'ಯುನಿವರ್ಸಿಟಿ' ಹೆಸರು ಕೈ ಬಿಡುವಂತೆ ರಾಜ್ಯದ 14 ಸಂಸ್ಥೆಗಳಿಗೆ ನೋಟಿಸ್
ಬೆಂಗಳೂರು, ನವೆಂಬರ್ 15: ತಮ್ಮ ಸಂಸ್ಥೆಗಳ ಹೆಸರಿನಿಂದ ಯುನಿವರ್ಸಿಟಿ (ವಿಶ್ವವಿದ್ಯಾಲಯ) ಪದ ಕೈ ಬಿಡುವಂತೆ ಕರ್ನಾಟಕದ 14 ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ನೋಟಿಸ್ ನೀಡಿದೆ.
ಸುಪ್ರಿಂ ಕೋರ್ಟ್ ನಿರ್ದೇಶನದನ್ವಯ ಈ ನೋಟಿಸ್ ನೀಡಿರುವುದಾಗಿ ಯುಜಿಸಿ ಹೇಳಿದೆ. ದೇಶದಾದ್ಯಂತ ಒಟ್ಟು 123 ಡೀಮ್ಡ್ ವಿಶ್ವವಿದ್ಯಾಲಯಗಳಿಗೆ ಈ ನೋಟಿಸ್ ನೀಡಲಾಗಿದೆ. ಒಂದೊಮ್ಮೆ ವಿಶ್ವವಿದ್ಯಾಲಯ ಪದ ಕೈ ಬಿಡದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದೂ ಎಚ್ಚರಿಸಲಾಗಿದೆ.
'ವಿಶ್ವವಿದ್ಯಾಲಯ' ಪದ ಕೈಬಿಡುವಂತೆ ಸೂಚಿಸಲಾದ ಶಿಕ್ಷಣ ಸಂಸ್ಥೆಗಳು ಹೀಗಿವೆ,
*ಬಿಎಲ್ ಡಿಇ ಯುನಿವರ್ಸಿಟಿ ಬಿಜಾಪುರ
*ಕ್ರೈಸ್ಟ್ ಯುನಿವರ್ಸಿಟಿ, ಬೆಂಗಳೂರು
*ಐಐಎಸ್ಸಿ ಬೆಂಗಳೂರು
*ಇಂಟರ್ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ, ಬೆಂಗಳೂರು
*ಜಗದ್ಗುರು ಶ್ರೀ ಶಿವರಾತ್ರೀಶ್ವರ ಯುನಿವರ್ಸಿಟಿ ಮೈಸೂರು
*ಜವಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರೀಸರ್ಚ್, ಬೆಂಗಳೂರು
*ಜೈನ್ ಯುನಿವರ್ಸಿಟಿ ಬೆಂಗಳೂರು
*ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರೀಸರ್ಚ್, ಬೆಳಗಾವಿ
*ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಉಡುಪಿ
*ನಿಟ್ಟೆ ಯುನಿವರ್ಸಿಟಿ, ಮಂಗಳೂರು
*ಶ್ರೀ ದೇವರಾಜ ಅರಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರೀಸರ್ಚ್, ಕೋಲಾರ
*ಶ್ರೀ ಸಿದ್ಧಾರ್ಥ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ತುಮಕೂರು,
*ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ, ಬೆಂಗಳೂರು
*ಯೆನಪೋಯ ಯುನಿವರ್ಸಿಟಿ, ಮಂಗಳೂರು