₹70,000 ಸಂಬಳ ಪಡೆಯುವ ಸರ್ಕಾರಿ ಶಿಕ್ಷಕನಿಗೆ Eleven ಸ್ಪೆಲಿಂಗ್ ಗೊತ್ತಿಲ್ಲ; ವಿಡಿಯೋ ವೈರಲ್
ಸಾಮಾನ್ಯವಾಗಿ ಶಿಕ್ಷಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವಾಗ ವಿವಿಧ ಹಂತದಲ್ಲಿ ಅವರ ಪ್ರತಿಭೆ ಹಾಗೂ ಸಾಮರ್ಥ್ಯ ಅಳೆದು ತೂಗಲಾಗುತ್ತದೆ. ಇನ್ನು ಸರ್ಕಾರಿ ಶಾಲಾ ಶಿಕ್ಷಕರಾಗುವುದು ಕೂಡ ಕಠಿಣ ಎನ್ನುವ ಮಾತಿದೆ. ಅಷ್ಟರ ಮಟ್ಟಿಗೆ ಪೈಪೋಟಿಯಿಂದ ಶಿಕ್ಷಕರ ಹುದ್ದೆಗೆ ಹಗಲಿರುಳೆನ್ನದೆ ಶ್ರಮ ಪಡುತ್ತಾರೆ. ಹೀಗಾಗಿ ಸರ್ಕಾರಿ ಶಾಲಾ ಶಿಕ್ಷಕರು ಪ್ರತಿಭಾವಂತರು ಎಂದೇ ಹೇಳಲಾಗುತ್ತಿದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ತಿಂಗಳಿಗೆ 70,000 ವೇತನ ಪಡೆಯುವ ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ELEVEN ಪದದ ಸ್ಪೆಲ್ಲಿಂಗ್ ಗೊತ್ತಿಲ್ಲದೆ ಪೇಚಾಡಿದ್ದು, ವಿಡಿಯೋ ಫುಲ್ ಟ್ರೋಲ್ ಆಗುತ್ತಿದೆ.
ಮಾಸಿಕ 70000 ರೂಪಾಯಿ ಸಂಬಳ ಪಡೆಯುವ ಸರ್ಕಾರಿ ಶಾಲಾ ಶಿಕ್ಷಕನಿಗೆ ಇಲೆವೆನ್ ಎಂದು ಇಂಗ್ಲೀಷ್ನಲ್ಲಿ ಬರೆಯಲು ಬರುತ್ತಿಲ್ಲ ಎಂದು ಟೀಕೆ ವ್ಯಕ್ತವಾಗಿದೆ. ಸರ್ಕಾರದಿಂದ ನಾವು ಇನ್ನೇನು ನಿರೀಕ್ಷಿಸಬಹುದು. ಸರ್ಕಾರಕ್ಕೆ ಶಿಕ್ಷಣ ಕೇವಲ ಅಧ್ಯಾಪಕರು ಎಂದು ಕಾಮೆಂಟ್ ಹಾಕುತ್ತಿದ್ದಾರೆ. ಈ ಶಾಲಾ ಶಿಕ್ಷಕರಿಗೆ 11 ಮತ್ತು 19 ಸಂಖ್ಯೆಗಳನ್ನು ಇಂಗ್ಲಿಷ್ನಲ್ಲಿ ಬರೆಯಲು ಒದ್ದಾಡಿದ್ದಾರೆ. 11ಕ್ಕೆ ಅವರು AIVENE ಎಂದು ಬರೆದರೆ, 19ಕ್ಕೆ ಅವರು NINITHIN ಬರೆದಿದ್ದಾರೆ.

ನಮ್ಮ ಶಿಕ್ಷಣ ವ್ಯವಸ್ಥೆಯ ಸ್ಥಿತಿ ಎಷ್ಟು ಶೋಚನೀಯವಾಗಿದೆ ಎಂದರೆ ಅಲ್ಲಿ ಶಿಕ್ಷಕರು ಎಷ್ಟು ಅನಕ್ಷರಸ್ಥರು ಎಂದರೆ ಅವರಿಗೆ ಹನ್ನೊಂದು ಪದದ ಸರಳ ಕಾಗುಣಿತವೂ ತಿಳಿದಿಲ್ಲ. ಇದು ನಮ್ಮ ತಲೆಮಾರುಗಳಿಗೆ ಗಂಭೀರ ಬೆದರಿಕೆ ಮತ್ತು ಅವರು ಕೆಲಸ ಪಡೆಯುವ ರೀತಿ ನಿಜಕ್ಕೂ ಅದ್ಭುತ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಇದೇ ತಪ್ಪು, ಅಲ್ಲಿ ಒಬ್ಬ ಶಿಕ್ಷಕನಿಗೆ ಹನ್ನೊಂದರ ಕಾಗುಣಿತ ಬರೆಯಲು ಸಾಧ್ಯವಾಗುವುದಿಲ್ಲ. ಆದರೆ ವೇತನ ಹೆಚ್ಚಳಕ್ಕೆ 7ನೇ ವೇತನ ಆಯೋಗ ಬೇಕು ಎಂದು ವ್ಯಂಗ್ಯವಾಡಿದ್ದಾರೆ.
ಇದು ಛತ್ತೀಸ್ಗಢದ ಬಲರಾಂಪುರದಲ್ಲಿರುವ ಸರ್ಕಾರಿ ಶಾಲೆಯೊಂದರ ವಿಡಿಯೋ ಎನ್ನಲಾಗಿದ್ದು ವೈರಲ್ ಆಗಿದೆ. ಮಾಸಿಕ ₹70,000 ಸಂಬಳ ಪಡೆಯುವ ಶಿಕ್ಷಕನೊಬ್ಬ Eleven ಪದವನ್ನು ALAVEN ಎಂದು ತಪ್ಪಾಗಿ ಬರೆದಿರುವುದು ಟ್ರೋಲ್ ಆಗುತ್ತಿದೆ. ಛತ್ತೀಸ್ಗಢದ ಬಲರಾಂಪುರ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಅಧಿಕಾರಿಗಳು ತಪಾಸಣೆ ನಡೆಸಿದಾಗ ಸುರೇಂದ್ರ ದೀಕ್ಷಿತ್ ಎಂಬ ಇಂಗ್ಲಿಷ್ ಶಿಕ್ಷಕನಿಗೆ ಎಲೆವನ್ ಪದ ಉಚ್ಚರಿಸಲು ಸಾಧ್ಯವಾಗಲಿಲ್ಲ. ಅಧಿಕಾರಿಗಳ ಮುಂದೆ ಶಿಕ್ಷಕನ ಪ್ರತಿಭೆ ಬೆಳಕಿಗೆ ಬಂದಿದ್ದು, ವಿದ್ಯಾರ್ಥಿಗಳ ಮುಂದೆ ALAVEN ಎಂದು ತಪ್ಪಾಗಿ ಉಚ್ಚರಿಸಿದ್ದಾರೆ ಎಂದು ವರದಿಯಾಗಿದೆ.
ಇಲ್ಲೇ ಶಿಕ್ಷಣ ಮಟ್ಟ ಹೀಗಿದ್ದರೆ ಮಕ್ಕಳಿಗೆ ಹೇಗೆ ಗುಣಮಟ್ಟದ ಶಿಕ್ಷಣ ಸಾಧ್ಯ ಎಂದು ನೆಟ್ಟಿಗರು ಕೇಳಿದ್ದಾರೆ. ದೇಶಾದ್ಯಂತ ಶಿಕ್ಷಕರ ನೇಮಕಾತಿ ಮತ್ತು ಮೌಲ್ಯಮಾಪನ ಪ್ರಕ್ರಿಯೆಗಳಲ್ಲಿ ಸುಧಾರಣೆಗೆ ತುರ್ತು ಕ್ರಮಗಳಿಗೆ ಒತ್ತಾಯಿಸಿದ್ದು, ಈ ವೀಡಿಯೊ ಟ್ರೆಂಡ್ನಲ್ಲಿದೆ. ಸೋಶಿಯಲ್ ಮೀಡಿಯಾ ಬಳಕೆದಾರರು ಶಿಕ್ಷಕರ ನೇಮಕಾತಿಯಲ್ಲಿ ಕಠಿಣ ಮಾನದಂಡಗಳ ಅನುಸರಣೆ ಮತ್ತು ಗುಣಮಟ್ಟ ಹೆಚ್ಚಿಸಬೇಕೆಂದು ಆಗ್ರಹಿಸಿದ್ದಾರೆ. ಈ ವಿಡಿಯೋ ಆಧರಿಸಿ ದೇಶಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗೆ ಕರೆ ನೀಡಲಾಗಿದೆ.












Click it and Unblock the Notifications