ಕುಸಿಯುತ್ತಿರುವ ಆಹಾರ ಪದಾರ್ಥಗಳ ಬೆಲೆಯೆಂಬ ಎರಡು ಅಲುಗಿನ ಕತ್ತಿ
ನವದೆಹಲಿ, ಅಕ್ಟೋಬರ್ 25: ಕಳೆದ ಕೆಲ ತಿಂಗಳಿಂದ ಕುಸಿಯುತ್ತಿರುವ ಆಹಾರ ಪದಾರ್ಥದ ಬೆಲೆಗಳಿಂದ ಹಣದುಬ್ಬರವನ್ನು ನಿಯಂತ್ರಿಸುವುದು ಸರಕಾರದಿಂದ ಸಾಧ್ಯವಾಗಿದೆ. ಆದರೆ ಇದರಿಂದ ಬಜೆಟ್ ವೆಚ್ಚದಲ್ಲಿ ಸಮಸ್ಯೆಯಾಗುತ್ತದೆ. ಉತ್ತಮ ಬೆಳೆ ಹಾಗೂ ಉತ್ಪನ್ನ ಹೆಚ್ಚಾಗಿದ್ದು, ಇದರಿಂದ ಆಹಾರ ಪದಾರ್ಥಗಳ ಬೆಲೆ ಕಡಿಮೆಯಾಗಿ, ಎರಡು ಅಲುಗಿನ ಕತ್ತಿಯಂತಾಗಿದೆ.
ಹಣದುಬ್ಬರ ದರವು ಕಡಿಮೆ ಆಗಿ, ಆಹಾರ ಪದಾರ್ಥಗಳ ಬೆಲೆ ಕಡಿಮೆ ಆಗಿರುವುದರಿಂದ ಕೆಲವು ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವುದು ಸರಕಾರಕ್ಕೆ ಅನಿವಾರ್ಯ ಆಗುತ್ತದೆ. ಕನಿಷ್ಠ ಬೆಂಬಲ ಬೆಲೆ ನೀತಿಯನ್ನು ಸರಕಾರ ಜಾರಿಗೆ ತಂದಿದ್ದು, ಇನ್ನು ನಾಲ್ಕು ವರ್ಷದಲ್ಲಿ ಕೃಷಿ ಆದಾಯ ದ್ವಿಗುಣಗೊಳ್ಳಬೇಕು ಎಂಬ ಗುರಿ ಹೊಂದಿದ್ದಾರೆ.
ಬಜೆಟ್ ಸಮಸ್ಯೆಗಳನ್ನು ಪಕ್ಕಕ್ಕಿಟ್ಟು ಹೇಳುವುದಾದರೆ ಹಣದುಬ್ಬರ ದರವು ನಿಯಂತ್ರಣದಲ್ಲಿ ಇರುವುದು ಗ್ರಾಹಕರಿಗೆ ಒಳ್ಳೆಯದೇ. ಭತ್ತ, ಹಾಲು ಮತ್ತು ಎಣ್ಣೆಕಾಳುಗಳ ದರ ಇಳಿಕೆ ಆಗಿದ್ದರೆ, ಬೇಳೆ ಕಾಳುಗಳು, ಗೋಧಿ ಮತ್ತು ಅಲೂಗಡ್ಡೆ ದರವು ಕ್ರಮವಾಗಿ 5.54%, 8.87% ಮತ್ತು 80.13% ಕ್ರಮವಾಗಿ ಏರಿಕೆ ಆಗಿದೆ. ಇದು ಕಳೆದ ವಾರ ಬಿಡುಗಡೆಯಾದ ದತ್ತಾಂಶದಲ್ಲಿ ಬಯಲಾಗಿದೆ.

ಸಗಟು ದರದಲ್ಲಿ ಈರುಳ್ಳಿ, ಮೊಟ್ಟೆ ಮತ್ತು ಮಾಂಸದ ಹಣದುಬ್ಬರದಲ್ಲಿ ಇಳಿಕೆಯಾಗಿದೆ. ಕಚ್ಚಾ ತೈಲ ಬೆಲೆ ಏರಿಕೆ ಆದಾಗ ಹಣದುಬ್ಬರ ಏರಬಹುದು ಎಂದುಕೊಂಡಿದ್ದರು. ಏಕೆಂದರೆ ಇದು ಒಂದಕ್ಕೆ ಒಂದು ನಂಟು ಹಾಕಿಕೊಂಡಿತ್ತು. ತೈಲ ಬೆಲೆ ಹೇಗೆ ಮೇಲ್ಮಟ್ಟಕ್ಕೆ ಅಥವಾ ಕೆಳಕ್ಕೆ ಸಾಗುತ್ತದೋ ಅದೇ ದಿಕ್ಕಿನಲ್ಲಿ ಹಣದುಬ್ಬರ ಸಾಗುತ್ತದೆ.
ಕಚ್ಚಾ ತೈಲ ಬೆಲೆ ಏರಿಕೆಯು ಆರ್ಥಿಕ ಹಾಗೂ ವಿತ್ತೀಯ ಕೊರತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದರಿಂದ ಹಣಕಾಸು ನೀತಿ, ಹೂಡಿಕೆ ಸ್ವಭಾವದ ಮೇಲೆ ಕೂಡ ಪರಿಣಾಮ ಆಗುತ್ತದೆ. ಹಣದುಬ್ಬರವನ್ನು ಜನ ಸಾಮಾನ್ಯರಿಗೆ ಅರ್ಥ ಆಗುವಂತೆ ಹೇಳುವುದಾದರೆ, ಮಾರುಕಟ್ಟೆಯಲ್ಲಿ ವಸ್ತು ಖರೀದಿಸುವುದರ ಮೇಲೆ ಆಗುವ ಪರಿಣಾಮ.
ಹಣದುಬ್ಬರ ನಿಯಂತ್ರಣದಲ್ಲಿದೆ ಅಂದರೆ ಬೆಲೆ ಏರಿಕೆಯು ಸರಕಾರದ ನಿಯಂತ್ರಣದಲ್ಲಿದೆ ಎಂದರ್ಥ. ಇದು ಗ್ರಾಹಕರಿಗೆ ಒಳ್ಳೆ ಸುದ್ದಿ. ಆದರೆ ಖರ್ಚಿನ ವಿಚಾರವಾಗಿ ಸರಕಾರಕ್ಕೆ ತೊಂದರೆ. ಈ ವರ್ಷ ಸೆಪ್ಟೆಂಬರ್ ನಲ್ಲಿ ಸಗಟು ದರ ಸೂಚ್ಯಂಕ 5.13% ತಲುಪಿತ್ತು. ಇದೇ ವರ್ಷದ ಆಗಸ್ಟ್ ನಲ್ಲಿ ಆ ಪ್ರಮಾಣ 4.53% ಇತ್ತು.
ತ್ರೈಮಾಸಿಕದ ಕೊನೆ ಸೆಪ್ಟೆಂಬರ್ 2018ಕ್ಕೆ ಸಗಟು ದರ ಸೂಚ್ಯಂಕವು 4.98% ಇತ್ತು. ಗ್ರಾಹಕ ದರ ಸೂಚ್ಯಂಕವು ಇದೇ ಅವಧಿಯಲ್ಲಿ 3.88% ಏರಿಕೆ ಆಗಿದೆ. ಕಳೆದ ಮೂರು ತ್ರೈ ಮಾಸಿಕದಲ್ಲಿ 4%ಗೂ ಹೆಚ್ಚು ಏರಿಕೆ ಆಗಿದೆ.
ಇದಕ್ಕೂ ಮುನ್ನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸಗಟು ದರ ಸೂಚ್ಯಂಕ ಹಣದುಬ್ಬರವನ್ನು ಹಣಕಾಸು ನೀತಿ ನಿರೀಕ್ಷೆಗಳಿಗೆ ಬಳಸುತ್ತಿತ್ತು. ಆದರೆ ಈಗ ಗ್ರಾಹಕ ದರ ಸೂಚ್ಯಂಕವನ್ನು ಬಳಸುತ್ತಿದೆ. ಗ್ರಾಹಕರ ದೃಷ್ಟಿಯಿಂದ ಹೇಳುವುದಾದರೆ ಗ್ರಾಹಕ ದರ ಸೂಚ್ಯಂಕವನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಒಳಿತು. ಗ್ರಾಹಕ ದರದಲ್ಲಿ ಏನಾಗುತ್ತಿದೆ ಎಂದು ತಿಳಿಯಲು ಇದು ಒಳ್ಳೆ ಅಳತೆಗೋಲು.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications