1,245 ಕೋಟಿ ರು ವಂಚನೆ: S Kumars ಸಂಸ್ಥೆ ವಿರುದ್ಧ ಸಿಬಿಐ ತನಿಖೆ
ಮುಂಬೈ, ಏಪ್ರಿಲ್ 14: ದೇಶದ ಪ್ರಮುಖ ಜವಳಿ ಉದ್ಯಮ ಸಂಸ್ಥೆ ಎಸ್ ಕುಮಾರ್ಸ್ ನೇಷನ್ ವೈಡ್ ಲಿಮಿಟೆಡ್ (SKNL) ಸಂಸ್ಥೆ ವಿರುದ್ಧ ಭಾರಿ ವಂಚನೆ ಆರೋಪ ಕೇಳಿ ಬಂದಿದೆ. ಸಾಲ ಪಡೆದು ಹಿಂತಿರುಗಿಸಿದ ಎಸ್ ಕುಮಾರ್ಸ್ ಸರಿ ಸುಮಾರು 1,245 ಕೋಟಿ ರು ವಂಚನೆಯಲ್ಲಿ ತೊಡಗಿದೆ ಎಂಬ ದೂರು ಕೇಳಿ ಬಂದಿದೆ. ಈ ಕುರಿತಂತೆ ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.
ಎಸ್ ಕುಮಾರ್ಸ್ ಹಾಗೂ 14 ಮಂದಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡು, ಎಫ್ಐಆರ್ ಹಾಕಲಾಗಿದೆ. ಮಹಾರಾಷ್ಟ್ರ, ಗುಜರಾತ್ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ದೇಶದ 13ಕ್ಕೂ ಅಧಿಕ ಸ್ಥಳಗಳಲ್ಲಿ ತಪಾಸಣೆ ನಡೆಸಿ, ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ವಕ್ತಾರ ಆರ್ ಸಿ ಜೋಶಿ ಹೇಳಿದ್ದಾರೆ.
ಕಂಪನಿಯು ಹೆಚ್ಚಿನ ಮೌಲ್ಯದ ಸೂಕ್ಷ್ಮ ಹತ್ತಿ ಬಟ್ಟೆಗಳು ಮತ್ತು ಗೃಹ ಜವಳಿಗಳನ್ನು ತಯಾರಿಸುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ ಎಂದು ಜೋಶಿ ಹೇಳಿದರು. ಕಂಪನಿಯು ಐಡಿಬಿಐ ಬ್ಯಾಂಕ್ ನೇತೃತ್ವದ ಬ್ಯಾಂಕ್ಗಳ ಒಕ್ಕೂಟದಿಂದ ಸಾಲವನ್ನು ಪಡೆದುಕೊಂಡಿದೆ. 2012 ರಿಂದ 2018 ರ ಅವಧಿಯಲ್ಲಿ ಬ್ಯಾಂಕ್ ಹಣವನ್ನು ದುರುಪಯೋಗಪಡಿಸಿಕೊಂಡ/ಬದಲಾವಣೆ ಮಾಡಿದ ಆರೋಪದ ಮೇಲೆ ಕಂಪನಿಯ ಪ್ರವರ್ತಕರು/ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ, ಇದರಿಂದಾಗಿ ಬ್ಯಾಂಕ್ಗಳಿಗೆ ಸುಮಾರು 1,245.15 ಕೋಟಿ ನಷ್ಟವಾಗಿದೆ ಎಂದು ಜೋಶಿ ಹೇಳಿದರು.

"ಈ ದೂರನ್ನು ಐಡಿಬಿಐ ಬ್ಯಾಂಕ್ ಲಿಮಿಟೆಡ್ ಮತ್ತು ಒಕ್ಕೂಟದ ಇತರ ನಾಲ್ಕು ಸದಸ್ಯ ಬ್ಯಾಂಕ್ಗಳಾದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಲಿಮಿಟೆಡ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ ಪರವಾಗಿ ಸಲ್ಲಿಸಲಾಗಿದೆ" ಎಂದು ಜೋಶಿ ವಿವರಿಸಿದರು.












Click it and Unblock the Notifications