ಗರಿಬೀ ಹಠಾವೋ ಘೋಷಣೆಯಾಗೇ ಉಳಿದಿದೆ: ಮೋದಿ
ವಾರಣಾಸಿ, ಸೆಪ್ಟೆಂಬರ್. 18: ಗರೀಬಿ ಹಠಾವೋ ಘೋಷಣೆ ಇಂದಿಗೂ ಘೋಷಣೆಯಾಗಿಯೇ ಉಳಿದಿರುವುದು ದೇಶದ ದುರ್ದೈವ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಷಾದ ವ್ಯಕ್ತಪಡಿಸಿದರು.
ವಾರಣಾಸಿಗೆ ಭೇಟಿನೀಡಿ ಮಾತನಾಡಿದ ಮೋದಿ, ದಶಕಗಳ ಕಾಲದಿಂದ ಘೋಷಣೆ ಹಾಗೆ ಇದೆ. ಆದರೆ ಬಡವರು ಇನ್ನು ಖಾಲಿ ಹೊಟ್ಟೆಯಲ್ಲೇ ಇದ್ದಾರೆ ಎಂದು ಹೇಳಿದರು. ಗರೀಬಿ ಹಠಾವೋ ಎಂಬ ಘೋಷ ವಾಕ್ಯವನ್ನು ರಾಜಕೀಯ ಕಾರಣಕ್ಕೆ ಬಳಸಿಕೊಳ್ಳಲಾಯಿತೇ ವಿನಃ ಬಡವರ ಜೀವನ ಸುಧಾರಣೆಗೆ ಯಾವ ಕ್ರಮವನ್ನು ತೆಗೆದೊಕೊಳ್ಳಲಿಲ್ಲ ಎಂದು ಮೋದಿ ದೂರಿದರು.
ವಾರಣಾಸಿಯ ರಿಕ್ಷಾ ಚಾಲಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿಮ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. 50 ವರ್ಷಗಳಲ್ಲಿ ಸಾಧನೆ ಮಾಡಲಾಗದ್ದನ್ನು 50 ತಿಂಗಳಲ್ಲಿ ಮಾಡಿ ತೋರಿಸುತ್ತೇವೆ ಎಂದು ಹೇಳಿದರು. ದೇಶದ ಸ್ಥಿತಿಯನ್ನು ಸುಧಾರಿಸಲು ಕೇಂದ್ರ ಸರ್ಕಾರ ಸದಾ ಬದ್ಧವಾಗಿದೆ. ಜನರ ಅಗತ್ಯವನ್ನು ಮನಗಂಡು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ಮೋದಿ ಭಾಷಣದ ಸಂಪೂರ್ಣ ಪಾಠವನ್ನು ಮುಂದಿನ ಸ್ಲೈಡ್ ಗಳಲ್ಲಿ ನೋಡಿ....
ರಿಕ್ಷಾ ವಿತರಣೆ
ಫಲಾನುಭವಿಗಳಿಗೆ ರಿಕ್ಷಾ ವಿತರಣೆ ಮಾಡಿದ ಮೋದಿ ಜನರ ಜೀವನದಲ್ಲಿ ಮೂಲಭೂತ ಬದಲಾವಣೆ ತರಲು ಕೇಂದ್ರ ಸರ್ಕಾರ ಸದಾ ಸಿದ್ಧವಿದ್ದು ಅದಕ್ಕಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಎಲ್ಲರಿಗೂ ಬ್ಯಾಂಕ್ ಖಾತೆ
ಜನಧನ ಯೋಜನೆಯಿಂದ 18 ಕೋಟಿಗೂ ಅಧಿಕ ಜನ ಬ್ಯಾಂಕ್ ಖಾತೆ ಪಡೆದುಕೊಂಡಿದ್ದಾರೆ. ಇದು ಬೆದಲಾವಣೆಯ ಪ್ರತೀಕ ಎಂದು ಹೇಳಿದರು.
ಬರಮಾಡಿಕೊಂಡ ಅಖಿಲೇಶ್ ಯಾದವ್
ಪ್ರಧಾನಿ ನರೇಂದ್ರ ಮೋದಿ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬರಮಾಡಿಕೊಂಡರು.
ನಿಮ್ಮೊಂದಿಗಿದ್ದೇವೆ
ಫಲಾನುಭವಿಗಳಿಗೆ ಇ ರಿಕ್ಷಾ ಮತ್ತು ಪೆಡಲ್ ರಿಕ್ಷಾ ಗಳನ್ನು ವಿತರಿಸಿದ ನರೇಂದ್ರ ಮೋದಿ ಅವರೊಂದಿಗೆ ಬೆರೆತು ಮಾತನಾಡಿದರು.