ಸೋನಿಯಾ ಅಣತಿಯಂತೆ ನಡೆಯುತ್ತಿದ್ದ ಸೆನ್ಸಾರ್ ಮುಖ್ಯಸ್ಥೆ?
ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಸೆನ್ಸಾರ್ ಮಂಡಳಿಗೆ ಪದಾಧಿಕಾರಿಗಳನ್ನು ನೇಮಿಸಿರಲಿಲ್ಲ. ಏಪ್ರಿಲ್ 2014ರಂದು ಲೀಲಾ ಸಾಮ್ಸನ್ ಮತ್ತು ಇತರ ಅಧಿಕಾರಿಗಳ ಅವಧಿ ಮುಗಿದಿದ್ದರೂ, ಇಲಾಖೆ ತನ್ನ ಮುಂದಿನ ಆದೇಶದವರೆಗೆ ಕೆಲಸ ಮುಂದುವರಿಸಿಕೊಂಡು ಹೋಗಬೇಕೆಂದು ಆದೇಶ ನೀಡಿತ್ತು. (ಪಿಕೆ ಚಿತ್ರವಿಮರ್ಶೆ)
ಲೀಲಾ ಸಾಮ್ಸನ್ ಅವರು ಸೋನಿಯಾ ಗಾಂಧಿಯ ಅಣತಿಯಂತೆ ಮತ್ತು ಡಿಎಂಕೆ ಪಕ್ಷದ ಪರವಾಗಿ ಕೆಲಸ ಮಾಡುತ್ತಾರೆ ಎನ್ನುವ ಆಪಾದನೆ ಇಂದು ನಿನ್ನೆಯದಲ್ಲ.
ನಿತ್ಯಾ ಕಲಾ ಅಕಾಡೆಮಿಯ ಮುಖ್ಯಸ್ಥೆಯಾಗಿದ್ದ ಅವಧಿಯಲ್ಲಿ ಲೀಲಾ, ಚೆನ್ನೈನಲ್ಲಿ ಭರತನಾಟ್ಯದ ಸಂಪ್ರದಾಯದ ಭಾಗವಾದ ಸರಸ್ವತಿ ಮತ್ತು ನಟರಾಜ ದೇವರ ವಂದನೆ ನಡೆಸುವ ಪದ್ದತಿಯನ್ನು ನಿಲ್ಲಿಸುವ ಪ್ರಯತ್ನವನ್ನು ಮಾಡಿದ್ದರು ಎನ್ನುವ ಆರೋಪವೂ ಇವರ ಮೇಲಿದೆ.

2012ರ ಸಿಎಜಿ (Comptroller and Auditor General) ರಿಪೋರ್ಟಿನಲ್ಲಿ ಹಣಕಾಸಿನ ಅವ್ಯಹಾರದಲ್ಲೂ ಲೀಲಾ ಸಾಮ್ಸನ್ ಹೆಸರು ಕೇಳಿ ಬಂದಿತ್ತು. 1990ರ ಪದ್ಮಶ್ರೀ ಪ್ರಶಸ್ತಿಗೆ ಲೀಲಾ ಭಾಜನರಾಗಿದ್ದರು.
ಅಮೀರ್ ಖಾನ್ ನಟನೆಯ 'ಪಿಕೆ' ಚಿತ್ರ ಬಿಡುಗಡೆಯಾದ ಮೇಲಂತೂ ಸೆನ್ಸಾರ್ ಮಂಡಳಿ ದೇಶದೆಲ್ಲಡೆ ಭಾರೀ ಚರ್ಚೆಗೆ ಗುರಿಯಾಯಿತು ಮತ್ತು ಲೀಲಾ ಸಾಮ್ಸನ್ ಚಿತ್ರಕ್ಕೆ ಪ್ರಮಾಣಪತ್ರ ನೀಡಿರುವುದಕ್ಕೆ ಟೀಕೆಗೂ ಗುರಿಯಾಗಿದ್ದರು. ಚಿತ್ರದಲ್ಲಿನ ಕೆಲವು ಸನ್ನಿವೇಶಗಳು ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ.
ಚಿತ್ರವನ್ನು ನಿಷೇಧಿಸಬೇಕು ಇಲ್ಲವೇ ಚಿತ್ರದ ಕೆಲವೊಂದು ಸನ್ನಿವೇಶಕ್ಕೆ ಕತ್ತರಿ ಪ್ರಯೋಗಿಸಬೇಕು ಎನ್ನುವ ಒತ್ತಾಯಕ್ಕೆ ಲೀಲಾ ಮಣಿಯದಿದ್ದಾಗ ಕಟ್ಟಾ ಹಿಂದೂ ಪರ ಸಂಘಟನೆಗಳ ತೀವ್ರ ವಿರೋಧಕ್ಕೆ ಲೀಲಾ ಗುರಿಯಾಗಿದ್ದರು. ಆದರೆ ಯಾವುದೇ ಒತ್ತಡ, ಲಾಬಿಗೆ ಮಣಿಯದ ಲೀಲಾ ಸಾಮ್ಸನ್ ಚಿತ್ರ ಪ್ರಸಾರದ ತಡೆಗೆ ಬಿಲ್ಕುಲ್ ನೋ ಅಂದಿದ್ದರು.
ಪಿಕೆ ಚಿತ್ರವನ್ನು ವಿರೋಧಿಸುವವರು ಲೀಲಾ ಸಾಮ್ಸನ್ ರಾಜೀನಾಮೆಯಿಂದ ಖುಷಿಪಟ್ಟಿದ್ದರೂ ಪಿಕೆ ಚಿತ್ರ ಪ್ರದರ್ಶನ ಮಾತ್ರ ಮುಂದುವರಿಯುತ್ತಲೇ ಇದೆ.
-
'By Election: ಕಾಂಗ್ರೆಸ್ನಿಂದ ವೀರಶೈವ ಲಿಂಗಾಯತರನ್ನು ಒಡೆಯುವ ಪ್ರಯತ್ನ'' -
ದಾವಣಗೆರೆ ಟಿಕೆಟ್ ವಿಚಾರವಾಗಿ ನಾನು ಮುನಿಸಿಕೊಂಡಿರಲಿಲ್ಲ: ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟನೆ -
ಬಾಗಲಕೋಟೆಗೆ ಸಿದ್ದರಾಮಯ್ಯ ದ್ರೋಹ ಮಾಡಿದ್ರೆ ಪಕ್ಷ ಮತ್ತೆ ಗೆಲ್ಲುತ್ತಿತ್ತೇ? ಬಸವರಾಜ ಬೊಮ್ಮಾಯಿಗೆ ಕಾಂಗ್ರೆಸ್ ತಿರುಗೇಟು -
Bagalkote: ಕೃಷ್ಣ ಮೇಲ್ದಂಡೆ ಯೋಜನೆ ವಿಳಂಬಕ್ಕೆ ಕಾಂಗ್ರೆಸ್ಸೇ ಕಾರಣ: ವಿವರ ಬಿಚ್ಚಿಟ್ಟ ಬಸವರಾಜ ಬೊಮ್ಮಾಯಿ -
ಕೇರಳದಲ್ಲಿ ಬದಲಾವಣೆಯ ಪರ್ವ ಆರಂಭ: ಅಭಿವೃದ್ಧಿಗಾಗಿ ಜನ ಕಾಂಗ್ರೆಸ್ ಕೈಹಿಡಿಯಲಿದ್ದಾರೆ-ಡಿ.ಕೆ.ಶಿವಕುಮಾರ್ ಭವಿಷ್ಯ -
Baglkot By Poll:9 ವರ್ಷ ಅಧಿಕಾರದಲ್ಲಿದ್ದ ಬಿಜೆಪಿ ಸಾಧನೆ ಶೂನ್ಯ: ಗ್ಯಾರಂಟಿ ಯೋಜನೆಗಳ ಲೆಕ್ಕ ಕೊಟ್ಟ ಸಿದ್ದರಾಮಯ್ಯ -
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್











Click it and Unblock the Notifications