ಕೋಕಾ ಕೋಲ ಕಂಡುಹಿಡಿದಿದ್ದು ನಿಂಬೆ ಪಾನಕ ಮಾರಾಟಗಾರ: ರಾಹುಲ್ ಗಾಂಧಿ
ನವದೆಹಲಿ, ಜೂನ್ 11: 'ನಾನೊಂದು ಮೆಷಿನ್ ತಯಾರಿಸುತ್ತೇನೆ. ಹೇಗೆಂದರೆ ನೀವು ಒಂದು ಬದಿಯಿಂದ ಆಲೂಗಡ್ಡೆ ಹಾಕಿದರೆ ಚಿನ್ನ ಹೊರಬೀಳುತ್ತದೆ. ಎಷ್ಟೊಂದು ಹಣ ಸಿಗುತ್ತದೆ ಎಂದರೆ ಅದರಲ್ಲಿ ಏನು ಮಾಡುವುದು ಎಂದು ನಿಮಗೆ ಗೊತ್ತಾಗುವುದೇ ಇಲ್ಲ' ಎಂದು ಒಮ್ಮೆ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.
ಈ ಮಾತು ಬಿಜೆಪಿ ಮತ್ತು ಅದರ ಬೆಂಬಲಿಗರ ಪಾಲಿಗೆ ಅಪಹಾಸ್ಯದ ವಸ್ತುವಾಗಿತ್ತು. ಆದರೆ, ಅದನ್ನು ಬಿಜೆಪಿಯನ್ನು ಲೇವಡಿ ಮಾಡುವ ಸಲುವಾಗಿ ರಾಹುಲ್ ಗಾಂಧಿ ನೀಡಿದ್ದ ವ್ಯಂಗ್ಯದ ಹೇಳಿಕೆ ಎಂದು ಹೇಳಲಾಗಿತ್ತು.
ರಾಹುಲ್ ನೀಡುವ ಅನೇಕ ಹೇಳಿಕೆಗಳು ಎದುರಾಳಿಗಳಿಗೆ ಹಾಸ್ಯದ ವಸ್ತುವಾಗಿ ಪರಿಣಮಿಸುತ್ತಿದೆ. ಈಗ ರಾಹುಲ್ ಅಂತಹದ್ದೇ ಹೇಳಿಕೆ ನೀಡುವ ಮೂಲಕ ಮತ್ತೆ ನಗೆಪಾಟಲಿಗೆ ಒಳಗಾಗಿದ್ದಾರೆ.

ಅಂತರರಾಷ್ಟ್ರೀಯವಾಗಿ ಗುರುತಿಸಿಕೊಂಡಿರುವ ಕೋಕಾ ಕೋಲವನ್ನು ಕಂಡು ಹಿಡಿದ ವ್ಯಕ್ತಿ ಒಂದು ಕಾಲದಲ್ಲಿ ನಿಂಬೆ ಹಣ್ಣಿನ ಪಾನಕ ಮಾರಾಟ ಮಾಡುತ್ತಿದ್ದ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇತರೆ ಹಿಂದುಳಿದ ವರ್ಗಗಳ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಅವರು, ಕೋಕಾ ಕೋಲಾದ ಸಂಸ್ಥಾಪಕ ಯಾರು ಗೊತ್ತೇ? ಅವರು ಮೊದಲು ನಿಂಬೆ ಪಾನಕ ಮಾರುತ್ತಿದ್ದರು ಎಂದು ರಾಹುಲ್ ಅಪಹಾಸ್ಯಕ್ಕೆ ತುತ್ತಾಗಿದ್ದಾರೆ.
ಅಮೆರಿಕದ ಔಷಧ ವ್ಯಾಪಾರಿ ಜಾನ್ ಪೆಂಬರ್ಟನ್, 1886ರಲ್ಲಿ ಸೋಡಾ ಬಳಸಿ ಪಾನೀಯವೊಂದನ್ನು ಸಿದ್ಧಪಡಿಸಿದ್ದರು. ಬಳಿಕ ಅದು ಕೋಕಾ ಕೋಲಾವಾಗಿ ಬದಲಾಗಿತ್ತು.
ಅಲ್ಲದೆ, ಅಮೆರಿಕದ ಜನಪ್ರಿಯ ಫಾಸ್ಟ್ ಫುಡ್ ಕಂಪೆನಿ ಮೆಕ್ಡೊನಾಲ್ಡ್ ಮಾಲೀಕ ಮೊದಲು ರಸ್ತೆ ಬದಿಯ ಡಾಬಾ ನಡೆಸುತ್ತಿದ್ದರು ಎಂದೂ ರಾಹುಲ್ ಗಾಂಧಿ ಹೇಳಿದ್ದಾರೆ.
ಒಬಿಸಿ ವರ್ಗದ ಜನರಲ್ಲಿ ಕೌಶಲದ ಕೊರತೆಯಿಲ್ಲ. ಅವರಲ್ಲಿ ಸಂಪೂರ್ಣ ಕೌಶಲವಿದೆ. ಬ್ಯಾಂಕುಗಳು ನಮ್ಮ ರೈತರು ಮತ್ತು ಸಣ್ಣ ಉದ್ದಿಮೆದಾರರಿಗೆ ಏಕೆ ತೆರೆದುಕೊಳ್ಳುತ್ತಿಲ್ಲ? ಒಬಿಸಿ ಸಮುದಾಯದಲ್ಲಿ ಕೌಶಲಕ್ಕೆ ಕೊರತೆಯಿಲ್ಲ. ಆದರೆ ಅವರಿಗೆ ಬಂಡವಾಳ ಸಿಗುತ್ತಿಲ್ಲ ಎಂದಿದ್ದಾರೆ.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿಯ ಕಾರ್ಯತಂತ್ರ ಸ್ಪಷ್ಟವಾಗಿದೆ. 15-20 ಶ್ರೀಮಂತ ಉದ್ಯಮಿಗಳು ಸಾವಿರಾರು ಕೋಟಿ ಹಣವನ್ನು ಮೋದಿ ಅವರಿಗೆ ನೀಡುತ್ತಾರೆ. ಮತ್ತು ಈ 15-20 ಶ್ರೀಮಂತರಿಗೇ ಎಲ್ಲ ಲಾಭಗಳು ಸಿಗುತ್ತಿವೆ ಎಂದು ಹೇಳಿದ್ದಾರೆ.
ಸಂಸದರು ಸೇರಿದಂತೆ ಪ್ರತಿಯೊಬ್ಬರೂ ಮಾತನಾಡಲು ಹೆದರುತ್ತಿದ್ದಾರೆ. ಹೆಚ್ಚಿನವರಿಗೆ ಮಾತನಾಡಲು ಬಿಡುತ್ತಲೇ ಇಲ್ಲ. ಅವರಲ್ಲಿ ಮಾತನಾಡುವವರನ್ನು ಬಿಜೆಪಿ ಕೇಳಿಸಿಕೊಳ್ಳುವುದೇ ಇಲ್ಲ. ಆರ್ಎಸ್ಎಸ್ಗೆ ಮಾತ್ರ ಕೇಳಿಸಿಕೊಳ್ಳಲು ಅವಕಾಶ ನೀಡಲಾಗುತ್ತಿದೆ. ದೇಶವು ಬಿಜೆಪಿಯ ಇಬ್ಬರು ಮೂವರು ಮುಖಂಡರು ಮತ್ತು ಆರ್ಎಸ್ಎಸ್ನ ಗುಲಾಮನಾಗಿದೆ ಎಂದು ಟೀಕಿಸಿದ್ದಾರೆ.
-
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕಡೆ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಗೆಲುವು ಎಂದ ಡಿ.ಕೆ.ಶಿವಕುಮಾರ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ












Click it and Unblock the Notifications