ವಿಶ್ವದ ಶಾಂತಿದೂತ: ರಷ್ಯಾ ಮತ್ತು ಉಕ್ರೇನ್ ನಡುವೆ ಮೋದಿ ಸಮತೋಲನ ಸಾಧಿಸಿದ್ದು ಹೇಗೆ
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರಾಜತಾಂತ್ರಿಕ ಕುಶಲತೆಯ ಕಾರಣಕ್ಕೆ ಭಾರತ ವಿಶ್ವದ ವೇದಿಕೆಯಲ್ಲಿ ಗಮನಾರ್ಹ ಸ್ಥಾನಕ್ಕೆ ಬಂದು ನಿಂತಿದೆ. ಉಕ್ರೇನ್ಗೆ ಇತ್ತೀಚಿನ ನರೇಂದ್ರ ಮೋದಿ ಭೇಟಿ ಮೂರು ದಶಕದಲ್ಲಿಯೇ ಭಾರತದ ಪ್ರಧಾನಿಯೊಬ್ಬರ ಮೊದಲ ಭೇಟಿಯಾಗಿದೆ.
ಇದು ಭಾರತದಲ್ಲಿ ಮಾತ್ರ ಚರ್ಚೆಗೆ ಕಾರಣವಾಗಿಲ್ಲ, ಜಾಗತಿಕ ಮಟ್ಟಕ್ಕೆ ಅವರ ಸೂಕ್ಷ್ಮ ಸಮತೋಲನದ ಸಾಮರ್ಥ್ಯವನ್ನು ತೋರಿಸಿದೆ. ಈ ಸಮತೋಲಿತ ಕಾರ್ಯ ರಷ್ಯಾ ಮತ್ತು ಉಕ್ರೇನ್ ಜೊತೆಗಿನ ಭಾರತದ ಐತಿಹಾಸಿಕ ಸಂಬಂಧ, ಪ್ರಕ್ಷುದ್ಧ ಪರಿಸ್ಥಿತಿಯಲ್ಲಿ ಪ್ರಧಾನಿ ಮೋದಿ ವಿಶ್ವದ ಶಾಂತಿದೂತ ಎಂಬ ಭರವಸೆ ಮೂಡುವಂತೆ ಮಾಡಿದೆ.

ರಾಜತಾಂತ್ರಿಕ ತಂತ್ರಗಳು
ರಷ್ಯಾದ ಜೊತೆಗಿನ ಭಾರತದ ಸಂಬಂಧ ಶೀತಲ ಸಮರದ ಕಾಲಘಟ್ಟದ್ದು ಸೋವಿಯತ್ ಒಕ್ಕೂಟ ಧೃಡವಾಗಿದ್ದ ಕಾಲ. ಇಂಡೋ-ಸೋವಿಯತ್ ಶಾಂತಿ, ಸ್ನೇಹ ಮತ್ತು ಸಹಕಾರ ಒಪ್ಪಂದಕ್ಕೆ 1971ರಲ್ಲಿ ಸಹಿ ಹಾಕಲಾಯಿತು. ಭಾರತಕ್ಕೆ ರಕ್ಷಣಾ ಉಪಕರಣ, ತಂತ್ರಜ್ಞಾನ ಪೂರೈಕೆಯಲ್ಲಿ ದಶಕಗಳಿಂದ ರಷ್ಯಾ ಪ್ರಮುಖವಾದ ರಕ್ಷಣಾ ಪಾಲುದಾರ. ಮತ್ತೊಂದು ಕಡೆ ಸೋವಿಯತ್ ಒಕ್ಕೂಟದಿಂದ ಸ್ವಾತಂತ್ರ್ಯ ಪಡೆದ ಬಳಿಕ ಉಕ್ರೇನ್ ಸಹ ಭಾರತಕ್ಕೆ ರಕ್ಷಣೆ, ಶಿಕ್ಷಣ ಮತ್ತು ಕೃಷಿ ಕ್ಷೇತ್ರಕ್ಕೆ ಪ್ರಮುಖ ಪಾಲುದಾರ.
ಈ ಸಂಬಂಧಗಳ ಪರಿಣಾಮ ರಷ್ಯಾ-ಉಕ್ರೇನ್ ಸಂಘರ್ಷದ ಸಮಯದಲ್ಲಿ ಅಸಾಧಾರಣ ಸವಾಲು ಎದುರಾಯಿತು. ಪಶ್ಚಿಮವನ್ನು ಮುನ್ನಡೆಸುವ ಯುನೈಟೆಡ್ ಸ್ಟೇಟ್ಸ್ ರಷ್ಯಾದ ವಿರುದ್ಧ ನಿಲ್ಲುವಂತೆ ದೇಶಗಳ ಮೇಲೆ ಒತ್ತಡ ಹಾಕಿತು. ಭಾರತ ತಟಸ್ಥ ನೀತಿಯನ್ನು ಅನುಸರಿಸಿತು, ಶಾಂತಿಯುತ ವಾತಾವರಣವನ್ನು ಪ್ರತಿಪಾದಿಸಿತು. ರಷ್ಯಾವನ್ನು ಏಕಾಂಗಿಯಾಗಿಸುವ ಅಂತರಾಷ್ಟ್ರೀಯ ಒತ್ತಡದ ನಡುವೆಯೂ ಮೋದಿ ಸರ್ಕಾರ ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳ ಜೊತೆ ಸಂಪರ್ಕದಲ್ಲಿತ್ತು. ಪಾಶ್ಚಿಮಾತ್ಯ ನಿರ್ಬಂಧಗಳ ನಡುವೆಯೂ ಭಾರತ ರಷ್ಯಾ ಜೊತೆಗಿನ ಕಚ್ಚಾತೈಲ ಖರೀದಿ ವ್ಯವಹಾರವನ್ನು ಮುಂದುವರೆಸಿತು.

ಮೋದಿ ಉಕ್ರೇನ್ ಭೇಟಿ ಎಲ್ಲರನ್ನೂ ಒಳಗೊಂಡು ಶಾಂತಿಯನ್ನು ಕಾಪಾಡಲು ಭಾರತದ ಬದ್ಧತೆಯ ಸಂಕೇತವಾಗಿದೆ. ರಷ್ಯಾ ಮತ್ತು ಉಕ್ರೇನ್ ಇದನ್ನು ಸ್ವಾಗತಿಸಿವೆ. ಪೂರ್ವ ಮತ್ತು ಪಶ್ಚಿಮದ ನಡುವೆ ಸೇತುವೆಯಾಗಿ ನಿಲ್ಲುವ ಭಾರತದ ವಿಶಿಷ್ಟ ನೀತಿಯನ್ನು ಉಕ್ರೇನ್ ಶ್ಲಾಘಿಸಿದೆ. ಮೋದಿ ಎರಡೂ ದೇಶಗಳಲ್ಲಿ ಭವ್ಯ ಸ್ವಾಗತವನ್ನು ಪಡೆದರು ಮತ್ತು ಅಂತರಾಷ್ಟ್ರೀಯ ವೇದಿಕೆಯಲ್ಲಿ ಅವರ ಗೌರವ ಹೆಚ್ಚಿತು.
ಸಾಮಾಜಿಕ ಜಾಲತಾಣದ ಕುಹುಕ: ಅಪ್ಪ ಯುದ್ಧ ನಿಲ್ಲಿಸಿದರು
ಭಾರತಕ್ಕೆ ವಾಪಸ್ ಆಗುವುದಾದರೆ ಮೋದಿ ಉಕ್ರೇನ್ ಭೇಟಿ ಸಾಮಾಜಿಕ ಜಾಲತಾಣದಲ್ಲಿ ಹೊಸ ವ್ಯಾಖ್ಯಾನದ ಕಿಡಿ ಹೊತ್ತಿಸಿತು. ಲೋಕಸಭೆ ಚುನಾವಣೆ ಸಮಯದಲ್ಲಿ ಹುಟ್ಟಿಕೊಂಡಿದ್ದ 'ಅಪ್ಪ ಯುದ್ಧ ನಿಲ್ಲಿಸಿದರು' ಎಂಬ ಘೋಷಣೆ ಮರುಕಳಿಸಿತು, ಆದರೆ ಈ ಬಾರಿ ಧ್ವನಿ ಬೇರೆಯದೇ ಆಗಿತ್ತು. ಮೋದಿ ಬೆಂಬಲಿಗರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮೋದಿ ರಾಜತಾಂತ್ರಿಕ ಪರಿಶ್ರಮವನ್ನು ಶ್ಲಾಘಿಸಿದರು. ಮೋದಿ ನಿಜವಾಗಿಯೂ ವಿಶ್ವದ ನಾಯಕ, ಭಾರತ ಶಾಂತಿದೂತ ಎಂಬುದು ಇನ್ನಷ್ಟು ಗಟ್ಟಿಗೊಂಡಿದೆ ಎಂಬ ಕಮೆಂಟ್ಸ್ಗಳು ಬಂದವು.
ಟೀಕಾಕಾರರು ಮೋದಿ ಭೇಟಿ ಯುದ್ಧ ಭೂಮಿಯಲ್ಲಿ ಯಾವ ಬದಲಾವಣೆ ತರುತ್ತದೆ ಎಂದು ಪ್ರಶ್ನಿಸಿದರು. ಈ ಭೇಟಿ ಕೇವಲ ಪ್ರಚಾರದ ತಂತ್ರವೇ ಮತ್ತು ಶಾಂತಿ ಮರುಸ್ಥಾಪಿಸಲು ಭಾರತ ಇಟ್ಟ ಮಧ್ಯಸ್ಥಿಕೆಯ ಹೆಜ್ಜೆ ಏನು ಎಂದು ಪ್ರಶ್ನಿಸಿದರು. ಯಾವುದೇ ಬೇರೆ ದೇಶದ ನಾಯಕ ಮಾಡದಂತಹ ಹೆಜ್ಜೆಯನ್ನು ಮೋದಿ ಇಟ್ಟಿದ್ದಾರೆ ಎಂಬುದಂತೂ ಸ್ಪಷ್ಟ. ಇದು ಭಾರತ ವಿಶ್ವದ ಶಾಂತಿದೂತ ಎಂಬ ಪಾತ್ರವನ್ನು ಇನ್ನಷ್ಟು ಗಟ್ಟಿಗೊಳಿಸಿದೆ.
ಶಾಂತಿ ದೂತ
ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳ ನಡುವಿನ ಸಂಘರ್ಷದಲ್ಲಿ ಇಬ್ಬರನ್ನು ಒಂದುಗೂಡಿಸಿಕೊಂಡು ಮಾತುಕತೆ ಮತ್ತು ಶಾಂತಿಗೆ ಪ್ರಯತ್ನಿಸುವ ಭಾರತದ ನಿಲುವು ಮತ್ತು ಮೋದಿಯ ಪ್ರಯತ್ನ ಭಾರತದ ಐತಿಹಾಸಿಕ ಹೊಂದಾಣಿಕೆ ಇಲ್ಲದ ನೀತಿ ಸದ್ಯದ ತಟಸ್ಥ ನೀತಿಯ ಮಧ್ಯಸ್ಥಿಕೆಯ ಭಾಗವಾಗಿದೆ. ವಿಶ್ವದ ವೇದಿಕೆಯಲ್ಲಿ ಹೆಚ್ಚುತ್ತಿರುವ ಭಾರತದ ಹೆಚ್ಚುವರಿ ಪ್ರಭಾವ ಮತ್ತು ರಷ್ಯಾ ಮತ್ತು ಉಕ್ರೇನ್ ನಾಯಕರ ಜೊತೆಗಿನ ಮೋದಿಯ ಸಂಬಂಧ ಎರಡೂ ದೇಶಗಳ ನಡುವಿನ ಮಾತುಕತೆಯಲ್ಲಿ ಭಾರತ ವಹಿಸುವ ಮಹತ್ವದ ಪಾತ್ರವಾಗಿದೆ.
Notice PM Modi keeps his hand on Zelensky's shoulder throughout the video. He appears like an elder brother comforting him.
— Mohit Babu 🇮🇳 (@Mohit_ksr) August 23, 2024
The personal touch in Modiji's Diplomacy 🫰🏻 pic.twitter.com/CCtF9LibY9
ಭಾರತದ ಸ್ವಾತಂತ್ರ್ಯ ಕಾರ್ಯತಂತ್ರ
ರಷ್ಯಾದ ಜೊತೆಗಿನ ಭಾರತದ ಸ್ನೇಹ ಮತ್ತು ವಾಣಿಜ್ಯ ವಹಿವಾಟಿನ ಜೊತೆಗೆ ಸ್ವಾತಂತ್ರ್ಯ ಕಾರ್ಯತಂತ್ರ ರೂಪಿಸಲು ಮೋದಿಯ ಪರಿಣಾಮಕಾರಿ ಪ್ರಯತ್ನ, ಅನುಸಂಧಾನ ಯುನೈಟೆಡ್ ರಾಷ್ಟ್ರಗಳ ಮುಖಪುಟದಲ್ಲಿ ಮೋದಿ ನಿಲ್ಲುವಂತೆ ಮಾಡಿತು. ಇಂದಿನ ಭೌಗೋಳಿಕ ರಾಜಕೀಯದ ನಡುವೆ, ಪೂರ್ವ ಮತ್ತು ಪಶ್ಚಿಮದ ಸಂಘರ್ಷದ ನಡುವೆ ಈ ಸಮತೋಲಿತ ನಿರ್ಧಾರ ಚಿಕ್ಕ ಹೆಜ್ಜೆಯಲ್ಲ. ಮೋದಿಯ ರಾಜತಾಂತ್ರಿಕತೆ, ಸೌರ್ಮಭೌಮತ್ವ ಮತ್ತು ರಾಷ್ಟ್ರೀಯ ಹಿತಾಸಕ್ತಿ ಇದಕ್ಕೆ ಸಹಾಯಕವಾಯಿತು.
ಮೌನಕ್ಕೆ ಶರಣಾದ ವಿರೋಧ ಪಕ್ಷಗಳು
ಮೋದಿ ಭೇಟಿ ದೊಡ್ಡ ಮಟ್ಟದಲ್ಲಿ ಗಮನ ಸೆಳೆಯಿತು. ವಿರೋಧ ಪಕ್ಷಗಳು ಅದರಲ್ಲೂ ಕಾಂಗ್ರೆಸ್ ಸುಧೀರ್ಘ ಮೌನಕ್ಕೆ ಶರಣಾಯಿತು. ಲೋಕಸಭೆ ಚುನಾವಣೆ ಸಮಯದಲ್ಲಿ ಅಪ್ಪ ಯುದ್ಧ ನಿಲ್ಲಿಸಿದರೂ ಎಂಬ ಟೀಕೆ ಮಾಡಿದ್ದ ಪಕ್ಷ ಮೋದಿಯ ರಾಜತಾಂತ್ರಿಕ ನಡೆಯ ಬಗ್ಗೆ ಪ್ರತಿಕ್ರಿಯೆ ಕೊಡಲಿಲ್ಲ. ಭಾರತದ ಜಾಗತಿಕ ನಿಲುವನ್ನು ಬೆಂಬಲಿಸದೆ ಟೀಕಿಸುವುದು ಕಷ್ಟ ಎಂಬುದು ಇದರಿಂದ ತಿಳಿಯಿತು.












Click it and Unblock the Notifications