ರೇಪ್ ಮಾಡಿ, ಬಾಲಕಿಯನ್ನು ಹೂತಿಟ್ಟಿದ್ದ ಅಪ್ಪ, ಅಜ್ಜಿ ಬಂಧನ!
ಮನೆಯಲ್ಲಿ ತಾಯಿ ಇಲ್ಲದಿದ್ದಾಗ ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ, ಘಟನೆ ನೋಡಿದ ನಂತರ ಬಾಲಕಿಯನ್ನು ಕೊಂದ ಅಜ್ಜಿ, ಇಬ್ಬರಿಂದ ಬಾಲಕಿಯ ಶವ ಮನೆಯ ಹಿತ್ತಲಲ್ಲಿ ಗುಟ್ಟಾಗಿ ದಫನ್.
ನಾಸಿಕ್, ಮೇ 22: ತಂದೆಯ ಪ್ರೀತಿ ಹಾಗೂ ಮೊಮ್ಮಕ್ಕಳ ಮೇಲೆ ಅಜ್ಜ- ಅಜ್ಜಿಯ ವಾತ್ಸಲ್ಯಕ್ಕೇ ಕಳಂಕ ಹಚ್ಚುವ ಪ್ರಕರಣವಿದು. ತಂದೆಯೊಬ್ಬ ತನ್ನ ಐದು ವರ್ಷದ ಪುತ್ರಿಯ ಮೇಲೆ ಮನೆಯಲ್ಲೇ ಅತ್ಯಾಚಾರವೆಸಗಿದ್ದಾನೆ.
ಇದನ್ನು ನೋಡಿದ ಆತನ ತಾಯಿ (ಬಾಲಕಿಯ ಅಜ್ಜಿ) ಆ ಮಗು ತನ್ನ ತಾಯಿಯ ಬಳಿ ಈ ವಿಷಯ ತಿಳಿಸೀತೆಂಬ ಹೆದರಿಕೆಯಿಂದ ಆ ಮಗುವನ್ನು ಉಸಿರುಗಟ್ಟಿಸಿ ಕೊಂದಿದ್ದಾಳೆ! ಇಂಥದ್ದೊಂದು ಅಮಾನವೀಯ, ಅಸಹ್ಯಕರ ಘಟನೆ ನಡೆದಿರುವುದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ವಾನಿ ಎಂಬ ತಾಲೂಕಿನ ಜವುಲೇಕ್ ಗ್ರಾಮದಲ್ಲಿ.[ದೆಹಲಿಯಲ್ಲಿ ಮತ್ತೊಬ್ಬ ಯುವತಿಯ ಮೇಲೆ ಅತ್ಯಾಚಾರ!]

ಕಾರಣಾಂತರದಿಂದ ಬಾಲಕಿಯ ತಾಯಿ ಮನೆಯಿಂದ ಹೊರಗೆ ತೆರಳಿದ್ದಾಗ, ಈ ಘಟನೆ ನಡೆದಿದೆ. ಬಾಲಕಿಯನ್ನು ಕೊಂದ ನಂತರ, ತಂದೆ ಸಚಿನ್ ಶಿಂಧೆ ಹಾಗೂ ಆತನ ತಾಯಿ (ಬಾಲಕಿಯ ಅಜ್ಜಿ) ಅನಸೂಯ ಸೇರಿಕೊಂಡು ಮನೆಯ ಹಿತ್ತಲಲ್ಲಿ ಆ ಮಗುವನ್ನು ಹೂತು ಹಾಕಿದ್ದಾರೆ. ಕೆಲ ಹೊತ್ತಿನ ನಂತರ, ತಾಯಿ ಬಂದಾಗ ಮಗು ಎಲ್ಲೋ ತಪ್ಪಿಸಿಕೊಂಡು ಹೋಗಿದೆ ಎಂದು ಗಾಬರಿಯಿಂದ ಹುಡುಕಾಡಿದಂತೆ ನಾಟಕವಾಡಿದ್ದಾರೆ.[ಮದುವೆ ನಿರಾಕರಿಸಿದ್ದಕ್ಕೆ ಯುವತಿಯ ಅತ್ಯಾಚಾರ ಬರ್ಬರ ಕೊಲೆ]
ಪ್ರಕರಣ ಪೊಲೀಸ್ ಠಾಣೆ ಮೆಟ್ಟೇಲಿರಿದೆ. ಆಗ, ಘಟನೆಯ ತನಿಖೆ ಆರಂಭಿಸಿದ ಪೊಲೀಸರಿಗೆ ಬಾಲಕಿಯ ತಂದೆ, ಅಜ್ಜಿಯ ಮೇಲೆ ಅನುಮಾನ ಬಂದಿದೆ. ಈ ಬಗ್ಗೆ ವಿಚಾರಣೆ ನಡೆಸಲಾಗಿ, ಪೊಲೀಸರ ಮುಂದೆ ಅಜ್ಜಿ ಆ ಹತ್ಯೆಯ ವಿಚಾರ ಬಾಯಿಬಿಟ್ಟಿದ್ದಾರೆಂದು ಜಿಲ್ಲೆಯ ಉಪ ಪೊಲೀಸ್ ವರಿಷ್ಠಾಧಿಕಾರಿ ದೇವದಾಸ್ ಪಾಟೀಲ್ ಹೇಳಿದ್ದಾರೆ.
{promotion-urls}
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications