ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟೀ ಕುಡಿಸಬೇಕು ಎಂದ ಡಾಲಿ ಚಾಯ್ವಾಲ
ನಾಗ್ಪುರದ ಡಾಲಿ ಚಾಯ್ವಾಲಾ ಸದ್ಯ ದೇಶ-ವಿದೇಶದಲ್ಲಿ ಕೂಡ ಜನಪ್ರಿಯವಾಗುತ್ತಿದ್ದಾರೆ. ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ನಾಗ್ಪುರದ ಪ್ರಸಿದ್ಧ ಡಾಲಿ ಚಾಯ್ವಾಲಾ ಬಳಿ ರಸ್ತೆ ಬದಿ ಟೀ ಕುಡಿಯುವ ವಿಡಿಯೋ ಪೋಸ್ಟ್ ಮಾಡಿದ್ದರು.
ಬಿಲ್ಗೇಟ್ಸ್ಗೆ ಚಹಾ ಕೊಟ್ಟ ಬಳಿಕ ದೇಶದ ಗಮನ ಸೆಳೆದಿರುವ ಡಾಲಿ ಚಾಯ್ವಾಲಾ ತಮಗೆ ಅವರು ಬಿಲ್ ಗೇಟ್ಸ್ ಎಂದು ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ಸುದ್ದಿಸಂಸ್ಥೆ ಎಎನ್ಐ ಜೊತೆ ಮಾತನಾಡಿರುವ ಅವರು, ತಮ್ಮ ಮನದಾಸೆಯನ್ನು ಹಂಚಿಕೊಂಡಿದ್ದಾರೆ.

ಟೀ ಕೊಟ್ಟಾಗ ಅವರು ಯಾರು ಅಂತಾನೆ ಗೊತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. "ವಿದೇಶದಿಂದ ಬಂದವರು ಆದ್ದರಿಂದ ನಾನು ಅವರಿಗೆ ಚಹಾವನ್ನು ಕೊಡಬೇಕು ಎಂದು ಭಾವಿಸಿದೆ. ಮರುದಿನ ನಾನು ನಾಗ್ಪುರಕ್ಕೆ ಹಿಂತಿರುಗಿದಾಗ ನಾನು ಯಾರಿಗೆ ಟೀ ಕೊಟ್ಟೆ ಎನ್ನುವುದನ್ನು ನೋಡಿದೆ. ಬಿಲ್ ಗೇಟ್ಸ್ 'ವಾವ್, ಡಾಲಿ ಕಿ ಚಾಯ್' ಎಂದರು. ಆದರೆ ನಾವು ಸ್ವಲ್ಪವೂ ಮಾತನಾಡಲಿಲ್ಲ, ಅವರು ನನ್ನ ಪಕ್ಕದಲ್ಲಿ ನಿಂತಿದ್ದರು ಮತ್ತು ನಾನು ನನ್ನ ಕೆಲಸದಲ್ಲಿ ನಿರತನಾಗಿದ್ದೆ" ಎಂದು ಹೇಳಿದ್ದಾರೆ.
#WATCH | Nagpur (Maharashtra): Microsoft Co-founder Bill Gates posted a video, in which he can be seen enjoying Dolly's tea.
— ANI (@ANI) February 29, 2024
Dolly Chaiwala says, "I was not aware at all I thought that he was a guy from a foreign country so I should serve him tea. The next day when I came back… pic.twitter.com/hicI3vY31y
ದಕ್ಷಿಣ ಭಾರತದ ಸಿನಿಮಾ ಪ್ರೇಮಿ
ನಾನು ದಕ್ಷಿಣ ಭಾರತದ ಚಲನಚಿತ್ರಗಳನ್ನು ಹೆಚ್ಚಾಗಿ ನೋಡುತ್ತೇನೆ. ಅದರಿಂದ ನಾನು ಈ ರೀತಿ ಸ್ಟೈಲ್ಗಳನ್ನು ಕಲಿತಿದ್ದೇನೆ. ಇಂದು ನಾನು ನಾಗ್ಪುರದ ಡಾಲಿ ಚಾಯ್ ವಾಲಾ ಆಗಿದ್ದೇನೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ಡಾಲಿ ಚಾಯ್ವಾಲಾ ತಮ್ಮ ವಿಭಿನ್ನ ಸ್ಟೈಲ್ ಮೂಲಕ ಗಮನ ಸೆಳೆದಿದ್ದಾರೆ. ಹಲವು ಯೂಟ್ಯೂಬ್ ವಾಹಿನಿಗಳಲ್ಲಿ, ಇನ್ಸ್ಟಾಗ್ರಾಂ, ಫೇಸ್ಬುಕ್ನಲ್ಲಿ ಅವರು ಟೀ ಮಾಡುವ, ವಿಭಿನ್ನವಾಗಿ ಅದನ್ನು ಗ್ಲಾಸ್ಗೆ ಹಾಕಿಕೊಡುವ ವಿಡಿಯೋ ವೈರಲ್ ಆಗಿದ್ದವು.
ಅವರ ದೊಡ್ಡ ಆಸೆ ಇದೇ ಅಂತೆ..
ಬಿಲ್ ಗೇಟ್ಸ್ ಅವರಿಗೆ ಟೀ ಮಾಡಿಕೊಟ್ಟು ಜನಪ್ರಿಯವಾಗಿರುವ ಡಾಲಿ ಚಾಯ್ವಾಲಾಗೆ ದೊಡ್ಡ ಆಸೆ ಇದೆಯಂತೆ, ಅದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟೀ ಮಾಡಿಕೊಡುವ ಬಯಕೆ ಎಂದು ಹೇಳಿದ್ದಾರೆ. ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಚಹಾವನ್ನು ನೀಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೂಡ ತಾನು ಚಿಕ್ಕ ವಯಸ್ಸಿನಲ್ಲಿ ಟೀ ಮಾರುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಅವರಿಗೆ ಈಗ ಚಹಾ ಕುಡಿಸುವ ಆಸೆಯನ್ನು ನಾಗ್ಪುರ ಟೀ ವ್ಯಾಪಾರಿ ವ್ಯಕ್ತಪಡಿಸಿದ್ದಾರೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications