150 ರೈಲು, 50 ರೈಲು ನಿಲ್ದಾಣ ಖಾಸಗಿಯಿಂದ ಕಾರ್ಯಾಚರಣೆಗೆ ಯೋಜನೆ
ನವದೆಹಲಿ, ಅಕ್ಟೋಬರ್ 10: 150 ರೈಲುಗಳು ಹಾಗೂ 50 ರೈಲು ನಿಲ್ದಾಣಗಳ ಕಾರ್ಯಾಚರಣೆಯನ್ನು ಖಾಸಗಿಯವರಿಗೆ ಒಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೀಲನಕ್ಷೆಯೊಂದನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿದೆ. ನಿಗದಿತ ಅವಧಿಯೊಳಗೆ ಈ ಪ್ರಕ್ರಿಯೆ ಮುಗಿಸುವ ಆಲೋಚನೆಯಲ್ಲಿ ಸರ್ಕಾರ ಇದೆ.
ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಅವರು ರೈಲ್ವೆ ಮಂಡಳಿಯ ಅಧ್ಯಕ್ಷ ವಿ. ಕೆ. ಯಾದವ್ ಗೆ ಪತ್ರ ಬರೆದಿದ್ದು, ಈ ಪ್ರಕ್ರಿಯೆಗಾಗಿಯೇ ತಂಡವೊಂದನ್ನು ರೂಪಿಸುವುದಾಗಿ ಹೇಳಿದ್ದಾರೆ. ಯಾದವ್, ಕಾಂತ್ ಹೊರತುಪಡಿಸಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ, ಗೃಹ ಹಾಗೂ ನಗರ ವ್ಯವಹಾರಗಳ ಕಾರ್ಯದರ್ಶಿ ಕೂಡ ಈ ತಂಡದ ಭಾಗವಾಗಿ ಇರುತ್ತಾರೆ.
ನಾನೂರು ರೈಲು ನಿಲ್ದಾಣಗಳನ್ನು ವಿಶ್ವ ದರ್ಜೆಯ ನಿಲ್ದಾಣಗಳಾಗಿ ಮೇಲ್ದರ್ಜೆಗೆ ಏರಿಸಲು ನಿರ್ಧರಿಸಿತ್ತು. ಈ ವರೆಗೆ ಕೆಲವನ್ನು ಮಾತ್ರ ಮೇಲ್ದರ್ಜೆಗೆ ಏರಿಸಲಾಗಿದೆ ಎಂದು ಅಮಿತಾಭ್ ಕಾಂತ್ ಹೇಳಿದ್ದಾರೆ.

ನಾನು ರೈಲ್ವೆ ಸಚಿವರ ಜತೆ ಕೂಲಂಕಷ ಚರ್ಚೆ ನಡೆಸಿದ್ದೇನೆ. ಕನಿಷ್ಠ ಐವತ್ತು ರೈಲು ನಿಲ್ದಾಣಗಳನ್ನು ಆದ್ಯತೆ ಮೇರೆಗೆ ಮೇಲ್ದರ್ಜೆಗೆ ಏರಿಸುವ ಅಗತ್ಯ ಇದೆ ಎಂದು ನಿರ್ಧರಿಸಲಾಯಿತು. ಈಚೆಗೆ ಆರು ವಿಮಾನ ನಿಲ್ದಾಣಗಳನ್ನು ಹೇಗೆ ಖಾಸಗಿಯಾಗಿ ಮಾಡಲಾಯಿತು, ಅದೇ ರೀತಿ ಕಾರ್ಯದರ್ಶಿಗಳ ತಂಡ ಅಸ್ತಿತ್ವಕ್ಕೆ ತಂದು, ನಿಗದಿತ ಗಡುವಿನೊಳಗೆ ಪ್ರಕ್ರಿಯೆ ಮುಗಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಇನ್ನು ರೈಲ್ವೆ ಸಚಿವಾಲಯದಿಂದ ಖಾಸಗಿ ರೈಲು ಆಪರೇಟರ್ ಗಳನ್ನು ಪ್ರಯಾಣಿಕರ ರೈಲು ನಿರ್ವಹಣೆಗಾಗಿ ಕರೆತರಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ನೂರೈವತ್ತು ರೈಲುಗಳನ್ನು ಖಾಸಗಿಗೆ ಒಪ್ಪಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅಮಿತಾಭ್ ಕಾಂತ್ ಹೇಳಿದ್ದಾರೆ.
ಅಕ್ಟೋಬರ್ ನಾಲ್ಕನೇ ತಾರೀಕು ಲಖನೌ- ದೆಹಲಿ ಮಧ್ಯೆ ತೇಜಸ್ ಎಕ್ಸ್ ಪ್ರೆಸ್ ರೈಲು ಮೊದಲ ಬಾರಿಗೆ ರೈಲ್ವೆ ಹೊರತುಪಡಿಸಿ ಇತರ ಆಪರೇಟರ್ ನಿರ್ವಹಿಸಿದ್ದಾರೆ. ಅದು ರೈಲ್ವೆಯ ಅಂಗ ಸಂಸ್ಥೆಯೇ ಆದ ಐಆರ್ ಸಿಟಿಸಿ ನಿರ್ವಹಿಸಿತ್ತು.
-
ಅಧಿಕಾರ ಬದಲಾವಣೆ; ನನ್ನ-ಸಿಎಂ ಬಿಟ್ಟು ಬೇರೆಯವರ ಮಾತು ಮುಖ್ಯವಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ -
Railway Board: ಗಂಟೆಗೆ 220 ಕಿಮೀ ಸಂಚರಿಸಬಲ್ಲ ದೇಶಿ ಸೆಮಿ-ಹೈಸ್ಪೀಡ್ ರೈಲುಗಳ ತಯಾರಿಕೆಗೆ ಗ್ರೀನ್ ಸಿಗ್ನಲ್ -
ಉಪಚುನಾವಣಾ ಅಖಾಡ ಸಜ್ಜು: ನಾಳೆ ಬಾಗಲಕೋಟೆ, ದಾವಣಗೆರೆ ದಕ್ಷಿಣದಲ್ಲಿ ಮತದಾನ; ಇಂದು ಮನೆ ಮನೆ ಮತಯಾಚನೆ -
ಭಾರತೀಯ ರೈಲ್ವೆ ಸುಧಾರಣೆ: 1,364 ಕೋಟಿ ರೂ.ವೆಚ್ಚದ 'ಕವಚ' ಮತ್ತು ಸಿಗ್ನಲಿಂಗ್ ಯೋಜನೆಗಳಿಗೆ ಅನುಮೋದನೆ -
Darshan: ನಟ ದರ್ಶನ್ ಕಾನೂನು ಹೋರಾಟಕ್ಕೆ ಗೆಲುವು: 'ಬಾಸ್' ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ -
Copra Price: ಇದೇ ಮೊಟ್ಟ ಮೊದಲ ಬಾರಿ ತಿಪಟೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ -
KSRTC ನೌಕರರ ಹಿಂಬಾಕಿ 1271 ರೂ ಬಿಡುಗಡೆ; ವೇತನ ಹೆಚ್ಚಳಕ್ಕೆ ಮುಹೂರ್ತ ಫಿಕ್ಸ್: ಏ.17ಕ್ಕೆ ನಿರ್ಣಾಯಕ ಸಭೆ -
ಕರ್ನಾಟಕ ದ್ವಿತೀಯ PUC ಫಲಿತಾಂಶಕ್ಕೆ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ: ಏಪ್ರಿಲ್ 8ಕ್ಕೂ ರಿಸಲ್ಟ್ ಬರೋದು ಡೌಟ್? -
Viral: ಕಚೇರಿಗೆ ಬಂದ ಪೋಷಕರು, ಮ್ಯಾನೇಜರ್ ಬಳಿ ಮಗಳ ವರ್ತನೆ ಬಗ್ಗೆ ವಿಚಾರಣೆ: ಶಾಲಾ ದಿನಗಳನ್ನು ನೆನಪಿಸಿದ ವಿಡಿಯೋ -
Divorce Celebration: ಡಿವೋರ್ಸ್ ಪಡೆದ ಮಗಳಿಗೆ ಸಿಹಿ ತಿನ್ನಿಸಿ ಅದ್ದೂರಿ ಸ್ವಾಗತ: ತಂದೆಯ ಸಂಭ್ರಮಾಚರಣೆ ವಿಡಿಯೋ ವೈರಲ್ -
Gold Rate April 7: ಚಿನ್ನ - ಬೆಳ್ಳಿ ಬೆಲೆ ಸತತ 3ನೇ ದಿನವೂ ಇಳಿಕೆ; ಚಿನ್ನ ಪ್ರಿಯರಿಗೆ ಗುಡ್ನ್ಯೂಸ್ -
Viral Video: ಆರ್ಸಿಬಿ Vs ಸಿಎಸ್ಕೆ ಪಂದ್ಯ; ಕರ್ನಾಟಕ Vs ತಮಿಳುನಾಡು ಮಾಡಬೇಡಿ ಎಂದ ಸಿಎಸ್ಕೆ ಫ್ಯಾನ್












Click it and Unblock the Notifications