ಆಧಾರ್ ನಂತರ ನಾಗರಿಕರಿಗೆ ಹೊಸ ಗುರುತಿನ ಚೀಟಿ
ನವದೆಹಲಿ, ಆ.6: ಆಧಾರ್ ಗುರುತಿನ ಚೀಟಿ ನಂತರ ದೇಶದ ಎಲ್ಲಾ ನಾಗರಿಕರಿಗೆ ವಿಶಿಷ್ಟ ಗುರುತು ಚೀಟಿ ನೀಡುವುದಕ್ಕಾಗಿ ಬೃಹತ್ ಕಂಪ್ಯೂಟರ್ ಮಾಹಿತಿ ಕೋಶ (ಡಾಟಾಬೇಸ್) ಸ್ಥಾಪಿಸಲು ಮೋದಿ ಸರ್ಕಾರ ಸಿದ್ಧತೆ ನಡೆಸಿದೆ. ರಾಷ್ಟ್ರೀಯ ಭಾರತೀಯ ನಾಗರಿಕರ ನೋಂದಣಿ ಮಾಹಿತಿ ಕೋಶ ನಿರ್ಮಿಸಲು ಕೇಂದ್ರ ಸಚಿವ ಸಂಪುಟ ಅಂಗೀಕಾರ ನೀಡುವ ಸಾಧ್ಯತೆಯಿದೆ. ಈ ಯೋಜನೆಯನ್ನು ಗೃಹ ಇಲಾಖೆಯು ಜಾರಿಗೊಳಿಸಲಿದೆ.
ಭಾರತೀಯ ನಾಗರಿಕರು ಯಾರು ಹಾಗೂ ಯಾರು ಅಲ್ಲ ಎಂಬುದನ್ನು ನಾವು ಗುರುತಿಸಬೇಕಾಗಿದೆಎಂದು ಕಳೆದ ತಿಂಗಳು ಗೃಹ ಸಚಿವ ರಾಜ್ನಾಥ್ ಸಿಂಗ್ ಸಂಸತ್ತಿನಲ್ಲಿ ಹೇಳಿದ್ದರು. ಅದರಂತೆ ಹೊಸ ಗುರುತಿನ ಚೀಟಿ ಕಾರ್ಯ ಯೋಜನೆ ಸಿದ್ಧವಾಗಿದೆ.
ಈ ಗುರುತುಚೀಟಿ ಪಡೆಯಲು ನಾಗರಿಕರು ಜನನ ಪ್ರಮಾಣಪತ್ರಗಳು ಮತ್ತು ಭೂದಾಖಲೆಗಳು ಸೇರಿದಂತೆ 20 ದಾಖಲೆಗಳ ಪೈಕಿ ಒಂದನ್ನು ಸಲ್ಲಿಸಬೇಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ದಾಖಲೆಗಳನ್ನು ಹೊಂದಿರದವರಿಗಾಗಿ ಗ್ರಾಮ ಮಟ್ಟದ ಸಂಸ್ಥೆಗಳು ಪ್ರತ್ಯೇಕ ತಪಾಸಣಾ ಪ್ರಕ್ರಿಯೆಯನ್ನು ರೂಪಿಸುತ್ತಿವೆ.

2009ರಲ್ಲಿ ಕೆಲವು ಲಕ್ಷ ಜನರನ್ನು ಗುರಿಯಾಗಿಸಿ ನಡೆಸಿದ ಮಾದರಿ ಅಧ್ಯಯನದ ವೇಳೆ, ಸಂದರ್ಶಿಸಲಾದ ಜನರ ಪೈಕಿ 85 ಶೇ. ಮಂದಿ ಮಾತ್ರ ಪ್ರಜೆಗಳ ಸ್ಥಾನಮಾನ ಹೊಂದಿದ್ದರು. ಸುಮಾರು 2 ಶೇ. ಮಂದಿ ಅಕ್ರಮ ವಲಸಿಗರಾಗಿದ್ದರು.
ಭಾರತೀಯ ಪ್ರಜೆಗಳ ಸ್ಥಾನಮಾನ ಹೊಂದದವರು ಹಾಗೂ 'ಅಕ್ರಮ ವಲಸಿಗರು' ಎಂಬ ವರ್ಗೀಕರಣಕ್ಕೊಳಗಾದವರ ಹಣೆಬರಹ ಏನು ಎಂಬುದನ್ನು ನಿರ್ಧರಿಸಬೇಕಾಗಿದೆ. ವಿಶಾಲ ವ್ಯಾಪ್ತಿಯಲ್ಲಿ ಎರಡು ಆಯ್ಕೆಗಳಿವೆ: ದೇಶ ತೊರೆಯುವಂತೆ ಅವರಿಗೆ ಸೂಚನೆ ನೀಡಬಹುದಾಗಿದೆ ಅಥವಾ ಸರಕಾರ ಅವರಿಗೆ ಕೆಲಸದ ಪರವಾನಿಗೆ (ವರ್ಕ್ ಪರ್ಮಿಟ್)ಗಳನ್ನು ಕೊಟ್ಟು ಭಾರತದಲ್ಲೇ ಇರಲು ಅವಕಾಶ ಮಾಡಿಕೊಡಬಹುದಾಗಿದೆ. ಈ ಅಂಶದ ಬಗ್ಗೆ ಸಂಪುಟ ಇನ್ನೂ ಚರ್ಚಿಸಲು ಆರಂಭಿಸಿಲ್ಲ ಎಂದು ಮೂಲಗಳು ಹೇಳಿವೆ.
ಈ ಮಾಹಿತಿ ಕೋಶ ನಿರ್ಮಾಣ ಪ್ರಕ್ರಿಯೆ ಪೂರ್ಣಗೊಂಡಾಗ, ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಅವಧಿಯಲ್ಲಿ ಒಂದು ಸ್ಥಳದಲ್ಲಿ ವಾಸಿಸುತ್ತಿರುವ ನಿವಾಸಿಗಳನ್ನು ಪಟ್ಟಿ ಮಾಡುವ ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್ಪಿಆರ್) ಮತ್ತು ಭಾರೀ ಚಚೆರ್ಗೊಳಗಾದ ಆಧಾರ್ ಕಾರ್ಡ್ ತೆರೆಮರೆಗೆ ಸರಿಯಲಿದೆ. ಕಲ್ಯಾಣ ಕಾರ್ಯಕ್ರಮಗಳ ಮೂಲಕ ಬಡವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ನಗದು ವರ್ಗಾವಣೆ ಮಾಡಲು ಹಿಂದಿನ ಯುಪಿಎ ಸರಕಾರ ಜಾರಿಗೆ ತಂದ 12 ಅಂಕಿಗಳ ವಿಶಿಷ್ಟ ಸಂಖ್ಯೆಯನ್ನು ಪ್ರತಿ ಪ್ರಜೆಗೆ ಆಧಾರ್ ಯೋಜನೆ ನೀಡುತ್ತದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications