ಭಾರತಕ್ಕೆ ಖೋಟಾ ನೋಟು ಬರುವುದು ಎಲ್ಲಿಂದ?
ಕೋಲ್ಕತ್ತಾ, ಮೇ 26: ಒಂದು ವರ್ಷದ ಅವಧಿಯಲ್ಲಿ ಭಾರತದ ಒಳಕ್ಕೆ ಹರಿದುಬಂದ ಖೋಟಾ ನೋಟುಗಳ ಮೌಲ್ಯ ಲೆಕ್ಕ ಹಾಕಿದರೆ ನಿಜಕ್ಕೂ ದಿಗಿಲಾಗುತ್ತದೆ. 2013-2014 ರ ಅವಧಿಯಲ್ಲಿ ಭಾರತದ ಒಳ ಪ್ರವೇಶಿಸಿದ ಖೋಟಾ ನೋಟುಗಳ ಮೌಲ್ಯ ಬರೋಬ್ಬರಿ 1500 ಕೋಟಿ ರೂ.!
ಕೇಂದ್ರ ಗುಪ್ತಚರ ದಳದ ವರದಿ ಹೇಳುವಂತೆ ಪಶ್ಚಿಮ ಬಂಗಾಳದ ಮಾರ್ಗವಾಗಿಯೇ ಇಷ್ಟೊಂದು ಪ್ರಮಾಣದ ನಕಲಿ ಹಣ ಹರಿದು ಬಂದಿದ್ದು ದೇಶದ ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ.[ನೋಟು ನೋಡದೆ ಕಿಸೆಗೆ ಹಾಕಿದ್ರೆ ಕಥೆ ಮುಗೀತು!]

ನಕಲಿ ಹಣದ ಜಾಲಕ್ಕೆ ಸಂಬಂಧಿಸಿ ಬಂಧಿತನಾಗಿರುವ ಷಹಜಾನ್ ನೀಡಿರುವ ಮಾಹಿತಿಗಳು ದಂಗು ಬಡಿಸುತ್ತದೆ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಮಾರ್ಗವಾಗಿ ದೇಶದೊಳಕ್ಕೆ ನಕಲಿ ಹಣ ಹರಿದು ಬಂದಿದೆ. ಪಾಕಿಸ್ತಾನದ ರುಪಾಯಿ ಮುದ್ರಿಸುವ ಕಾಗದದಲ್ಲಿತಯೇ ಈ ನಕಲಿ ಹಣ ಮುದ್ರಣ ಮಾಡಲಾಗಿರುವುದು ಕಂಡುಬಂದಿದೆ.
ಬಂಧಿತ ಬಾಯಿ ಬಿಟ್ಟ ಕರಾಳ ಸತ್ಯ
ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಖೋಟಾ ನೋಟು ಜಾಲದ ಕಿಂಗ್ ಪಿನ್ ಷಹಜಾನ್ ನನ್ನು ಬಂಧನ ಮಾಡಿದಾಗ ಆತನ ಬಳಿ 20 ಲಕ್ಷ ರು ಗೂ ಅಧಿಕ ನಕಲಿ ಹಣ ಪತ್ತೆಯಾಗಿತ್ತು. ಮೂರು ದೇಶಗಳ ನಡುವಿನ ನಕಲಿ ಹಣ ರವಾನೆಯ ಕೊಂಡಿಯಾಗಿ ಆತ ಕೆಲಸ ಮಾಡುತ್ತಿದ್ದ ಎಂಬ ಸಂಗತಿ ನಂತರ ಬಹಿರಂಗವಾಗಿತ್ತು.
ತನ್ನದೇ ಒಂದು ತಂಡ ಕಟ್ಟಿಕೊಂಡಿದ್ದ ಷಹಜಾನ್ ಪಾಕಿಸ್ತಾನದಿಂದ ಬಾಂಗ್ಲಾದೇಶದ ಮುಖಾಂತರ ನಕಲಿ ಹಣವನ್ನು ಭಾರತದ ಒಳಕ್ಕೆ ತರುತ್ತಿದ್ದ. ನಂತರ ಇಲ್ಲಿಂದ ಬೇರೆ ನಗರಗಳಿಗೆ ರವಾನೆ ಮಾಡುತ್ತಿದ್ದ.[ಗೋಲ್ ಮಾಲ್ ಮೆಸೇಜ್ ನಂಬಿ ಉತ್ರ ಕೊಟ್ರೇ...!]
ಪಾಕಿಸ್ತಾನದ ಕಾಗದದಲ್ಲಿ ಭಾರತದ ಕರೆನ್ಸಿ
ಪಾಕಿಸ್ತಾನದ ರುಪಾಯಿ ತಯಾರು ಮಾಡುವ ಕಾಗದದಲ್ಲಿಯೇ ಭಾರತದ ಹಣ ತಯಾರಾಗಿದ್ದು ಖೋಟಾ ನೋಟು ಧಂದೆಯ ಕರಾಳ ಮುಖವನ್ನು ಸಾರುತ್ತದೆ. ವಾಟರ್ ಮಾರ್ಕ್ ನ್ನು ಸಹ ಈ ಆರ್ಥಿಕ ಉಗ್ರವಾದಿಗಳು ಬಳಸಿಕೊಂಡಿದ್ದಾರೆ. ನಮ್ಮ ದೇಶದ ಅಸಲಿ ಮತ್ತು ಒಳಕ್ಕೆ ಬಂದ ನಕಲಿ ಹಣದ ನಡುವಿನ ವ್ಯತ್ಯಾಸ ಕಣ್ಣಿಂದ ಗುರುತಿಸಲಾಗದಂತೆ ಜಾಣ್ಮೆ ಮೆರೆದಿದ್ದಾರೆ!
ಕೇಂದ್ರ ಗುಪ್ತಚರದಳ ತಿಳಿಸಿರುವಂತೆ ಬಾಂಗ್ಲಾದೇಶ-ಪಶ್ಚಿಮ ಬಂಗಾಳ ಮಾರ್ಗವಾಗಿಯೇ ಖೋಟಾ ನೋಟುಗಳು ಹರಿದು ಬರುತ್ತಿವೆ. ಪೊಲೀಸ್ ಮತ್ತು ಗೃಹ ಇಲಾಖೆಯ ಕಣ್ಣು ತಪ್ಪಿಸುವುದನ್ನು ಆರ್ಥಿಕ ಉಗ್ರರು ಕರಗತ ಮಾಡಿಕೊಂಡಿದ್ದಾರೆ. ಪಾಕಿಸ್ತಾನ ಯಾವ ಬಗೆಯಲ್ಲಿ ಭಾರತದ ಆರ್ಥಿಕತೆಯನ್ನು ಹಾಳು ಮಾಡಲು ಮುಂದಾಗುತ್ತಿದೆ ಎಂಬುದಕ್ಕೆ ಈ ಖೋಟಾ ನೋಟಿನ ಹಾವಳಿಯೇ ಸಾಕ್ಷಿ.
ಮಹಾನಗರಗಳಿಗೆ ಬಂದ ಖೋಟಾ ನೋಟುಗಳು ಅಲ್ಲಿಂದ ಚಿಕ್ಕ ಚಿಕ್ಕ ಪಟ್ಟಣಕ್ಕೆ ರವಾನೆಯಾಗುತ್ತವೆ. ಈ ಜಾಲವನ್ನು ಬೇಧಿಸಲು ನಿರಂತರ ಪ್ರಯತ್ನ ಮಾಡಲಾಗುತ್ತಿದ್ದರೂ ಪರಿಣಾಮ ಸಾಧ್ಯವಾಗುತ್ತಿಲ್ಲ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications