ಸ್ವಚ್ಛ ಗಂಗಾ ಯೋಜನೆಗೆ 132 ಕೋಟಿ ದೇಣಿಗೆ ಸಂಗ್ರಹ
ನವದೆಹಲಿ, ಆಗಸ್ಟ್ 04: ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಇಲ್ಲಿ ತನಕ 132 ಕೋಟಿ ದೇಣಿಗೆ ಬಂದಿದೆ ಎಂದು ಕೇಂದ್ರ ಜಲ ಸಂಪನ್ಮೂಲಗಳ ರಾಜ್ಯ ಸಚಿವ ಸಚಿವ ವಿಜಯ್ ಗೋಯೆಲ್ ಅವರು ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಗಂಗಾ ನದಿಯ ಶುಚೀಕರಣದ ಯೋಜನೆಗಾಗಿ ಸ್ಥಾಪಿಸಿದ ಸ್ವಚ್ಛ ಗಂಗಾ ನಿಧಿ ಸ್ಥಾಪಿಸಲಾಗಿದೆ. ಇದಕ್ಕೆ ಸಾರ್ವಜನಿಕರು ಸೇರಿದಂತೆ ಅನಿವಾಸಿ ಭಾರತೀಯರು, ಭಾರತೀಯ ಸಂಸ್ಥೆಗಳು ಮತ್ತು ಉದ್ಯಮಿಗಳು ದಾನ ಮಾಡಿದ್ದಾರೆ.[20 ಸಾವಿರ ಕೋಟಿ ರು. ಮೌಲ್ಯದ ನಮಾಮಿ ಗಂಗಾ ಯೋಜನೆಗೆ ಚಾಲನೆ]

ಜೂನ್ 30ರ ವರೆಗೆ ಒಟ್ಟು 132,43,81,681 ರೂ. ಗಳನ್ನು ಸ್ವಚ್ಛ ಗಂಗಾ ನಿಧಿಗೆ ದೇಣಿಗೆಯಾಗಿ ಸ್ವೀಕರಿಸಲಾಗಿದೆ ಎಂದು ಗೋಯೆಲ್ ಹೇಳಿದರು.[ಮಾತಾ 'ಅಮ್ಮ' ಕಡೆಯಿಂದ ನೂರು ಕೋಟಿ!]
ಗಂಗಾ ನದಿಯ ನೈರ್ಮಲ್ಯಕ್ಕೆ ಕುತ್ತು ತರುವಂತಹ ಅವೈಜ್ಞಾನಿಕ ಕೊಳಚೆ ನೀರಿನ ವ್ಯವಸ್ಥೆ ಇರುವ 110 ನಗರಗಳನ್ನು ಗುರುತಿಸಲಾಗಿದ್ದು ಈ ಬಗ್ಗೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಗೋಯೆಲ್ ಹೇಳಿದರು. (ಪಿಟಿಐ)












Click it and Unblock the Notifications