ಸುಪ್ರೀಂ ತೀರ್ಪು: ಸಾಮಾಜಿಕ ನ್ಯಾಯಕ್ಕೆ ಹಿನ್ನಡೆ ಎಂದ ತಮಿಳುನಾಡು ಪಕ್ಷಗಳು
ಚೆನ್ನೈ, ನವೆಂಬರ್ 7: ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಸುಪ್ರೀಂಕೋರ್ಟ್ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ನೀಡಿರುವ ಶೇ. 10ರಷ್ಟು ಮೀಸಲಾತಿನ್ನು ಎತ್ತಿ ಹಿಡಿದಿರುವುದು ಸಾಮಾಜಿಕ ನ್ಯಾಯದ ಪರವಾಗಿ ರಾಜ್ಯದ ಶತಮಾನಗಳಷ್ಟು ಹಳೆಯ ಹೋರಾಟಕ್ಕೆ ಆದ ಹಿನ್ನಡೆಯಾಗಿದೆ ಎಂದು ಹೇಳಿದೆ.
ಡಿಎಂಕೆ, ಪಿಎಂಕೆ ಮತ್ತು ಎಎಂಎಂಕೆ ಮತ್ತು ವಿಸಿಕೆ ಆರ್ಥಿಕ ಸ್ಥಿತಿಯನ್ನು ಸಾಮಾಜಿಕ ನ್ಯಾಯದ ಸೂಚಕವಾಗಿ ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ನ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿವೆ. ಆದಾಗ್ಯೂ, ಪ್ರಧಾನ ವಿರೋಧ ಪಕ್ಷವಾದ ಎಐಎಡಿಎಂಕೆ ಈ ವಿಷಯದ ಬಗ್ಗೆ ಬರೆಯುವ ತನಕ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ತಮಿಳುನಾಡಿನಲ್ಲಿ ಚಾಲ್ತಿಯಲ್ಲಿರುವ 69 ಪ್ರತಿಶತ ಮೀಸಲಾತಿಯನ್ನು ನೀಡಿರುವುದು ಅಸ್ಪೃಶ್ಯರಿಗೆ ಎಂದು ಖಚಿತಪಡಿಸಿಕೊಳ್ಳುವಂತೆ ದಿನಕರನ್ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರನ್ನು ಪ್ರಶ್ನಿಸಿದ್ದಾರೆ. ಆದರೆ ವಿಸಿಕೆಯ ತೋಳ್ ತಿರುಮಾವಳವನ್ ತಮ್ಮ ಪಕ್ಷವು ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸುತ್ತದೆ ಎಂದು ಹೇಳಿದರು.
ತಮಿಳುನಾಡಿನ ಎಲ್ಲಾ ಪಕ್ಷಗಳು ಈ ಕೋಟಾವನ್ನು ವಿರೋಧಿಸುತ್ತವೆ. ಏಕೆಂದರೆ ಆರ್ಥಿಕ ಸ್ಥಿತಿಯು ಮೀಸಲಾತಿಯನ್ನು ಒದಗಿಸುವ ಸೂಚಕವಾಗುವುದಿಲ್ಲ ಎಂದು ಅವರು ಭಾವಿಸುತ್ತಾರೆ. ಅದು ಕೇವಲ ಸಾಮಾಜಿಕ ಸ್ಥಾನಮಾನವಾಗಿರಬೇಕು ಎಂದು ವಾದಿಸುತ್ತಾರೆ. 2019 ರಲ್ಲಿ ಕೋಟಾವನ್ನು ಪರಿಚಯಿಸಿದಾಗ ಅದನ್ನು ಬೆಂಬಲಿಸಿದ ಕಾಂಗ್ರೆಸ್ ಮತ್ತು ಎಡ ಪಕ್ಷಗಳು ತೀರ್ಪಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಸುಪ್ರೀಂಕೋರ್ಟ್ನ ತೀರ್ಪನ್ನು ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಶತಮಾನದ ಸುದೀರ್ಘ ಹೋರಾಟದಲ್ಲಿ ಹಿನ್ನಡೆ ಎಂದು ಪರಿಗಣಿಸಬೇಕಾಗಿದೆ ಎಂದು ಸ್ಟಾಲಿನ್ ಹೇಳಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪರಿಚಯಿಸಿದ ಇಡ್ಲ್ಯೂಎಸ್ ಕೋಟಾದ ವಿರುದ್ಧ ಕಾನೂನು ಹೋರಾಟವನ್ನು ಡಿಎಂಕೆ ಮುನ್ನಡೆಸುತ್ತಿದೆ ಎಂದು ಹೇಳಿದರು.

ಪ್ರತಿಭಟನೆಗೆ ತಮಿಳು ಪಕ್ಷಗಳು ಸಜ್ಜು
ನಮ್ಮ ಮುಂದಿನ ಕ್ರಮವನ್ನು ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ತೀರ್ಪಿನ ವಿವರವಾದ ವಿಶ್ಲೇಷಣೆಯ ನಂತರ ನಿರ್ಧರಿಸಲಾಗುವುದು. ಸಾಮಾಜಿಕ ನ್ಯಾಯವನ್ನು ಕಾಪಾಡಲು ಮೊದಲ ಸಾಂವಿಧಾನಿಕ ತಿದ್ದುಪಡಿಗೆ ದಾರಿ ಮಾಡಿಕೊಟ್ಟ ತಮಿಳುನಾಡಿನ ನೆಲದಿಂದ ಸಮಾನ ಮನಸ್ಕ ಪಕ್ಷಗಳು ದೇಶದಾದ್ಯಂತ ಸಾಮಾಜಿಕ ನ್ಯಾಯದ ಧ್ವನಿಯನ್ನು ಪ್ರತಿಧ್ವನಿಸಲು ಒಂದಾಗುತ್ತವೆ ಎಂದು ಅವರು ಹೇಳಿದರು.

ಅನ್ಯಾಯದ ವಿರುದ್ಧ ಹೋರಾಡಬೇಕು
ಅವರ ಪುತ್ರ ಮತ್ತು ಡಿಎಂಕೆ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಕೂಡ ಆಕ್ಷೇಪಿಸಿದ್ದು ತೀರ್ಪು ಹಿಂದುಳಿದ,ಎಸ್ಸಿ,ಎಸ್ಟಿಗಳಿಗೆ ಆದ ಅನ್ಯಾಯ. ಸಾಮಾಜಿಕ ನ್ಯಾಯದ ಸಹಾಯದಿಂದ ಪ್ರಗತಿ ಸಾಧಿಸುವ ಜನರಿಗೆ ಇದು ಅಡಚಣೆಯಾಗಿದೆ. ನಾವೆಲ್ಲರೂ ಒಗ್ಗೂಡಿ ಈ ಅನ್ಯಾಯದ ವಿರುದ್ಧ ಹೋರಾಡಬೇಕು ಎಂದು ಹೇಳಿದರು.

ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ಮೀಸಲಾತಿ ನೀಡಲಿ
ಈ ತೀರ್ಪು ದೇಶದಲ್ಲಿ ಅನುಸರಿಸುತ್ತಿರುವ ಸಾಮಾಜಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ. ಭಾರತವು ಅಸಮಾನ ಸಮಾಜವನ್ನು ಹೊಂದಿರುವ ದೇಶವಾಗಿದೆ. ಸಮಾನತೆಯನ್ನು ಖಾತ್ರಿಪಡಿಸಲು ಸಾಮಾಜಿಕ ಸ್ಥಾನಮಾನದ ಆಧಾರದ ಮೇಲೆ ಮೀಸಲಾತಿ ನೀಡಬೇಕು, ಆರ್ಥಿಕ ಸ್ಥಿತಿಯಲ್ಲ. ಜನರ ಆರ್ಥಿಕ ಸ್ಥಿತಿಯು ಕಾಲಕಾಲಕ್ಕೆ ಬದಲಾಗುತ್ತದೆ ಮತ್ತು ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಮೀಸಲಾತಿಗಳು ಬಡತನ ನಿರ್ಮೂಲನೆ ಕಾರ್ಯಕ್ರಮವಾಗಿದೆ. ಇದು ಎಂದಿಗೂ ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವುದಿಲ್ಲ ಎಂದು ಪಿಎಂಕೆ ಮುಖ್ಯಸ್ಥ ಮತ್ತು ಮಾಜಿ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಹೇಳಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧ ಹೋರಾಡಲು ಕರೆ
ಮೀಸಲಾತಿಯ ಸಮಸ್ಯೆಯನ್ನು ರಾಜಕೀಯ ಜಾಗದಲ್ಲಿ ಪರಿಹರಿಸಬೇಕೇ ಹೊರತು ನ್ಯಾಯಾಂಗದಿಂದಲ್ಲ. ಬಹುಸಂಖ್ಯಾತ ಹಿಂದೂಗಳನ್ನು ರೂಪಿಸುವ ಒಬಿಸಿ ಜನರ ವಿರುದ್ಧ ಬಿಜೆಪಿ ಸರ್ಕಾರದ ಇಡ್ಲ್ಯೂಎಸ್ ಕೋಟಾ ವಿರುದ್ಧ ಹೋರಾಡಲು ನಾವು ಎಲ್ಲರಿಗೂ ಮನವಿ ಮಾಡುತ್ತೇವೆ. ಕಾಂಗ್ರೆಸ್ ಮತ್ತು ಎಡ ಪಕ್ಷಗಳು ತಮ್ಮ ನಿಲುವು ಬದಲಿಸುವಂತೆ ಮತ್ತು ಇಡಬ್ಲ್ಯೂಎಸ್ ಕೋಟಾವನ್ನು ವಿರೋಧಿಸುವಂತೆ ನಾವು ಮನವಿ ಮಾಡುತ್ತೇವೆ ಎಂದು ತಿರುಮಾವಳವನ್ ಹೇಳಿದ್ದಾರೆ.












Click it and Unblock the Notifications