Cheetas Dies: ಕುನೋ ರಾಷ್ಟ್ರೀಯ ಉದ್ಯಾನದಿಂದ 'ಚಿರತೆಗಳ' ಸ್ಥಳಾಂತರ ನಿರ್ಧಾರ ನಮ್ಮ ಕೈಲಿಲ್ಲ
ನವದೆಹಲಿ, ಮೇ 24: ಮಧ್ಯಪ್ರದೇಶದ ಶಿಯೋಪುರ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತಂದ ಚಿರತೆಗಳ ಪೈಕಿ ಕೆಲವು ಮೃತಪಟ್ಟಿವೆ. ಇದೀಗ ಚಿರತೆಯೊಂದರ ನಾಲ್ಕು ಮರಿಗಳ ಪೈಕಿ ಒಂದು ಮರಿ ಸಹ ಸಾವನ್ನಪ್ಪಿದೆ. ಉದ್ಯಾನದ ನಿರ್ವಹಣೆ ಮೇಲೆ ಅನುಮಾನ ಮೂಡುವಂತಹ ಬೆಳವಣಿಗೆಗಳು ಪದೇ ಪದೆ ನಡೆಯುತ್ತಿವೆ. ಇತ್ತ ಅರಣ್ಯಾಧಿಕಾರಿಗಳು ಚಿರತೆಗಳ ಸ್ಥಳಾಂತರ ನಮ್ಮ ಕೈಯಲ್ಲಿಲ್ಲ, ಅದನ್ನು ಕೇಂದ್ರ ಸರ್ಕಾರ ನಿರ್ಧರಿಸಬೇಕು ಎಂದು ಹೇಳಿದ್ದಾರೆ.
ಚಿರತೆ ಮರಿ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆಎಸ್ ಚೌಹಾಣ್ ಅವರು, ಚಿರತೆಗಳನ್ನು ಸ್ಥಳಾಂತರಿಸುವ ನಿರ್ಧಾರವು ಅವರ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ಕೇಂದ್ರ ಸರ್ಕಾರ ಮಾತ್ರ ನಿರ್ಧರಿಸಲು ಸಾಧ್ಯತೆ ಎಂದರು.

ಇತ್ತೀಚೆಗಷ್ಟೇ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ 'ಜ್ವಾಲಾ' ಎಂಬ ಹೆಣ್ಣು ಚಿರತೆಯು ನಾಲ್ಕು ಮರಿಗಳನ್ನು ಹಾಕಿತ್ತು. ಅವೆಲ್ಲವುಗಳನ್ನು ಅರಣ್ಯಾಧಕಾರಿಗಳು ಗಮನಿಸುತ್ತಲೇ ಇದ್ದರು. ಹೀಗಿದ್ದರೂ ಅದರಲ್ಲಿ ಒಂದು ಮರಿ ದೌರ್ಬಲ್ಯದಿಂದ ಸಾವನ್ನಪ್ಪಿದೆ. ಮೂರು ಮರಿಗಳು ಆರೋಗ್ಯವಾಗಿವೆ.
ಮಂಗಳವಾರ ಬೆಳಗ್ಗೆ, ಎಲ್ಲಾ ಮರಿಗಳು ಮತ್ತು ತಾಯಿ ಚಿರತೆಗಳು ಒಂದೇ ಸ್ಥಳದಲ್ಲಿ ಉಳಿದುಕೊಂಡಿರುವುದನ್ನು ನಿಗಾ ತಂಡದ ಸದಸ್ಯರು ಕಂಡಿದ್ದರು. ಆಗ ನಾಲ್ಕು ಮರಿಗಳು ಸಹಿತ ತಾಯಿ ಚಿರತೆಯು ಇತ್ತು. ಸ್ವಲ್ಪ ಹೊತ್ತಿನ ನಂತರ ತಾಯಿ ಜ್ವಾಲಾ ಜೊತೆ ಮೂರು ಮರಿಗಳು ಮಾತ್ರ ಬೆರೆಡೆ ತೆರಳಿದ್ದವು. ಮೃತ ಚಿರತೆ ಮರಿ ಅಲ್ಲಿಯೆ ಇತ್ತು.
ಕೂಡಲೇ ನಿರ್ವಹಣಾ ತಂಡವು ದೌರ್ಬಲ್ಯದಿಂದ ಕೂಡಿದ್ದ ಚಿರತೆ ಮರಿಯನ್ನು ಪಶುವೈದ್ಯರ ಸೂಚನೆ ಮೇರೆಗೆ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರು. ಆದರೆ ಕೇವಲ 10 ನಿಮಿಷಗಳಲ್ಲಿ ಚಿರತೆ ಮರಿ ಸಾವನ್ನಪ್ಪಿತು. ಹುಟ್ಟಿನಿಂದಲೇ ದೌರ್ಬಲ್ಯದಿಂದ ಕೂಡಿದ ಮರಿ ಸಾವಾಗಿದೆ. ಉಳಿದ ಮೂರು ಮರಿಗಳು ಫಿಟ್ ಆಗಿವೆ ಎಂದು ಅವರು ವಿವರಿಸಿದ್ದಾರೆ.

ಚೀತಾಗಳ ನಿರ್ವಹಣೆಯಲ್ಲಿ ಲೋಪವಾಗಿಲ್ಲ
ಕಳೆದ ವರ್ಷ ಸೆಪ್ಟೆಂಬರ್ 17 ರಂದು ತಮ್ಮ ಜನ್ಮದಿನದ ಸಂದರ್ಭದಲ್ಲಿ ನಮೀಬಿಯಾದಿಂದ ತಂದ ಎಂಟು ಚಿರತೆಗಳನ್ನು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು. ಅಲ್ಲಿ ಈವರೆಗೆ ವಿವಿಧ ಕಾರಣಗಳಿಗಾಗಿ 03 ಚಿರತೆಗಳು ಸಾವನ್ನಪ್ಪಿದ್ದವು.
ಪದೇ ಪದೆ ಸಾವಿನ ಘಟನೆ ಮರುಕಳಿಸುತ್ತಿವೆ. ಇದರಿಂದ ಕುನೋ ಪಾರ್ಕ್ನಲ್ಲಿನ ಕಾರ್ಯನಿರ್ವಹಣೆ ಬಗ್ಗೆ ಅನುಮಾನ ಮೂಡಿವೆ. ಆದರೆ ಈ ಬಗ್ಗೆ ಉತ್ತರಿಸಿದ ಚೌಹಾಣ್ ಅವರು, ಚಿರತೆ ನಿರ್ವಹಣೆಯ ಪ್ರತಿ ಹಂತದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಂಡಿದ್ದೇವೆ. ನಮ್ಮಿಂದ ಯಾವ ತಪ್ಪು ಸಹ ಆಗಿಲ್ಲ ಎಂದು ತಿಳಿಸಿದರು.
ಪ್ರಾಜೆಕ್ಟ್ ಚೀತಾದಡಿ ನಮೀಬಿಯಾದ ನಂತರ ದಕ್ಷಿಣ ಆಫ್ರಿಕಾದಿಂದ ಇನ್ನೂ 12 ಚಿರತೆಗಳನ್ನು ತಂದು ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಪುನರ್ವಸತಿ ಮಾಡಲಾಯಿತು.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು












Click it and Unblock the Notifications