ಉಪ್ಪಿನ ಬೆಲೆ ಕೆಜಿಗೆ 150 ರೂ ಆಯ್ತಪ್ಪಾ!

ನಿಜಕ್ಕೂ Essential Commodity: ಇತ್ತೀಚೆಗೆ ಒಡಿಶಾದಲ್ಲಿ ಕೆಜಿ ಉಪ್ಪು 60 ರೂ. ಗೆ ತಲುಪಿತ್ತು. ಅದರ ಬೆನ್ನಿಗೇ ಈಗ ಬಿಹಾರದಲ್ಲಿ ಒಂದು ಕೆಜಿ ಉಪ್ಪು 150 ರೂ.ಗೆ ಮಾರಾಟವಾಗತೊಡಗಿದೆ. ಒಡಿಶಾದಲ್ಲಿ ಕಾಣಿಸಿಕೊಂಡ ಉಪ್ಪಿನ ಕೊರತೆದ ವದಂತಿ ಪಕ್ಕದ ಬಿಹಾರದಲ್ಲು ಕೇಳಿಬಂದಿದೆ. ಅಂದಹಾಗೆ, ಭಾರತದ ಉಪ್ಪಿನ ರಾಜಧಾನಿ ಗುಜರಾತ್. ಇಲ್ಲಿ ಉಪ್ಪು ಉತ್ಪಾದನೆ ಹೇರಳವಾಗಿದೆ.
ಉಪ್ಪಿಗೆ ತತ್ವಾರ: ಉಪ್ಪಿನ ಬೆಲೆ 150 ರೂ ಆಗಿದೆಯಂತೆ ಎಂಬ ಆತಂಕಕಾರಿ ಸುದ್ದಿ ವ್ಯಾಪಕವಾಗಿ ಹರಡುತ್ತಿದ್ದಂತೆ, ಉಪ್ಪಿನ ಬೆಲೆ ತೀವ್ರ ಬೆಲೆ ಏರಿಕೆ ಕಂಡಿದೆ. ಆದರೆ, ರಾಜ್ಯದಲ್ಲಿ ಉಪ್ಪಿಗೆ ಕೊರತೆ ಇಲ್ಲ. ಇದೊಂದು ಸುಳ್ಳು ಪ್ರಚಾರ. ಅಷ್ಟೊಂದು ಬೆಲೆ ಕೊಟ್ಟು ಉಪ್ಪು ಖರೀದಿಸಬೇಡಿ ಎಂದು ಬಿಹಾರ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಶ್ಯಾಮ್ ರಝಾಕ್ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಬಿಹಾರದ ಗ್ರಾಮಾಂತರ ಪ್ರದೇಶಗಳಲ್ಲಿ ಉಪ್ಪಿನ ಬೆಲೆ ಗಗನದೆತ್ತರಕ್ಕೇರಿದ ಎಂದು ಹೇಳಲಾಗಿದೆ. ಸಿತಾಮರಿ, ಸಮಷ್ಟಿಪುರ, ಮಧುಬನಿ, ಶೋಹರ್ ಜಿಲ್ಲೆಗಳಲ್ಲಿ 50ರಿಂದ 150 ರೂ.ವರೆಗೆ ಉಪ್ಪು ದರ ಏರಿದೆ. ಉಪ್ಪು ಅಲಭ್ಯತೆ ಸುಳ್ಳು ವದಂತಿಯಿಂದ ವ್ಯಾಪಾರಿಗಳ ಕಿಸೆ ತುಂಬಿದೆ.
ಗಾಯದ ಮೇಲೆ ಉಪ್ಪು ಸುರಿದಂತೆ:
ಇದೇ ವೇಳೆ ಬಿಹಾರ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಗುರುವಾರ ಟ್ವೀಟ್ ಮಾಡಿ ರಾಜ್ಯದ ಹಲವು ಭಾಗಗಳಲ್ಲಿ ಒಂದು ಕೆಜಿ ಉಪ್ಪು 100 ರೂ.ಗೆ ಮಾರಾಟವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ಬಿಜೆಪಿ ಈ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದೆ ಎಂದು ಆಡಳಿತಾರೂಢ ಜೆಡಿಯು ಆರೋಪಿಸಿದೆ. ಬುಧವಾರವಷ್ಟೇ ಹೆಚ್ಚಿನ ದರಕ್ಕೆ ಉಪ್ಪು ಮಾರಾಟ ಮಾಡಿದ್ದಕ್ಕಾಗಿ ಬಿಹಾರದಲ್ಲಿ Essential Commodities Act ಕಾಯಿದೆಯಡಿ ನಾಲ್ವರನ್ನು ಬಂಧಿಸಲಾಗಿತ್ತು. (ಚಿತ್ರ)
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications