FASTag ಇಂದಿನಿಂದ ಕಡ್ಡಾಯ: ತಪ್ಪಿದರೆ ದುಪ್ಪಟ್ಟು ದಂಡ
Recommended Video
ನವದೆಹಲಿ, ಜನವರಿ 16: ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಎಲ್ಲ ಟೋಲ್ ಪ್ಲಾಜಾಗಳಲ್ಲಿ ಗುರುವಾರದಿಂದ ಫಾಸ್ಟ್ಟ್ಯಾಗ್ ಬಳಕೆ ಕಡ್ಡಾಯವಾಗಿದೆ. ಫಾಸ್ಟ್ಟ್ಯಾಗ್ ಹೊಂದಿಲ್ಲದ ವಾಹನ ಸವಾರರು ದುಪ್ಪಟ್ಟು ಸುಂಕ ತೆರಬೇಕಾಗುತ್ತದೆ.
ಫಾಸ್ಟ್ಟ್ಯಾಗ್ ಅಳವಡಿಕೆಗೆ ಈಗಾಗಲೇ ಎರಡು ಬಾರಿ ಅಂತಿಮ ಗಡುವನ್ನು ವಿಸ್ತರಿಸಿದ್ದ ಕೇಂದ್ರ ಸರ್ಕಾರ, ಕಳೆದ ತಿಂಗಳು ನೀಡಿದ್ದ ಜ.15ರ ಗಡುವು ಅಂತ್ಯಗೊಂಡಿದೆ. ಹೀಗಾಗಿ ಗುರುವಾರದಿಂದ ನಿಯಮ ಜಾರಿಯಾಗಿದೆ.
ಅತ್ಯಧಿಕ ನಗದು ವ್ಯವಹಾರ ನಡೆಯುವ 65 ಆಯ್ದ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಟ್ಯಾಗ್ ನಿಯಮದಲ್ಲಿ ಕೊಂಚ ವಿನಾಯಿತಿ ನೀಡಲಾಗಿದೆ. ಉತ್ತರ ಪ್ರದೇಶ, ಗುಜರಾತ್, ರಾಜಸ್ಥಾನ, ಪಂಜಾಬ್, ಚಂಡೀಗಢ ಮತ್ತು ಆಂಧ್ರಪ್ರದೇಶದ ಪ್ಯಾನ್ ಇಂಡಿಯಾದ 65 ಟೋಲ್ ಪ್ಲಾಜಾಗಳಲ್ಲಿ ಶೇ 100ರಷ್ಟು ಕಡ್ಡಾಯ ಫಾಸ್ಟ್ಟ್ಯಾಗ್ ಜಾರಿಯಾಗಿಲ್ಲ.

ಮುಂದಿನ 30 ದಿನಗಳವರೆಗೆ ಈ 65 ಟೋಲ್ ಪ್ಲಾಜಾಗಳಲ್ಲಿ ಶೇ 75ರಷ್ಟು ಲೇನ್ಗಳು ಫಾಸ್ಟ್ಟ್ಯಾಗ್ ಲೇನ್ ಗಳಾಗಿರಲಿದ್ದು, ಉಳಿದ ಶೇ 25 ಲೇನ್ಗಳಲ್ಲಿ ನಗದು ರೂಪದಲ್ಲಿ ಟೋಲ್ ಸ್ವೀಕೃತಿಗೆ ಅನುಮತಿ ನೀಡಲಾಗಿದೆ.
ಫಾಸ್ಟ್ಟ್ಯಾಗ್ ಹೊಂದಿಲ್ಲದ ವಾಹನಗಳು ದೇಶದೆಲ್ಲೆಡೆ ರಾಷ್ಟ್ರೀಯ ಹೆದ್ದಾರಿಗಳ ಸುಂಕದ ಕಟ್ಟೆಗಳಲ್ಲಿ ದುಪ್ಪಟ್ಟು ದಂಡ ತೆರಬೇಕಿರುವುದು ಅನಿವಾರ್ಯವಾಗಿದೆ. ಆದರೆ ನಿಮ್ಮ ಕಾರ್ ಮೇಲಿನ ಫಾಸ್ಟ್ಟ್ಯಾಗ್ ಕೆಲಸ ಮಾಡದೆ ಹೋದರೆ ಏನು ಮಾಡುವುದು? ಒಂದು ವೇಳೆ ಫಾಸ್ಟ್ಟ್ಯಾಗ್ ಸ್ಕ್ಯಾನ್ ಮಾಡಲು ಪ್ರತಿ ಲೇನ್ಗಳಲ್ಲಿ ಅಳವಡಿಸಿರುವ ಯಂತ್ರಗಳು ವಿಫಲವಾದರೆ ವಾಹನಗಳಿಂದ ಟೋಲ್ ಸಂಗ್ರಹಿಸದೆ ಉಚಿತವಾಗಿ ಮುಂದೆ ಸಾಗಲು ಬಿಡುವಂತೆ ಸರ್ಕಾರ ಸೂಚಿಸಿದೆ.
ವಾಹನ ಬಳಕೆದಾರರು ಸೂಕ್ತ ಹಾಗೂ ಕಾರ್ಯನಿರ್ವಹಿಸುತ್ತಿರುವ ಫಾಸ್ಟ್ಟ್ಯಾಗ್ ಹೊಂದಿದ್ದರೆ ಮತ್ತು ಸಂಪರ್ಕಿಸಿರುವ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಹೊಂದಿದ್ದರೆ, ಟೋಲ್ ಫ್ಲಾಜಾದಲ್ಲಿ ಅಳವಡಿಸಿರುವ ವಿದ್ಯುನ್ಮಾನ ಸುಂಕ ಸಂಗ್ರಹ ಸಾಧನವು ಅದನ್ನು ಸರಿಯಾಗಿ ಗುರುತಿಸುವಲ್ಲಿ ವಿಫಲವಾದರೂ ಬಳಕೆದಾರರು ಯಾವುದೇ ಹಣ ತೆರದೆ ಮುಕ್ತವಾಗಿ ಪ್ಲಾಜಾವನ್ನು ದಾಟಿ ಸಾಗಲು ಅನುವು ಮಾಡಿಕೊಡಲಾಗಿದೆ. ಅಂತಹ ಎಲ್ಲ ವರ್ಗಾವಣೆಗಳಿಗೂ ಶೂನ್ಯ ವರ್ಗಾವಣೆ ರಶೀದಿಯನ್ನು ನೀಡುವುದು ಕಡ್ಡಾಯವಾಗಿದೆ.
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ












Click it and Unblock the Notifications