ಬಂಡಾಯಕ್ಕೂ 2 ದಿನಗಳ ಮೊದಲು ಶಾಸಕರು, ಸಂಸದರಿಂದ ಎನ್ಸಿಪಿ ಮುಖ್ಯಸ್ಥನಾಗಿ ಆಯ್ಕೆಯಾಗಿದ್ದೆ: ಅಜಿತ್ ಪವಾರ್
ಮುಂಬೈ, ಜುಲೈ. 05: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಬಂಡಾಯ ಬಣ ಶರದ್ ಪವಾರ್ ಅವರು ಸ್ಥಾಪಿಸಿದ ಮತ್ತು ಎರಡು ದಶಕಗಳಿಂದ ನೇತೃತ್ವದ ಪಕ್ಷದ ಉನ್ನತ ಹುದ್ದೆಯಿಂದ ಅವರನ್ನು ಬಂಡಾಯಕ್ಕೆ ಎರಡು ದಿನಗಳ ಮೊದಲೇ ತೆಗೆದುಹಾಕಿಲಾಗಿದೆ. ಅಜಿತ್ ಪವಾರ್ ಅವರನ್ನು ಸುಮಾರು 40 ಶಾಸಕರು, ಎಂಎಲ್ಸಿಗಳು ಮತ್ತು ಸಂಸದರು ಪಕ್ಷದ ಮುಖ್ಯಸ್ಥರಾಗಿ ಆಯ್ಕೆ ಮಾಡಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ತಿಳಿಸಲಾಗಿದೆ.
ಎನ್ಸಿಪಿ ಬಂಡಾಯ ನಾಯಕರ ಪತ್ರದ ಪ್ರಕಾರ, ಅವರು ಜೂನ್ 30 ರಂದು ಅಜಿತ್ ಪವಾರ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಹೆಸರಿಸಿದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಅಂದರೆ ಆಡಳಿತಾರೂಢ ಮೈತ್ರಿಕೂಟ ಬೆಂಬಲ ಸೂಚಿಸುವ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಕ್ರಮಕ್ಕೆ ಎರಡು ದಿನಗಳ ಮೊದಲು. ಆ ದಿನ ಸುಮಾರು 40 ಶಾಸಕರು, ಸಂಸದರು ಮತ್ತು ಎಂಎಲ್ಸಿಗಳು ಬಂಡಾಯ ನಾಯಕರನ್ನು ಬೆಂಬಲಿಸುವ ಅಫಿಡವಿಟ್ಗಳಿಗೆ ಸಹಿ ಹಾಕಿದ್ದರು ಎಂದು ಮೂಲಗಳು ತಿಳಿಸಿವೆ.

ಶರದ್ ಪವಾರ್ ಅವರನ್ನು ಕೆಳಗಿಳಿಸಿ ಅದೇ ಜಾಗಕ್ಕೆ ಅಜಿತ್ ಪವಾರ್ ಅವರನ್ನು ಕೂರಿಸುವುದು ಪಕ್ಷಕ್ಕೆ ಎಫೆಕ್ಟ್ ನೀಡುತ್ತದೆ. ಆದರೆ, ಬಂಡಾಯ ಬಣವು ತಾವೇ ನಿಜವಾದ ಎನ್ಸಿಪಿ ಎಂದು ಪದೇ ಪದೇ ಹೇಳಿಕೊಳ್ಳುತ್ತಿದ್ದು, ಚುನಾವಣಾ ಆಯೋಗದಿಂದ ಪಕ್ಷದ ಹೆಸರು ಮತ್ತು ಚಿಹ್ನೆಗಾಗಿ ಮನವಿ ಮಾಡಿದ್ದಾರೆ.
ಚುನಾವಣಾ ಆಯೋಗದ ಮೂಲಗಳು ಶರದ್ ಪವಾರ್ ನಿಷ್ಠಾವಂತ ಜಯಂತ್ ಪಾಟೀಲ್ ಅವರಿಂದಲೂ ಪತ್ರವನ್ನು ಸ್ವೀಕರಿಸಿದ್ದು, ಕೆಲವು ಬಂಡಾಯ ಸಂಸದರು ಮತ್ತು ಶಾಸಕರ ವಿರುದ್ಧದ ಅನರ್ಹತೆಯ ಪ್ರಕ್ರಿಯೆಗಳ ಬಗ್ಗೆ ತಿಳಿಸಲಾಗಿದೆ. ಬಂಡಾಯ ಬಣ ಇಂದು 29 ಶಾಸಕರ ಪರೇಡ್ ನಡೆಸಿದ್ದು, ಶರದ್ ಪವಾರ್ ಅವರನ್ನು ಬೆಂಬಲಿಸಲು ಕೇವಲ 17 ಮಂದಿ ಮಾತ್ರ ಬಂದಿದ್ದಾರೆ. ಆದರೆ ಕೆಲವು ಶಾಸಕರು ಎರಡೂ ಕಡೆ ಕಾಣಿಸಿಕೊಂಡಿದ್ದಾರೆ. ಮತ್ತೆ ಕೆಲವರು ಎರಡು ಕಡೆ ಹಾಜರಾಗಿಲ್ಲ.
"ನಮ್ಮೊಂದಿಗೆ ಎಷ್ಟು ಶಾಸಕರು ಇದ್ದಾರೆ ಎಂಬುದು ಇಂದಿನ ಚರ್ಚೆಯಾಗಿದೆ. ನಾನು ಈ ಬಗ್ಗೆ ಗಮನ ಹರಿಸುವುದಿಲ್ಲ. ಈ ಹಿಂದೆ ನನ್ನ ಬಳಿ 68 ಶಾಸಕರಿದ್ದರು, ನಾನು ಕೆಲವು ಸಮಯ ಹೊರಗೆ ಹೋದಾಗ 62 ಜನರು ನಮ್ಮನ್ನು ತೊರೆದರು, ನನಗೆ ಆಗ ಕೇವಲ ಆರು ಜನ ಶಾಸಕರ ಬೆಂಬಲವಿತ್ತು. ಚುನಾವಣೆಯಲ್ಲಿ 62ರಲ್ಲಿ ನಾಲ್ವರು ಮಾತ್ರ ಗೆಲುವು ಸಾಧಿಸಿದರು. ನಾವು ಹೊಸ ಮುಖಗಳೊಂದಿಗೆ ಮತ್ತೆ ಗೆದ್ದಿದ್ದೇವೆ" ಎಂದು ಶರದ್ ಪವಾರ್ ಹೇಳಿದ್ದಾರೆ.

"ಯಾರಾದರೂ ನಮ್ಮ ಚಿಹ್ನೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರೆ, ಪಕ್ಷದ ಚಿಹ್ನೆ ನಮ್ಮ ಬಳಿ ಇರುತ್ತದೆ ಎಂದು ನಾನು ನಿಮಗೆ ಹೇಳುತ್ತೇನೆ, ಅದು ಎಲ್ಲಿಯೂ ಹೋಗುವುದಿಲ್ಲ, ಪಕ್ಷದ ಸಿದ್ಧಾಂತವು ಕಾರ್ಯಕರ್ತರ ಬಳಿ ಇದ್ದರೆ ಸಾಕು. ನಾನು ಹಲವಾರು ಚಿಹ್ನೆಗಳ ಮೇಲೆ ಸ್ಪರ್ಧಿಸಿದ್ದೇನೆ" ಎಂದು ಶರದ್ ಪವಾರ್ ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಲ್ಲಿ ಮೂರು ಬಾರಿ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಅಜಿತ್ ಪವಾರ್ ಬುಧವಾರ ಮುಂದೊಂದು ದಿನ ಮುಖ್ಯಮಂತ್ರಿಯಾಗಲು ಬಯಸುವುದಾಗಿ ಹೇಳಿದ್ದಾರೆ. ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ತಮ್ಮ ಚಿಕ್ಕಪ್ಪನ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ತಮ್ಮ ವಯಸ್ಸಿನಲ್ಲಿ ಪಕ್ಷವನ್ನು ಏಕೆ ಮುನ್ನಡೆಸಬೇಕು ಎಂದು ಪ್ರಶ್ನಿಸಿದ್ದಾರೆ.
''ಬೇರೆ ಪಕ್ಷಗಳಲ್ಲಿ ನಾಯಕರು ವಯಸ್ಸಾದ ನಂತರ ನಿವೃತ್ತಿಯಾಗುತ್ತಾರೆ. ಬಿಜೆಪಿಯಲ್ಲಿ ನಾಯಕರು 75ಕ್ಕೆ ನಿವೃತ್ತರಾಗುತ್ತಾರೆ, ನೀವು ಯಾವಾಗ ನಿಲ್ಲಿಸುತ್ತೀರಿ? ನೀವು ಹೊಸ ಜನರಿಗೆ ಅವಕಾಶ ನೀಡಬೇಕು, ನಾವು ತಪ್ಪು ಮಾಡಿದರೆ ನಮಗೆ ತಿಳಿಸಿ, ನಿಮ್ಮ ವಯಸ್ಸು 83 ಇನ್ನೂ ಯಾವಾಗ ಇದನ್ನು ನಿಲ್ಲಿಸುತ್ತಿರಾ?" ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications