ವೇತನ ಹೆಚ್ಚಳಕ್ಕೆ ಆಗ್ರಹಿಸಿ ದೇಶಾದ್ಯಂತ ಮುಷ್ಕರಕ್ಕಿಳಿದ ಬ್ಯಾಂಕ್ ನೌಕರರು

ಬೆಂಗಳೂರು, ಮೇ 30: ರಾಷ್ಟ್ರೀಕೃತ ಬ್ಯಾಂಕ್‌ಗಳು ಇಂದಿನಿಂದ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದ್ದಾರೆ. ವೇತನ ಪರಿಷ್ಕರಣೆಗೆ ಆಗ್ರಹಿಸಿ ಬಂದ್ ನಡೆಸಲಾಗುತ್ತಿದೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ನಷ್ಟದಲ್ಲಿರುವುದು, ಎನ್‌ಪಿಎ ಹೆಚ್ಚಳವಾಗಿರುವುದು ಸೇರಿದಂತೆ ಅನೇಕ ಕಾರಣಗನ್ನು ಮುಂದಿಟ್ಟುಕೊಂಡು ಒಕ್ಕೂಟದ ಬೇಡಿಕೆ ಅನ್ವಯ ವೇತನ ಹೆಚ್ಚಳ ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.

10 ಲಕ್ಷಕ್ಕೂ ಅಧಿಕರ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಮಂಜಾಬ್ ಮತ್ತು ಸಿಂಧ್ ಬ್ಯಾಂಕ್, ಮತ್ತಿತರೆ ಬ್ಯಾಂಕ್ ಗಳೂ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯವಾಗಿದೆ. ಖಾಸಗಿ ಬ್ಯಾಂಕ್ ಗಳಲ್ಲಿ ವೇತನ ಪರಿಷ್ಕರಣೆ ವಿಧಾನವೇ ಬೇರೆ.

ಆದರೆ ರಾಷ್ಟ್ರೀಕೃತ ಬ್ಯಾಂಕ್ ಉದ್ಯೋಗಿಗಳು ಪ್ರತಿ ಐದು ವರ್ಷಕ್ಕೊಮ್ಮೆ ಈ ರೀತಿ ಬಂದ್- ಪ್ರತಿಭಟನೆ ನಡೆಸಿಯೇ ಹೆಚ್ಚಳ ಮಾಡಿಸಿಕೊಳ್ಳಬೇಕು ಎಂಬ ಸ್ಥಿತಿ ಇದೆ. ಅಪನಗದೀಕರಣದ ನಂತರ ಕೆಲಸದ ಒತ್ತಡ ವಿಪರೀತ ಹೆಚ್ಚಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಳಗೆ ಇತರ ಬ್ಯಾಂಕ್ ಗಳ ವಿಲೀನ ಆಗಿರುವುದರಿಂದ ವಿಪರೀತ ನಷ್ಟವಾಗಿದೆ ಅನ್ನೋದು ಆಡಳಿತ ಮಂಡಳಿ ಸಮರ್ಥನೆಯಾಗಿದೆ.

ಎರಡು ದಿನಗಳ ಬಂದ್ ನಿಂದ ಎಚ್ಚೆತ್ತು, ಒಪ್ಪಿಗೆಯಾಗುವಂಥ ಸಂಧಾನ ಅಥವಾ ತೀರ್ಮಾನವೊಂದಕ್ಕೆ ಬಂದರೆ ಒಳಿತು ಇಲ್ಲವಾದಲ್ಲಿ ಅನಿರ್ದಿಷ್ಟಾವಧಿ ಬಂದ್ ಮಾಡುವುದು ಅನಿವಾರ್ಯವಾಗುತ್ತದೆ. ಈಗ ಜನರಿಗೆ ತೊಂದರೆ ಆಗದ ರೀತಿಯಲ್ಲಿ ತೀರ್ಮಾನ ಕೈಗೊಂಡಿದ್ದೇವೆ. ಇನ್ನು ಮುಂದಿನ ಅನಾಹುತಕ್ಕೆ ಸರಕಾರವೇ ಹೊಣೆ ಎಂಬುದು ಪ್ರತಿಭಟನಾನಿರತರ ಮಾತು. ದೇಶದಾದ್ಯಂತ ಇರುವ ಹತ್ತು ಲಕ್ಷ ಮಂದಿ ರಾಷ್ಟ್ರೀಕೃತ ಬ್ಯಾಂಕ್ ನೌಕರರು ಎರಡು ದಿನಗಳ ಬಂದ್ ಕೈಗೊಂಡಿದ್ದಾರೆ. ಬೆಂಗಳೂರು ಸೇರಿದಂತೆ ಅನೇಕ ನಗರಗಳಲ್ಲಿ ಬ್ಯಾಂಕ್‌ ನೌಕರರು ಮುಷ್ಕರ ನಡೆಸುತ್ತಿದ್ದಾರೆ.

ಬ್ಯಾಂಕುಗಳ ವಹಿವಾಟು ಬಹುತೇಕ ಬಂದ್: ಗ್ರಾಹಕರ ಪರದಾಟ

ಬ್ಯಾಂಕುಗಳ ವಹಿವಾಟು ಬಹುತೇಕ ಬಂದ್: ಗ್ರಾಹಕರ ಪರದಾಟ

ಬ್ಯಾಂಕ್ ನೌಕರರು ವೇತನ ಪರಿಷ್ಕರಣೆಗೆ ಆಗ್ರಹಿಸಿ 2 ದಿನಗಳ ಮುಷ್ಕರಕ್ಕೆ ಕರೆ ನೀಡಿದೆ. ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ, ಕೆನರಾ ಬ್ಯಾಂಕ್, ಸಿಂಧ್‌ ಬ್ಯಾಂಕ್ ಸೇರಿದಂತೆ ಅನೇಕ ರಾಷ್ಟ್ರೀಕೃತ ಬ್ಯಾಂಕ್ ಗಳ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.

ವೇತನ ಪರಿಷ್ಕರಣೆಗೆ ಆಗ್ರಹಿಸಿ ಬ್ಯಾಂಕ್ ನೌಕರರ ಮುಷ್ಕರ

ವೇತನ ಪರಿಷ್ಕರಣೆಗೆ ಆಗ್ರಹಿಸಿ ಬ್ಯಾಂಕ್ ನೌಕರರ ಮುಷ್ಕರ

ರಾಷ್ಟ್ರೀಕೃತ ಬ್ಯಾಂಕ್ ನೌಕರರು ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ನೌಕರರು ಪ್ರತಿಭಟನೆ ಮಾಡಿರುವ ದೃಶ್ಯವನ್ನು ಇಲ್ಲಿ ನೋಡಬಹುದು.

ಜಕಾರ್ತಾದಲ್ಲಿ ಕೈಟ್ ಪ್ರದರ್ಶನದಲ್ಲಿ ಮೋದಿ,ಜೋಕೋ ವಿಡೋಡೊ

ಜಕಾರ್ತಾದಲ್ಲಿ ಕೈಟ್ ಪ್ರದರ್ಶನದಲ್ಲಿ ಮೋದಿ,ಜೋಕೋ ವಿಡೋಡೊ

ಪ್ರಧಾನಿ ಮೋದಿ ಇಂಡೋನೇಶಿಯಾದ ಜಕಾರ್ತಾದಲ್ಲಿ ಇಂಡೋನೇಶಿಯಾ ಅಧ್ಯಕ್ಷ ಜೋಕೋ ವಿಡೋಡೊ ಅವರೊಂದಿಗೆ ಭಾರತ-ಇಂಡೋನೇಶಿಯಾ ಕೈಟ್ ಪ್ರದರ್ಶನದಲ್ಲಿ ಪಾಲ್ಗೊಂಡು ಗಾಳಿಪಟವನ್ನು ಆಕಾಶದಲ್ಲಿ ತೇಲಿಬಿಟ್ಟರು.

ಸಿಬಿಎಸ್‌ಇ ದೇಶಕ್ಕೆ ಮೊದಲ ಸ್ಥಾನ ಪಡೆದ ಉತ್ತರಪ್ರದೇಶದ ನಂದಿನಿ

ಸಿಬಿಎಸ್‌ಇ ದೇಶಕ್ಕೆ ಮೊದಲ ಸ್ಥಾನ ಪಡೆದ ಉತ್ತರಪ್ರದೇಶದ ನಂದಿನಿ

ಸಿಬಿಎಸ್‌ಇ 10 ನೇ ತರಗತಿ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಒಟ್ಟು ನಾಲ್ವರು 500 ಅಂಕಗಳಿಗೆ 499 ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನ ಗಳಿಸಿದ್ದಾರೆ. ಇದರಲ್ಲಿ ಉತ್ತರ ಪ್ರದೇಶದ ನಂದಿನಿ ಕೂಡ ಒಬ್ಬರು. ಈ ಸಂತಸದ ಕ್ಷಣವನ್ನು ತಮ್ಮ ಪೋಷಕರೊಂದಿಗೆ ಕಳೆದಿದ್ದು ಹೀಗೆ

ಸಿಬಿಎಸ್‌ಇ 10 ತರಗತಿಯಲ್ಲಿ ನಾಲ್ವರಿಗೆ ಮೊದಲ ಸ್ಥಾನ

ಸಿಬಿಎಸ್‌ಇ 10 ತರಗತಿಯಲ್ಲಿ ನಾಲ್ವರಿಗೆ ಮೊದಲ ಸ್ಥಾನ

ಸಿಬಿಎಸ್‌ಇ 10 ನೇ ಕ್ಲಾಸ್ ಫಲಿತಾಂಶ ಬಂದಿದೆ. ಅದರಲ್ಲಿ ಗುರುಗ್ರಾಮದ ಪ್ರಖಟ್ ಮಿತ್ತಲ್, ಶ್ರೀಲಕ್ಷ್ಮೀ, ರಿಮ್‌ಜಿಮ್ ಅಗರ್‌ವಾಲ್, ನಂದಿನಿ ಮೊದಲ ಸ್ಥಾನ ಗಳಿಸಿದ್ದಾರೆ.

ತಿರುಪತಿಯಲ್ಲಿ ದೇವಸ್ಥಾನದ ಅರ್ಚಕರ ಕೈಯಲ್ಲಿ ಐಪಿಎಲ್ ಟ್ರೋಫಿ

ತಿರುಪತಿಯಲ್ಲಿ ದೇವಸ್ಥಾನದ ಅರ್ಚಕರ ಕೈಯಲ್ಲಿ ಐಪಿಎಲ್ ಟ್ರೋಫಿ

ಈ ಬಾರಿ ಐಪಿಎಲ್‌ 2018 ರ ಕಪ್‌ನ್ನು ಚೆನ್ನೈ ಸೂಪರ್ ಕಿಂಗ್ಸ್‌ ತನ್ನ ಪಾಲಾಗಿಸಿಕೊಂಡಿದೆ. ಟ್ರೋಫಿಯನ್ನು ತಿರುಪತಿ ತಿರುಮಲ ದೇವಸ್ಥಾನದಲ್ಲಿ ಅರ್ಚಕರು ಕೊಂಡೊಯ್ಯುತ್ತಿರುವುದು.

ಮಾಜಿ ಕ್ರಿಕೆಟಿಗ ಬ್ರಟ್‌ ಲೀ ಹೊಸ ಲುಕ್

ಮಾಜಿ ಕ್ರಿಕೆಟಿಗ ಬ್ರಟ್‌ ಲೀ ಹೊಸ ಲುಕ್

ಮಾಜಿ ಆಸ್ಟ್ರೇಲಿಯಾ ಕ್ರಿಕೆಟಿಗ ಬ್ರೆಟ್‌ ಲೀ ಹೊಸ ಲುಕ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಅಮೃತಸರದ ಗೋಲ್ಡನ್‌ ಟೆಂಪಲ್ ವೀಕ್ಷಣೆಗೆ ಆಗಮಿಸಿರುವ ಅವರು ಅಲ್ಲಿನ ಸಾಂಪ್ರದಾಯಿಕ ಉಡುಗೆ ತೊಟ್ಟು ಎಲ್ಲರ ಗಮನ ಸೆಳೆದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+