ಮಲ್ಯ ಕೃಪೆಗೆ ಪಾತ್ರರಾಗಿದ್ದರೆ ಸೋನಿಯಾ, ಫಾರೂಕ್?
ಬೆಂಗಳೂರು, ಅಕ್ಟೋಬರ್ 06 : ಒಂದಾನೊಂದು ಕಾಲದಲ್ಲಿ ನೆಲದ ಮೇಲೆ ನಿಲ್ಲದೆ ಆಕಾಶದಲ್ಲಿ ಹಾರಾಡುತ್ತ ಮೆರೆದಾಡುತ್ತಿದ್ದ ಸಮಯದಲ್ಲಿ, ಭಾರತದಿಂದ ಪರಾರಿಯಾಗಿರುವ ಡಾ. ವಿಜಯ್ ಮಲ್ಯ ಅವರಿಂದ ಸೋನಿಯಾ ಗಾಂಧಿ ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲ ಸಾಕಷ್ಟು ಕೃಪೆಗೆ ಪಾತ್ರರಾಗಿದ್ದರೆ?
ಸೀರಿಯಸ್ ಫ್ರಾಡ್ ಇನ್ವೆಸ್ಟಿಗೇಷನ್ ಆಫೀಸ್ (SFIO) 38 ದಿನಗಳ ಹಿಂದೆಯೇ ಸಲ್ಲಿಸಿರುವ ವರದಿಯಲ್ಲಿ ಈ ಸಂಗತಿ ಬಯಲಾಗಿದ್ದು, ಈ ವರದಿಯನ್ನು ಇಟ್ಟುಕೊಂಡು ರಿಪಬ್ಲಿಕ್ ಟಿವಿ ಸೋನಿಯಾ ಗಾಂಧಿ ಮತ್ತು ಫಾರೂಕ್ ಅಬ್ದುಲ್ಲ ಅವರ ವಿರುದ್ಧ #MallyaTicketGate ಟ್ವಿಟ್ಟರ್ ಅಭಿಯಾನ ಆರಂಭಿಸಿದೆ.

ವಿಜಯ್ ಮಲ್ಯ ಅವರ ಒಡೆತನದಲ್ಲಿದ್ದ ಕಿಂಗ್ ಫಿಷರ್ ವಿಮಾನದಲ್ಲಿ ಸೋನಿಯಾ ಗಾಂಧಿ ಮಾತ್ರವಲ್ಲ ಅವರ ಇಡೀ ಬಂಧುಬಳಗ ಸಂಚರಿಸುತ್ತಿದ್ದಾಗ, ಎಕಾನಾಮಿ ಕ್ಲಾಸ್ ಟಿಕೆಟ್ ತೆಗೆದುಕೊಂಡಿದ್ದರೂ ಅವರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಮೊದಲ ದರ್ಜೆಯ ಸೀಟಿನಲ್ಲಿ ಪಯಣಿಸಲು ಅವಕಾಶ ಸಿಗುತ್ತಿತ್ತು.
ಕಿಂಗ್ ಫಿಷರ್ ಏರ್ ಲೈನ್ಸ್ ನ ಸೇಲ್ಸ್ ತಂಡ ವಿಜಯ್ ಆರೋರಾ ಎಂಬುವವರು ಮುಖ್ಯ ಹಣಕಾಸು ಅಧಿಕಾರಿಗೆ ಬರೆದ ಪತ್ರದಲ್ಲಿ ಈ ಸಂಗತಿ ಬಯಲಾಗಿದೆ. ಅಚ್ಚರಿಯ ಸಂಗತಿಯೆಂದರೆ, ಸ್ವತಃ ವಿಜಯ್ ಮಲ್ಯ ಅವರೇ ವೈಯಕ್ತಿಕವಾಗಿ ಈ ಸೂಚನೆಗಳನ್ನು ನೀಡಿದ್ದು.
ವಿಷಾದಕರ ಸಂಗತಿಯೆಂದರೆ, ಎರಡನೇ ಬಾರಿ ಯುಪಿಎ ಸರಕಾರ ಅಧಿಕಾರ ಚಲಾಯಿಸುತ್ತಿದ್ದಾಗ ಮತ್ತು ಹಲವಾರು ಹಗರಣಗಳಲ್ಲಿ ಮುಳುಗೇಳುತ್ತಿದ್ದಾಗ ಈ ವಿದ್ಯಮಾನಗಳು ಜರುಗಿವೆ. ಇದರ ಬಗ್ಗೆ ವಿವರಣೆ ನೀಡುವಿರಾ ಸೋನಿಯಾ ಗಾಂಧಿ ಅವರೆ ಎಂದು ಅವರನ್ನು ಪ್ರಶ್ನಿಸಲಾಗುತ್ತಿದೆ.
2008ರ ಜಮ್ಮು ಮತ್ತು ಕಾಶ್ಮೀರ ಚುನಾವಣೆಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲ ಅವರು ಕಿಂಗ್ ಫಿಷರ್ ಖಾಸಗಿ ವಿಮಾನದಲ್ಲಿ ಬಿಟ್ಟಿ ಹಾರಾಟ ನಡೆಸಿರುವುದು ಆ ವರದಿಯಲ್ಲಿ ಬಹಿರಂಗವಾಗಿದೆ. ಈ ಕುರಿತು ಬರೆದ ಪತ್ರದಲ್ಲಿ ಅಬ್ಬುಲ್ಲ ಅವರ ಏರ್ ಟಿಕೆಟ್ ಶುಲ್ಕವನ್ನು ಮಲ್ಯ ಅವರೇ ಭರಿಸಿದ್ದಾರೆ ಎಂದು ನಮೂದಿಸಲಾಗಿತ್ತು.
ಬ್ಯಾಂಕುಗಳಿಗೆ ಏಳು ಸಾವಿರ ಕೋಟಿಯಷ್ಟು ಪಂಗನಾಮ ಹಾಕಿ ಭಾರತದಿಂದ ಪರಾರಿಯಾಗಿರುವ ಹೆಂಡದ ದೊರೆ ವಿಜಯ್ ಮಲ್ಯ, ಕೆಲ ದಿನಗಳ ಹಿಂದೆ ಕೆಲವೇ ಕ್ಷಣಗಳ ಕಾಲ ಬ್ರಿಟಿಷ್ ಪೊಲೀಸರಿಂದ ಬಂಧಿತರಾಗಿದ್ದರು. ಮಲ್ಯನನ್ನು ತಮ್ಮ ಸುಪರ್ದಿಗೆ ಒಪ್ಪಿಸಬೇಕೆಂದು ಜಾರಿ ನಿರ್ದೇಶನಾಲಯ ಇಂಗ್ಲೆಂಡನ್ನು ಕೇಳಿಕೊಂಡಿದೆ.
-
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ -
SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹಾಲ್ ಟಿಕೆಟ್ ತೋರಿಸಿದ್ರೆ KSRTC ಬಸ್ಸುಗಳಲ್ಲಿ ಉಚಿತ ಪ್ರಯಾಣ












Click it and Unblock the Notifications