ಮೋದಿ ಸೆಲ್ಫಿ ಬೂತ್ಗಳ ವೆಚ್ಚದ ಬಗ್ಗೆ ಮಾಹಿತಿ ಲೀಕ್: ಮುಂದಾಗಿದ್ದೇನು?
ನವದೆಹಲಿ, ಜನವರಿ, 03: ದೇಶದ ಹಲವು ರೈಲ್ವೆ ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ 3ಡಿ ನರೇಂದ್ರ ಮೋದಿ ಸೆಲ್ಫಿ ಬೂತ್ಗಳ ನಿರ್ಮಾಣದ ವೆಚ್ಚದ ಕುರಿತು ಮಾಹಿತಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ಹಿನ್ನೆಲೆ ಸೆಂಟ್ರಲ್ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಶಿವರಾಜ್ ಮನಸ್ಪುರೆ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಶಿವರಾಜ್ ಮನಸ್ಪುರೆ ಅವರು ಈ ಹುದ್ದೆಯನ್ನು ವಹಿಸಿಕೊಂಡ ಕೇವಲ 7 ತಿಂಗಳುಗಳಾಗಿದ್ದವು. ಇನ್ನು ಶಿವರಾಜ್ ಅವರ ವರ್ಗಾವಣೆಗೆ ಯಾವುದೇ ಕಾರಣ ನೀಡಲಾಗಿಲ್ಲ ಮತ್ತು ಅವರ ಮುಂದಿನ ಪೋಸ್ಟಿಂಗ್ ಬಗ್ಗೆಯೂ ಮಾಹಿತಿ ಇಲ್ಲ ಎನ್ನುವ ಮಾಹಿತಿ ತಿಳಿದುಬಂದಿದೆ.

ಅಮರಾವತಿ ಮೂಲದ ಆರ್ಟಿಐ ಕಾರ್ಯಕರ್ತ ಅಜಯ್ ಬೋಸ್ ಅವರು ಭಾರತೀಯ ರೈಲ್ವೆಯ 19 ವಲಯಗಳಲ್ಲಿ ಸೇರಿದ ಸೆಂಟ್ರಲ್ ರೈಲ್ವೆ ಸಹಿತ ಪಶ್ಚಿಮ ರೈಲ್ವೆ, ದಕ್ಷಿಣ ರೈಲ್ವೆ, ಉತ್ತರ ರೈಲ್ವೆ ಮತ್ತು ವಾಯುವ್ಯ ರೈಲ್ವೆಯಿಂದ ಮೋದಿ ಸೆಲ್ಫಿ ಬೂತ್ಗಳ ಬಗ್ಗೆ ಮಾಹಿತಿ ಕೋರಿದ್ದರು. ಈ 5 ವಲಯಗಳ ಪೈಕಿ ಸೆಂಟ್ರಲ್ ರೈಲ್ವೆ ಮಾತ್ರ ವೆಚ್ಚಗಳ ಮಾಹಿತಿ ನೀಡಿತ್ತು.
ಸೆಂಟ್ರಲ್ ರೈಲ್ವೆ ಆರ್ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ 20 ಶಾಶ್ವತ ಸೆಲ್ಫಿ ಬೂತ್ಗಳನ್ನು ತಲಾ 6.25 ಲಕ್ಷ ರೂಪಾಯಿ ವೆಚ್ಚದಲ್ಲಿ (ಒಟ್ಟು ರೂಪಾಯಿ 1.25 ಕೋಟಿ) ನಿರ್ಮಾಣ ಮಾಡಲಾಗಿದೆ. ಇನ್ನೂ 32 ತಾತ್ಕಾಲಿಕ ಸೆಲ್ಫೀ ಬೂತ್ಗಳನ್ನು ತಲಾ 1.25 ಲಕ್ಷ ರೂಪಾಯಿ ವೆಚ್ಚದಲ್ಲಿ (ಒಟ್ಟು ರೂ 40 ಲಕ್ಷ) ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿತ್ತು.
ಸೆಂಟ್ರಲ್ ರೈಲ್ವೆ ಪರವಾಗಿ ಡೆಪ್ಯುಟಿ ಜಿಎಂ ಅಭಯ್ ಮಿಶ್ರಾ ಮಾಹಿತಿ ನೀಡಿದ್ದರೂ, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ವರ್ಗಾಯಿಸಲಾಗಿದೆ ಎಂದು ಆರ್ಟಿಐ ಹೋರಾಟಗಾರ ಬೋಸ್ ಹೇಳಿದ್ದಾರೆ. ಇನ್ನು ಶಿವರಾಜ್ ಅವರ ಸ್ಥಾನಕ್ಕೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ನೇಮಕಗೊಂಡಿರುವ ಸ್ವಪ್ನೀಲ್ ಡಿ ನೀಲಾ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಇತರ ಕೆಲ ಅಧಿಕಾರಿಗಳ ಪ್ರಕಾರ ಇದು ಉನ್ನತ ಮಟ್ಟದ ನಿರ್ಧಾರ ಆಗಿದೆ.
ವೆಚ್ಚದ ವಿವರ: ರೈಲ್ವೆ ನಿಲ್ದಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವಿರುವ 3ಡಿ ಸೆಲ್ಫಿ ಬೂತ್ಗೆ ಕೇಂದ್ರವು ₹6.25 ಲಕ್ಷದವರೆಗೆ ಖರ್ಚು ಮಾಡುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರತಿ ತಾತ್ಕಾಲಿಕ ಸೆಲ್ಫಿ ಬೂತ್ಗೆ ತಗಲುವ ವೆಚ್ಚ ₹1.25 ಲಕ್ಷ ಆಗುತ್ತದೆ ಎಂದು ತಿಳಿದುಬಂದಿದೆ.
50 ರೈಲು ನಿಲ್ದಾಣಗಳಲ್ಲಿ ಸೆಲ್ಫಿ ಬೂತ್ಗಳ ನಿರ್ಮಾಣ: ನಿವೃತ್ತ ರೈಲ್ವೇ ಅಧಿಕಾರಿ ಅಜಯ್ ಬೋಸ್ ಅವರು ಆರ್ಟಿಐ ಅಡಿಯಲ್ಲಿ ಸಲ್ಲಿಸಿದ ಪ್ರಶ್ನೆಗೆ ಉತ್ತರವಾಗಿ ಸೆಂಟ್ರಲ್ ರೈಲ್ವೇ ಡೆಪ್ಯುಟಿ ಜನರಲ್ ಮ್ಯಾನೇಜರ್ ಅಭಯ್ ಮಿಶ್ರಾ ಅವರು, ಮುಂಬೈ, ಭೂಸಾವಲ್, ನಾಗಪುರ, ಪುಣೆ ಮತ್ತು ಸೊಲ್ಲಾಪುರಗಳ 50 ರೈಲು ನಿಲ್ದಾಣಗಳಲ್ಲಿ ಮೋದಿ ಅವರ 3ಡಿ ಸೆಲ್ಫಿ ಬೂತ್ಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಛತ್ರಪತಿ ಶಿವಾಜಿ ಟರ್ಮಿನಸ್, ಕಲ್ಯಾಣ್, ನಾಗ್ಪುರ ಮತ್ತು ಬೇತುಲ್ ಸೇರಿದಂತೆ 30 ಕೆಟಗರಿ ಎ ಸ್ಟೇಷನ್ಗಳಲ್ಲಿ ತಾತ್ಕಾಲಿಕ ಬೂತ್ಗಳನ್ನು ಸ್ಥಾಪಿಸಿದರೆ, ಕರ್ಜತ್, ಲಾತೂರ್ ಮತ್ತು ಕೋಪರ್ಗಾಂವ್ ಸೇರಿದಂತೆ 20 ನಿಲ್ದಾಣಗಳಲ್ಲಿ ಶಾಶ್ವತ ಬೂತ್ಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ 3D ಸೆಲ್ಫಿ/ಫೋಟೋ ಬೂತ್ಗಳಿಗೆ ಪ್ರತಿ ವರ್ಗ ಎ ನಿಲ್ದಾಣದ ತಾತ್ಕಾಲಿಕ ಸ್ಥಾಪನೆಗೆ ₹ 1.25 ಲಕ್ಷ ಮತ್ತು ಪ್ರತಿ ವರ್ಗ C ಸ್ಟೇಷನ್ನ ಶಾಶ್ವತ ಸ್ಥಾಪನೆಗೆ ₹ 6.25 ಲಕ್ಷಕ್ಕೆ L1 ದರಗಳನ್ನು ಅನುಮೋದಿಸಿದೆ ಎಂದು RTI ಉತ್ತರವು ಹೇಳುತ್ತದೆ. ಅನುಸ್ಥಾಪನ. ಈ ದರವು ತೆರಿಗೆಗಳಿಂದ ಹೊರತಾಗಿದೆ ಎಂದು ಆರ್ಟಿಐ ಉತ್ತರ ಹೇಳುತ್ತದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೆಂಟ್ರಲ್ ಬ್ಯೂರೋ ಆಫ್ ಕಮ್ಯುನಿಕೇಷನ್ 3D ಸೆಲ್ಫಿ ಬೂತ್ಗಳ ತಾತ್ಕಾಲಿಕ ಸ್ಥಾಪನೆಗೆ 1.25 ಲಕ್ಷ ಮತ್ತು ಶಾಶ್ವತ ಬೂತ್ಗಳ ಸ್ಥಾಪನೆಗೆ 6.25 ಲಕ್ಷ ರೂಪಾಯಿಗಳನ್ನು ಅನುಮೋದಿಸಿದೆ ಎಂದು RTI ಮಾಹಿತಿಯು ಹೇಳುತ್ತದೆ.
ಕೇಂದ್ರ ರೈಲ್ವೇಯಲ್ಲಿನ ತಾತ್ಕಾಲಿಕ ಮತ್ತು ಶಾಶ್ವತ ಮೋದಿ ಪೋಟೋ ಇರುವ ಬೂತ್ಗಳ ನಿರ್ಮಾಣಕ್ಕೆ ಒಟ್ಟು ವೆಚ್ಚ 1.62 ಕೋಟಿ ರೂಪಾಯಿ ಆಗಲಿದೆ. ಇದರಲ್ಲಿ ಶಾಶ್ವತ ಪೋಟೋ ಬೂತ್ಗಳಿಗೆ 1.25 ಕೋಟಿ ಮತ್ತು ತಾತ್ಕಾಲಿಕವಾಗಿ ಸ್ಥಾಪಿಸಲು 37.5 ಲಕ್ಷ ರೂಪಾಯಿ ವೆಚ್ಚ ಆಗಲಿದೆ ಎಂದು ಆರ್ಟಿಐ ಮಾಹಿತಿಯಿಂದ ತಿಳಿದುಬಂದಿದೆ.
ಉತ್ತರ ರೈಲ್ವೇ ಮತ್ತೊಂದು ಆರ್ಟಿಐ ಪ್ರಶ್ನೆಗೆ ಉತ್ತರವಾಗಿ, ಪ್ರಧಾನಿಯವರ ಸೆಲ್ಫಿ ಫೋಟೋ ಬೂತ್ಗಳನ್ನು ರೈಲ್ವೆ ನಿಲ್ದಾಣಗಳಾದ್ಯಂತ 100 ವಿವಿಧ ಪಾಯಿಂಟ್ಗಳಲ್ಲಿ ಸ್ಥಾಪಿಸಲಾಗುವುದು. ಕೆಲವು ನಿಲ್ದಾಣಗಳು ಒಂದಕ್ಕಿಂತ ಹೆಚ್ಚು ಬೂತ್ಗಳನ್ನು ಹೊಂದಿವೆ ಎಂದು ಹೇಳಿದೆ. ಉದಾಹರಣೆಗೆ, ಡೆಹ್ರಾಡೂನ್, ಅಂಬಾಲಾ, ನವದೆಹಲಿ, ಅಮೃತಸರ, ಅಯೋಧ್ಯೆ, ಚಂಡೀಗಢಗಳು ಪ್ರತಿ ನಿಲ್ದಾಣದಲ್ಲಿ ಮೂರು ಬೂತ್ ಸ್ಥಾಪನೆ ಮಾಡಲಾಗುತ್ತದೆ ಎಂದು ತಿಳಿಸಿದೆ.
"ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಯು ಉತ್ತರ ರೈಲ್ವೆಯ ಎಂಟು ಎಂಪನೆಲ್ಡ್ ಏಜೆನ್ಸಿಗಳಿಗೆ ಸಮಾನವಾಗಿ ಗುತ್ತಿಗೆ ಕೆಲಸವನ್ನು ಹಂಚಲಾಗಿದೆ ಎಂದು ಹೇಳಿದರೆ, ಅಧಿಕಾರಿಗಳು ಕಾಮಗಾರಿಯನ್ನು ಗುತ್ತಿಗೆ ಪಡೆದಿರುವ ಏಜೆನ್ಸಿಗಳ ಹೆಸರು ಅಥವಾ ಒಟ್ಟು ವೆಚ್ಚವನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತರಾದ ಶ್ರೀ ಬೋಸ್ ಅವರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರ, ದಕ್ಷಿಣ ಅಥವಾ ಪಶ್ಚಿಮ ರೈಲ್ವೇಯಿಂದ ಒಟ್ಟು ವೆಚ್ಚ ಮತ್ತು ಎಂಪನೆಲ್ ಮಾಡಲಾದ ಏಜೆನ್ಸಿಗಳ ಹೆಸರುಗಳನ್ನು ಬಹಿರಂಗಪಡಿಸಲಾಗಿಲ್ಲ ಎಂದು ಶ್ರೀ ಬೋಸ್ ಹೇಳಿದರು. ತಿರುಚ್ಚಿರಾಪಳ್ಳಿ ಜಂಕ್ಷನ್, ತಂಜಾವೂರು, ತಿರುವರೂರು ಜಂಕ್ಷನ್ ಮತ್ತು ವೆಲ್ಲೂರ್ ಕಂಟೋನ್ಮೆಂಟ್ ಸೇರಿದಂತೆ ವಿಭಾಗದ 11 ನಿಲ್ದಾಣಗಳಲ್ಲಿ ಪ್ರಧಾನ ಮಂತ್ರಿಯವರ 3ಡಿ ಸೆಲ್ಫಿ ಫೋಟೋ ಬೂತ್ಗಳನ್ನು ಸ್ಥಾಪಿಸಲಾಗುವುದು ಎಂದು ದಕ್ಷಿಣ ರೈಲ್ವೆಯ ತಿರುಚ್ಚಿರಾಪಳ್ಳಿ ವಿಭಾಗವು ಆರ್ಟಿಐ ಪ್ರಶ್ನೆಗೆ ಉತ್ತರಿಸಿದೆ.
ದಕ್ಷಿಣ ರೈಲ್ವೆಯ ಆರು ವಿಭಾಗಗಳಲ್ಲಿ ಒಂದು ಮಾತ್ರ RTI ಪ್ರಶ್ನೆಗೆ ಉತ್ತರಿಸಿದೆ ಶ್ರೀ ಬೋಸ್ ಹೇಳಿದರು. ಪಶ್ಚಿಮ ರೈಲ್ವೇಯಲ್ಲೂ, ಐದು ವಿಭಾಗಗಳಲ್ಲಿ ಒಂದು - ಭಾವನಗರ- ಮಾತ್ರ RTI ಪ್ರಶ್ನೆಗೆ ಪ್ರತಿಕ್ರಿಯಿಸಿತು. "ಡಿಸೆಂಬರ್ 4ರಿಂದ, ವೆರವಲ್, ಭಾವನಗರ ಟರ್ಮಿನಸ್, ಬೋಟಾಡ್, ಧಂಧೂಕಾ ಮತ್ತು ಪಶ್ಚಿಮ ರೈಲ್ವೆ ಭಾವನಗರ ವಿಭಾಗದ ಗಾಂಧಿಗ್ರಾಮ್ ಎಂಬ ಐದು ನಿಲ್ದಾಣಗಳಲ್ಲಿ ಸೆಲ್ಫಿ ಪಾಯಿಂಟ್ಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದೆ.
ಪ್ರತಿಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ನ ಶಶಿ ತರೂರ್ ಮತ್ತು ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಅವರು ಪ್ರಧಾನಿಯವರ ಸೆಲ್ಫಿ ಬೂತ್ಗಳಿಗೆ ಕೇಂದ್ರ ಮಾಡಿರುವ ವೆಚ್ಚದ ಬಗ್ಗೆ ಟ್ವೀಟ್ ಮೂಲಕ ಆಕ್ರೋಶ ವ್ತಕ್ತಪಡಿಸಿದ್ದಾರೆ.
"ರೈಲಿನಲ್ಲಿ ಪ್ರಯಾಣಿಸುವಾಗ ಯಾರಾದರೂ ತಮ್ಮ ಘೋರ ಅನುಭವವನ್ನು ಹಂಚಿಕೊಳ್ಳದೆ ಒಂದು ದಿನವೂ ಹೋಗುವುದಿಲ್ಲ. ಸೇವೆಗಳು ಬರಿದಾಗುತ್ತಿದ್ದರೂ ಜನರು ಸೇವೆಗಳಿಗೆ ಹೆಚ್ಚು ಪಾವತಿಸುತ್ತಿದ್ದಾರೆ. ಇನ್ನು ಉತ್ತಮ ಸೌಲಭ್ಯಗಳಿಗಿಂತ ಸೆಲ್ಫಿ ಪಾಯಿಂಟ್ಗಳಿಗೆ ಕೋಟಿ ಲೆಕ್ಕದಲ್ಲಿ ಹಣವನ್ನು ಖರ್ಚು ಮಾಡುತ್ತಿದ್ದಾರೆ. ಸೆಂಟ್ರಲ್ ರೈಲ್ವೇಗೆ ನಾಚಿಕೆಯಾಗಬೇಕು" ಎಂದು ಶ್ರೀಮತಿ ಚತುರ್ವೇದಿ ಅವರು ಆಕ್ರೋಶ ವ್ಯಕ್ತಪಡಿಸಿದ್ದರು.
ಇನ್ನು ಖರ್ಗೆ ಅವರು, "ರೈಲ್ವೆ ನಿಲ್ದಾಣಗಳಲ್ಲಿ ಮೋದಿಜಿಯವರ 3D ಸೆಲ್ಫಿ ಪಾಯಿಂಟ್ಗಳನ್ನು ಸ್ಥಾಪಿಸುವ ಮೂಲಕ ತೆರಿಗೆದಾರರ ಹಣವನ್ನು ಸಂಪೂರ್ಣವಾಗಿ ವ್ಯರ್ಥ ಮಾಡಲಾಗುತ್ತಿದೆ. ಮೋದಿ ಸರ್ಕಾರ ರಾಜ್ಯಗಳಿಗೆ ಬರ ಮತ್ತು ಪ್ರವಾಹದ ಪರಿಹಾರ ನೀಡಿಲ್ಲ. ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳಿಗೆ MGNREGA ನಿಧಿಗಳು ಸಹ ಬಾಕಿ ಉಳಿದಿವೆ. ಆದರೆ ಸಾರ್ವಜನಿಕ ಹಣವನ್ನು ಸುಮ್ಮನೆ ದುಂದುವೆಚ್ಚ ಮಾಡುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ












Click it and Unblock the Notifications