ಕೋವಿಡ್ 19 ಪ್ರತಿಕಾಯ ಪತ್ತೆ ಕಿಟ್ ಅಭಿವೃದ್ಧಿಪಡಿಸಿದ ಡಿಆರ್ಡಿಒ
ನವದೆಹಲಿ, ಮೇ 21: ಕೋವಿಡ್ 19 ಪ್ರತಿಕಾಯ ಪತ್ತೆ ಹಚ್ಚುವ ಕಿಟ್ ಒಂದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಅಭಿವೃದ್ಧಿಪಡಿಸಿದೆ ಕೇಂದ್ರ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.
ಹಾಗೆಯೇ ಕೇವಲ 75 ನಿಮಿಷಗಳಲ್ಲಿ ಫಲಿತಾಂಶ ಪಡೆಯಬಹುದಾಗಿದೆ, ಈ ಕಿಟ್ ಶೆಲ್ಫ್ ಲೈಫ್ 18 ತಿಂಗಳುಗಳದ್ದಾಗಿದ್ದು, ನ್ಯೂಕ್ಲಿಯೊಕ್ಯಾಪ್ಸಿಡ್, ಸಾರ್ಸ್ -ಕೋವಿನ್-2 ಪ್ರೋಟಿನ್ಗಳನ್ನು ಪತ್ತೆ ಮಾಡುತ್ತದೆ.
ನವದೆಹಲಿ ಮೂಲದ ವ್ಯಾನ್ಗಾರ್ಡ್ ಡಯಾಗ್ನೊಸ್ಟಿಕ್ಸ್ ಪ್ರೈ.ಲಿ. ಜತೆಗೂಡಿ ಈ ಕಿಟ್ನ್ನು ಅಭಿವೃದ್ಧಿಪಡಿಸಲಾಗಿದ್ದು, ಜೂನ್ ಮೊದಲ ವಾರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಡಿಪ್ಕೋವ್ಯಾನ್ ಹೆಸರಿನಲ್ಲಿ ಕರೆಯಲಾಗುವ ಈ ಕಿಟ್, ಕೇವಲ 75 ನಿಮಿಷಗಳಲ್ಲಿ ಫಲಿತಾಂಶ ತೆಗೆದುಕೊಳ್ಳುವುದರಿಂದ ಇತರೆ ರೋಗಿಗಳೊಂದಿಗೆ ಯಾವುದೇ ಅಡ್ಡ ಪರಿಣಾಮ ಬೀರದು ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಹಾಗೆಯೇ ಗಾರ್ಗ್ಲಿಂಗ್ ಮಾಡಿಯೂ ಕೂಡ ಕೋವಿಡ್ ಫಲಿತಾಂಶವನ್ನು ಪಡೆಯಬಹುದಾದ ಸಂಶೋಧನೆಗೆ ಫಲ ಸಿಕ್ಕಿದೆ. ಸಿಎಸ್ಐಆರ್-ಎನ್ಎಎಆರ್ನ ಪರಿಸರ ಶಾಸ್ತ್ರ ವಿಭಾಗವು ಈ ಹೊಸ ಸಂಶೋಧನೆಯನ್ನು ಮಾಡಿದೆ.
ಕೋವಿಡ್ ಪರೀಕ್ಷೆಯನ್ನು ಇನ್ನುಮುಂದೆ ಮತ್ತಷ್ಟು ಸುಲಭಗೊಳಿಸಬಹುದು, ಕೆಮಿಕಲ್ ದ್ರಾವಣವನ್ನು ಬಾಯಲ್ಲಿ ಹಾಕಿಕೊಂಡು ಗಾರ್ಗ್ಲಿಂಗ್ ಮಾಡುವ ಮೂಲಕ ಕೋವಿಡ್ ವರದಿ ಪಡೆಯಬಹುದು.
ಹಿರಿಯ ವಿಜ್ಞಾನಿ ಡಾ. ಕೃಷ್ಣ ಖೈರ್ನರ್ ಮತ್ತು ಅವರ ತಂಡ ಈ ಹೊಸ ಮಾದರಿಯ ಕೋವಿಡ್ ಪರೀಕ್ಷೆ ಅಭಿವೃದ್ಧಿಪಡಿಸಿದೆ.ಈ ಹೊಸ ತಂತ್ರದಲ್ಲಿ ಅಸ್ತಿತ್ವದಲ್ಲಿರುವ ಮಾದರಿಗಳ ಪರೀಕ್ಷೆಯಂತೆ ಯಾವುದೇ ಆರ್ಎನ್ಎ ಹೊರತೆಗೆಯುವ ಅಗತ್ಯವಿಲ್ಲ.
ಇದರಿಂದ ವೇಗವಾಗಿ ಮಾದರಿ ಸಂಗ್ರಹಿಸಬಹುದು, ಮಾದರಿ ಸಂಗ್ರಹ ಕೇಂದ್ರಗಳಲ್ಲಿನ ವ್ಯಕ್ತಿಗಳ ದೀರ್ಘ ಸರತಿ ಸಾಲುಗಳನ್ನು ಕಡಿಮೆ ಮಾಡಬಹುದು. ಯಾವುದೇ ಆರ್ಎನ್ಎ ಹೊರತೆಗೆಯುವ ಕಿಟ್ ಅಗತ್ಯವಿಲ್ಲ, ಇದು ಸಮಯ ಮತ್ತು ಹಣ ಎರಡನ್ನೂ ಉಳಿಸುತ್ತದೆ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications