟು ಹಣ ಸುಮಾರು 400- 450 ಕೋಟಿ ರೂಪಾಯಿಗಳಷ್ಟಿದೆ. ಈ ವಾರದ ಆರಂಭದಲ್ಲಿ, ಬುಧವಾರ ನಡೆದ ಸಾಲದಾತರ ನೇತೃತ್ವದ ಸಭೆಯಲ್ಲಿ ಗೋ ಫಸ್ಟ್ ಸಂಸ್ಥೆ ಹೆಚ್ಚುವರಿ ಆರ್ಥಿಕ ಸಹಾಯಕ್ಕೆ ಕೋರಿತ್ತು. ವಿಮಾನಯಾನ ಸಂಸ್ಥೆಯು 4 ಶತಕೋಟಿ ಮತ್ತು 6 ಶತಕೋಟಿ ಭಾರತೀಯ ರೂಪಾಯಿಗಳ ($122 ಮಿಲಿಯನ್) ಹೆಚ್ಚುವರಿ ಹಣ ಕೇಳುತ್ತಿದೆ ಎಂದು ತಿಳಿದು ಬಂದಿದೆ. ಸಾಲದಾತರು ಮುಂದಿನ 48 ಗಂಟೆಗಳಲ್ಲಿ ಪ್ರಸ್ತಾಪಗಳನ್ನು ಮೌಲ್ಯಮಾಪನ ಮಾಡುವ ಸಾಧ್ಯತೆ ಇದೆ.

ಸದ್ಯ ಗೋ ಫಸ್ಟ್ ಏರ್ಲೈನ್ಸ್ ಸಂಸ್ಥೆಯು ತನ್ನ ವಿಮಾನಗಳನ್ನು ಜುಲೈ ತಿಂಗಳಲ್ಲಿ ಕಾರ್ಯಾಚರಣೆ ಪುನರ್ ಆರಂಭಕ್ಕೆ ಚಿಂತಿಸುತ್ತಿದೆ. 22 ವಿಮಾನಗಳೊಂದಿಗೆ 78 ದೈನಂದಿನ ವಿಮಾನಗಳನ್ನು ನಿರ್ವಹಿಸಲು ಸಂಸ್ಥೆ ಪ್ಲಾನ್ ಮಾಡಿಕೊಂಡಿದೆ. ಈ ಕಾರ್ಯಾಚರಣೆಗೆ ಅನುಮೋದಿತ ಹಣ ಸೇರಿದಂತೆ ಇನ್ನಿತರ ಅಂಶಗಳ ಮೇಲೆ ಅವಲಂಬಿತವಾಗಿದೆ ಎಂದು ಹೇಳಲಾಗಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಐಡಿಬಿಐ ಬ್ಯಾಂಕ್ ಹಾಗೂ ಡಾಯ್ಚ ಬ್ಯಾಂಕ್ಗಳು ಗೋ ಫಸ್ಟ್ ದಿವಾಳಿತನದ ಫೈಲಿಂಗ್ನಲ್ಲಿ ಒಟ್ಟು 65.21 ಶತಕೋಟಿ ರೂ.ಯ ಸಾಲಗಾರರರನ್ನು ಗುರುತಿಸಿ ಉಲ್ಲೇಖಿಸಿದೆ.
ಗೋಫ್ಟ್ ಆರ್ಥಿಕ ದಿವಾಳಿಯತ್ತ ಹೊರಟಿದೆ. ತೀವ್ರ ಸಂಕಷ್ಟ ಎದುರಿಸಿದ್ದು, ಸಂಸ್ಥೆ ವಿಮಾನಯಾನ ಬಹುತೇಕ ರದ್ದು ಎಂದು ಹೇಳಲಾಗಿತ್ತು. ಹಂತ ಹಂತವಾಗಿ ಕೆಲವು ವಿಮಾನಯಾನದ ರದ್ದತಿಯನ್ನು ವಿಸ್ತರಣೆ ಮಾಡಲಾಗಿತ್ತು. ಇದಾದ ಬಳಿಕ ಸಂಸ್ಥೆ ದಿವಾಳಿತನ ಬಗ್ಗೆ ಅರ್ಜಿ ಸಲ್ಲಿಸಿತ್ತು. ಹಣಕ್ಕೆ ಕೋರಿತ್ತು. ಅದಕ್ಕೀಗ ಅನುಮತಿ ಸಿಕ್ಕಿದ್ದು, ಸಂಸ್ಥೆ ಮರುಜೀವ ಬಂದಂತಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications