Get Updates
Get notified of breaking news, exclusive insights, and must-see stories!

Sabarimala: ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ, ಇತಿಹಾಸ ನಿರ್ಮಿಸಿದ ರಾಷ್ಟ್ರಪತಿ ಮುರ್ಮು

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆಗೆ ಭೇಟಿ ನೀಡಿದ್ದಾರೆ. ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆ ಅಯ್ಯಪ್ಪ ದೇಗುಲದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಸಾಂಪ್ರದಾಯಿಕ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ತಲೆ ಮೇಲೆ ಇರುಮುಡಿ ಹೊತ್ತು, ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಮಹಿಳಾ ರಾಷ್ಟ್ರಪತಿಯಾಗಿ ಶಬರಿಮಲೆ ದೇಗುಲಕ್ಕೆ ಭೇಟಿ ನೀಡಿದ ಮೊದಲಿಗರು ಎಂದು ಮುರ್ಮು ದಾಖಲೆ ಬರೆದಿದ್ದಾರೆ. ಅಲ್ಲದೆ ಅಯ್ಯಪ್ಪ ಸನ್ನಿಧಿಗೆ ಭೇಟಿ ನೀಡಿದ ಭಾರತದ ಎರಡನೇ ರಾಷ್ಟ್ರಪತಿ ಎನಿಸಿಕೊಂಡಿದ್ದಾರೆ.

ಇಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ರಾಷ್ಟ್ರಪತಿಗಳು ಪಂಪಾ ತಲುಪಿ ಪ್ರಯಾಣ ಬೆಳೆಸಿದರು. ಅವರು ಪಂಪಾ ನದಿಯಲ್ಲಿ ಕಾಲು ತೊಳೆದು ಗಣಪತಿ ದೇಗುಲ ಸೇರಿದಂತೆ ಸಮೀಪದಲ್ಲಿರುವ ಹಲವು ದೇವಾಲಯಗಳಿಗೆ ಭೇಟಿ ನೀಡಿದರು. ಗಣಪತಿ ದೇಗುಲದ ಶಾಂತಿ ವಿಷ್ಣು ನಂಬೂದರಿ ಅವರು ಮುರ್ಮು ಅವರಿಗೆ 'ಇರುಮುಡಿ' ಕಟ್ಟಿದರು. ಕಪ್ಪು ಸೀರೆಯ ಉಡುಪಿನಲ್ಲಿ ಮುರ್ಮು ಅವರು ತಮ್ಮ ಸಹಯಾತ್ರಿಕರೊಂದಿಗೆ ಪೂಜಾ ವಿಧಿಗಳನ್ನು ನಿರ್ವಹಿಸಿದರು. ಬಳಿಕ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜೆ ಸಲ್ಲಿಸಿದರು. ಬಳಿಕ ದೇಶದ ನಾಗರಿಕರ ಯೋಗಕ್ಷೇಮ ಮತ್ತು ಸಮೃದ್ಧಿಗಾಗಿ ಅಯ್ಯಪ್ಪನ ಮುಂದೆ ಪ್ರಾರ್ಥಿಸಿದರು.

Droupadi Murmu Visits Sabarimala First Woman President To Offer Irumudi Pray To Lord Ayyappa

ಸಾಂಪ್ರದಾಯಿಕ ಆಚರಣೆಗಳನ್ನು ಅನುಸರಿಸಿ ದೇವಾಲಯದ ಬಳಿಯ ಕಲ್ಲಿನ ಗೋಡೆಗೆ ತೆಂಗಿನಕಾಯಿಗಳನ್ನು ಇಟ್ಟರು. ಆ ಕಟ್ಟುಗಳನ್ನು ತಲೆಯ ಮೇಲೆ ಹೊತ್ತುಕೊಂಡು, ದೇವಾಲಯಕ್ಕೆ ಹೋಗುವ ಸಾಂಪ್ರದಾಯಿಕ ಚಾರಣ ಮಾರ್ಗವಾದ 4.5 ಕಿ.ಮೀ ಸ್ವಾಮಿ ಅಯ್ಯಪ್ಪನ್ ರಸ್ತೆಯಲ್ಲಿ ವಿಶೇಷ ನಾಲ್ಕು ಚಕ್ರ ವಾಹನಗಳಲ್ಲಿ ಸಾಗಿದರು. 12 ಗಂಟೆಯ ಸುಮಾರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಯ್ಯಪ್ಪನ 18 ಪವಿತ್ರ ಮೆಟ್ಟಿಲುಗಳನ್ನು ಏರಿ ದೇವಾಲಯಕ್ಕೆ ಪ್ರವೇಶಿಸಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ವಂ ಸಚಿವ ವಿ.ಎನ್.ವಾಸವನ್ ಹಾಗೂ ದೇವಸ್ವಂ ಮಂಡಳಿಯ ಅಧ್ಯಕ್ಷ ಪಿ.ಎಸ್.ಪ್ರಶಾಂತ್‌ ಉಪಸ್ಥಿತರಿದ್ದರು.

ಭಕ್ತರ ಪ್ರವೇಶ ನಿರ್ಬಂಧ

ರಾಷ್ಟ್ರಪತಿಗಳು ಮಧ್ಯಾಹ್ನ ಊಟ ಮತ್ತು ವಿಶ್ರಾಂತಿಗಾಗಿ ಟಿಡಿಬಿ ಅತಿಥಿಗೃಹಕ್ಕೆ ಹಿಂತಿರುಗುವ ಮೊದಲು ಮಲಿಕಾಪ್ಪುರಂ ಸೇರಿದಂತೆ ಹತ್ತಿರದ ದೇವಾಲಯಗಳಿಗೆ ಭೇಟಿ ನೀಡಿದರು. ರಾಷ್ಟ್ರಪತಿಗಳ ಭೇಟಿಯ ಸಮಯದಲ್ಲಿ ಭಕ್ತರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ಭೋಜನ ಹಾಗೂ ವಿಶ್ರಾಂತಿಯ ವ್ಯವಸ್ಥೆಯನ್ನು ದೇವಸ್ವಂ ಭವನದಲ್ಲಿ ಮಾಡಲಾಗಿತ್ತು. ಮಧ್ಯಾಹ್ನ ಅವರು ಸನ್ನಿಧಾನದಿಂದ ಹೊರಟು ನೀಲಕ್ಕಲ್ ಮೂಲಕ ತಿರುವನಂತಪುರಂ ಕಡೆ ಹೆಲಿಕಾಪ್ಟರ್‌ನಲ್ಲಿ ಮರಳಿದ್ದಾರೆ.

Droupadi Murmu Visits Sabarimala First Woman President To Offer Irumudi Pray To Lord Ayyappa

ಶಬರಿಮಲೆ ದರ್ಶನದ ನಂತರ, ರಾಷ್ಟ್ರಪತಿ ಮುರ್ಮು ಅವರು ಕಳೆದ ಎರಡು ದಿನಗಳಿಂದ ಭದ್ರತಾ ನಿಯಂತ್ರಣದಲ್ಲಿರುವ ಸನ್ನಿಧಾನಂನ ಮುಖ್ಯ ಕಚೇರಿ ಸಂಕೀರ್ಣದಲ್ಲಿ ವಿಶೇಷವಾಗಿ ವ್ಯವಸ್ಥೆ ಮಾಡಲಾದ ಕೋಣೆಯಲ್ಲಿ ಎರಡು ಗಂಟೆಗಳ ಕಾಲ ತಂಗಿದ್ದರು. ವಿಶೇಷ ಅಡುಗೆಮನೆಯಲ್ಲಿ ಅವರ ಊಟವನ್ನು ತಯಾರಿಸಿ ರಾಷ್ಟ್ರಪತಿ ಭವನದ ಸಿಬ್ಬಂದಿ ವ್ಯವಸ್ಥೆಗಳನ್ನು ನೋಡಿಕೊಂಡರು. ಬಳಿಕ ಅವರು ಮಧ್ಯಾಹ್ನ 3:10ಕ್ಕೆ ಸನ್ನಿಧಾನಂನಿಂದ ಹೊರಟು 4:20ಕ್ಕೆ ಹೆಲಿಕಾಪ್ಟರ್ ಮೂಲಕ ನಿಲಕ್ಕಲ್‌ನಿಂದ ತಿರುವನಂತಪುರಕ್ಕೆ ಮುರ್ಮು ತೆರಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+