ಗೋವುಗಳ ರಕ್ಷಣೆ, ಜರ್ಮನ್ ಮಹಿಳೆಯ ಕಾರ್ಯಕ್ಕೆ ಸಲಾಂ!
ಲಕ್ನೋ, ಸೆಪ್ಟೆಂಬರ್ 18 : ಜರ್ಮನ್ ಮೂಲದ ಮಹಿಳೆಯೊಬ್ಬರು 1,200ಕ್ಕೂ ಹೆಚ್ಚು ಹಸುಗಳನ್ನು ಮಥುರಾದಲ್ಲಿ ಸಾಕುತ್ತಿದ್ದಾರೆ. ಹಸುಗಳನ್ನು ಸಾಕಲು ಪ್ರತಿ ತಿಂಗಳು 22 ಲಕ್ಷ ರೂ. ಖರ್ಚು ಮಾಡುತ್ತಿದ್ದಾರೆ. ಮಹಿಳೆಯ ಗೋ ಸೇವೆ ಇತರರಿಗೆ ಮಾದರಿ ಆಗುವಂತಿದೆ.
ಸುರ್ ಬಾಯಿ ಗೋಸೇವಾ ನಿಕೇತನ ಹೆಸರಿನಲ್ಲಿ ಗೋ ಶಾಲೆ ನಿರ್ಮಿಸಿ, ಸಾವಿರಾರು ಹಸುಗಳಿಗೆ ಆಶ್ರಯ ನೀಡಿದ್ದಾರೆ. ಫ್ರಿಡೆರಿಕ್ ಇರಿನಾ ಬ್ರೂನಿಂಗ್ (69). ಮಥುರಾದಲ್ಲಿ ಬ್ರೂನಿಂಗ್ ಅವರ ಆಶ್ರಮವಿದೆ. ಸ್ಥಳೀಯರು ಇವರನ್ನು ಪ್ರೀತಿಯಿಂದ ಸುದೇವಿ ಮಾತಾಜೀ ಎಂದು ಕರೆಯುತ್ತಾರೆ.
ಗಾಯಗೊಂಡ, ಕಾಯಿಲೆಯಿಂದ ಬಳಲುತ್ತಿರುವ, ಹಾಲು ಕೊಡುವುದನ್ನು ನಿಲ್ಲಿಸಿದ ಹಸುಗಳಿಗೆ ಮಾತಾಜೀ ತಮ್ಮ ಗೋ ಶಾಲೆಯಲ್ಲಿ ಆಶ್ರಯ ನೀಡಿದ್ದಾರೆ. ಗೋ ಶಾಲೆಯಲ್ಲಿ 1200ಕ್ಕೂ ಹೆಚ್ಚು ಹಸುಗಳಿವೆ. 60 ಜನರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ವೇತನ, ಹಸುಗಳ ಆಹಾರ, ಔಷಧಿ ಹೀಗೆ ಒಟ್ಟು ತಿಂಗಳಿಗೆ 22 ಲಕ್ಷವನ್ನು ಮಾತಾಜೀ ಖರ್ಚು ಮಾಡುತ್ತಿದ್ದಾರೆ. (ಪಿಟಿಐ ಚಿತ್ರಗಳು)

1978ರಲ್ಲಿ ಭಾರತಕ್ಕೆ ಬಂದರು
ಬರ್ಲಿನ್ನಿಂದ ಫ್ರಿಡೆರಿಕ್ ಇರಿನಾ ಬ್ರೂನಿಂಗ್ 1978ರಲ್ಲಿ ಭಾರತಕ್ಕೆ ಬಂದವರು. ಗುರುವಿಗಾಗಿ ಹುಡುಕಾಟ ನಡೆಸಿದರು. ರಾಧಾ ಕುಂಡದಲ್ಲಿ ನೆಲೆಸಿದ್ದ ಅವರಿಗೆ ಗೋವುಗಳನ್ನು ಸಾಕುವ ಯಾವ ಉದ್ದೇಶವೂ ಇರಲಿಲ್ಲ. ಸ್ಥಳೀಯರಿಂದ ಅವರು ಗೋವುಗಳ ಬಗ್ಗೆ ತಿಳಿದುಕೊಂಡರು.

ಹಿಂದಿ ಭಾಷೆ ಕಲಿತರು
ಗೋವುಗಳ ಬಗ್ಗೆ ತಿಳಿದುಕೊಳ್ಳಲು ಫ್ರಿಡೆರಿಕ್ ಹಿಂದಿ ಕಲಿತರು. ನಂತರ ಜೀವನವೇ ಬದಲಾಯಿತು. ಗೋವುಗಳ ಬಗ್ಗೆ ಹಲವು ಪುಸ್ತಕಗಳನ್ನು ಓದಿದರು. ಈಗ 'ಗೋವುಗಳು ನನ್ನ ಮಕ್ಕಳಿದ್ದಂತೆ ಅವುಗಳನ್ನು ಬಿಟ್ಟು ಹೋಗುವುದಿಲ್ಲ' ಎನ್ನುತ್ತಾರೆ ಸುದೇವಿ ಮಾತಾಜೀ.

ಗೋಶಾಲೆಯಲ್ಲಿವೆ 1200 ಹಸು
3,300 ಚದರ ಅಡಿ ಪ್ರದೇಶದಲ್ಲಿ ಸುದೇವಿ ಮಾತಾಜೀ ಗೋಶಾಲೆ ನಿರ್ಮಿಸಿದ್ದಾರೆ. ಇಲ್ಲಿ 1200 ಹಸುಗಳಿಗೆ ಆಶ್ರಯ ನೀಡಲಾಗಿದೆ. ಗಾಯಗೊಂಡ, ಕಾಯಿಲೆಯಿಂದ ಬಳಲುವ ಹಸುಗಳನ್ನು ಜನರು ಇಲ್ಲಿಗೆ ತಂದು ಬಿಟ್ಟು ಹೋಗುತ್ತಾರೆ. ಕುರುಡಾಗಿರುವ, ತೀವ್ರವಾಗಿ ಗಾಯಗೊಂಡಿರುವ ಹಸುಗಳನ್ನು ಪ್ರತ್ಯೇಕವಾಗಿ ನೋಡಿಕೊಳ್ಳಲಾಗುತ್ತದೆ.

60 ಜನರು ಕೆಲಸ ಮಾಡುತ್ತಿದ್ದಾರೆ
ಸುರ್ ಬಾಯಿ ಗೋಸೇವಾ ನಿಕೇತನ ಹೆಸರಿನ ಗೋ ಶಾಲೆಯಲ್ಲಿ 60 ಜನರು ಕೆಲಸ ಮಾಡುತ್ತಿದ್ದಾರೆ. ವೇತನ, ಆಹಾರ, ಔಷಧ ಎಂದು ತಿಂಗಳಿಗೆ ಸುಮಾರು 22 ಲಕ್ಷ ಖರ್ಚಾಗುತ್ತಿದೆ. ಬರ್ಲಿನ್ನಲ್ಲಿ ಇರುವ ಕಟ್ಟಡಗಳ ಬಾಡಿಗೆ ಮೂಲಕವೇ ಇದರ ಖರ್ಚನ್ನು ನಿಭಾಯಿಸುತ್ತಾರೆ.

ಭಾರತದ ರಾಷ್ಟ್ರೀಯತೆ ಇಲ್ಲ
ಫ್ರಿಡೆರಿಕ್ ಅವರ ತಂದೆ ಜರ್ಮನಿಯ ಭಾರತೀಯ ರಾಯಭಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಸಂಪಾದನೆಯ ಹಣವನ್ನು ಗೋ ಶಾಲೆಗೆ ಬಳಸಲಾಗುತ್ತಿದೆ. ಫ್ರಿಡೆರಿಕ್ ಅವರು ಭಾರತೀಯ ಪೌರತ್ವವನ್ನು ಹೊಂದಿಲ್ಲ. ಪ್ರತಿ ವರ್ಷ ಅವರು ವೀಸಾ ನವೀಕರಣ ಮಾಡಿಕೊಳ್ಳುತ್ತಾರೆ. ಗೋ ಸೇವೆಯಲ್ಲಿಯೇ ನೆಮ್ಮದಿ ಕೊಂಡುಕೊಂಡಿದ್ದಾರೆ.
-
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು?












Click it and Unblock the Notifications