ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು ಖರೀದಿಸಿ: ಪ್ರಧಾನಿ ಮೋದಿ ಕರೆ
PM Narendra Modi: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು (ಸೆಪ್ಟೆಂಬರ್ 29) ತಮ್ಮ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ಉದ್ದೇಶಿಸಿ ಮಾತನಾಡಿದರು. ಈ ವೇಳೆ ಮೇಡ್ ಇಂಡಿಯಾ ಉತ್ನನ್ನಗಳನ್ನು ಖರೀದಿ ಮಾಡುವಂತೆಯೂ ದೇಶದ ಜನತೆಗೆ ಕೆರೆ ನೀಡಿದರು.
ಇಂದಿನದ್ದು 'ಮನ್ ಕಿ ಬಾತ್'ನ 114ನೇ ಸಂಚಿಕೆ ಆಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ರೇಡಿಯೋ ಕಾರ್ಯಕ್ರಮ 10 ವರ್ಷ ಪೂರೈಸಿದೆ. ಪ್ರತಿ ತಿಂಗಳು ಕಾರ್ಯಕ್ರಮಕ್ಕಾಗಿ ಪತ್ರಗಳು ಮತ್ತು ಸಲಹೆಗಳನ್ನು ಕಳುಹಿಸುವ ಅಸಂಖ್ಯಾತ ಜನರಿಗೆಕೃತಜ್ಞತೆ ಎಂದು ಹೇಳಿದರು. ಮುಂದುವರೆದು ಮಾತನಾಡಿದ ಅವರು, ಮುಂಬರುವ ಹಬ್ಬಗಳ ದಿನಗಳಲ್ಲಿ 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳನ್ನು ಖರೀದಿ ಮಾಡುವಂತೆ ದೇಶದ ಜನತೆಗೆ ಕರೆ ನೀಡಿದ್ದರು.

ಕಳೆದ ಕೆಲವು ವಾರಗಳಿಂದ ದೇಶದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಮಳೆಗಾಲವು 'ಜಲ ಸಂರಕ್ಷಣೆ' ಎಷ್ಟು ಮುಖ್ಯ ಎಂಬುದನ್ನು ನಮಗೆ ನೆನಪಿಸುತ್ತದೆ ಎಂದರು. ಅಲ್ಲದೆ ಈ ಮೂಲಕ ಜಲ ಸಂರಕ್ಷಣೆಗೆ ಮಹಿಳಾ ರೈತರ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದರು.
ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪೋಷಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವಿಶಿಷ್ಟ ಉಪಕ್ರಮವಾದ 'ಕ್ರಿಯೇಟ್ ಇನ್ ಇಂಡಿಯಾ' ವನ್ನು ಶ್ಲಾಘಿಸಿದರು. ಇನ್ನು ನಮ್ಮ ಅಮೂಲ್ಯವಾದ ಪರಂಪರೆಯ ಬಗ್ಗೆ ನಾವು ಹೆಮ್ಮೆ ಪಡಬೇಕು. ನಾವೆಲ್ಲರೂ ನಮ್ಮ ಪರಂಪರೆಯ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ. ನಾನು ಯಾವಾಗಲೂ 'ವಿಕಾಸ್ ಭಿ, ವಿರಾಸತ್ ಭಿ' ಎಂದು ಹೇಳುತ್ತೇನೆ. ನಮ್ಮ ಪ್ರಾಚೀನ ಕಲಾಕೃತಿಗಳನ್ನು ಯುಎಸ್ ಹಿಂದಿರುಗಿಸುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದರು.
ಮುಂಬರುವ ಹಬ್ಬಗಳಿಗೆ ಎಲ್ಲರಿಗೂ ಶುಭಾಶಯ ಕೋರಿದ ಅವರು, ಹಬ್ಬದ ಸಮಯದಲ್ಲಿ 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳನ್ನು ಖರೀದಿಸಿ ಎಂದು ಸೂಚನೆ ನೀಡಿದರು. ಜೇಡಿ ಮಣ್ಣಿನಿಂದ ತಯಾರಿಸಿದ ದೀಪಗಳನ್ನು ಖರೀದಿ ಮಾಡುವುದರಿಂದ ಸ್ಥಳೀಯ ವ್ಯಾಪಾರಿಗಳಿಗೆ ಅನುಕೂಲ ಆಗುತ್ತದೆ ಎಂದು ಹೇಳಿದರು.
ಪ್ರಧಾನಿ ಮೋದಿ ಹೇಳಿದ್ದೇನು?: ಇಂದಿನದ್ದು 'ಮನ್ ಕಿ ಬಾತ್'ನ 114ನೇ ಸಂಚಿಕೆ ಆಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ರೇಡಿಯೋ ಕಾರ್ಯಕ್ರಮ 10 ವರ್ಷ ಪೂರೈಸಿದೆ. ಪ್ರತಿ ತಿಂಗಳು ಕಾರ್ಯಕ್ರಮಕ್ಕಾಗಿ ಪತ್ರಗಳು ಮತ್ತು ಸಲಹೆಗಳನ್ನು ಕಳುಹಿಸುವ ಅಸಂಖ್ಯಾತ ಜನರಿಗೆಕೃತಜ್ಞತೆ ಎಂದು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಮುಂಬರುವ ಹಬ್ಬಗಳ ದಿನಗಳಲ್ಲಿ 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳನ್ನು ಖರೀದಿ ಮಾಡುವಂತೆ ದೇಶದ ಜನತೆಗೆ ಕರೆ ನೀಡಿದ್ದರು.
ಕಳೆದ ಕೆಲವು ವಾರಗಳಿಂದ ದೇಶದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಮಳೆಗಾಲವು 'ಜಲ ಸಂರಕ್ಷಣೆ' ಎಷ್ಟು ಮುಖ್ಯ ಎಂಬುದನ್ನು ನಮಗೆ ನೆನಪಿಸುತ್ತದೆ ಎಂದರು. ಅಲ್ಲದೆ ಈ ಮೂಲಕ ಜಲ ಸಂರಕ್ಷಣೆಗೆ ಮಹಿಳಾ ರೈತರ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದರು.
ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪೋಷಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವಿಶಿಷ್ಟ ಉಪಕ್ರಮವಾದ 'ಕ್ರಿಯೇಟ್ ಇನ್ ಇಂಡಿಯಾ' ವನ್ನು ಶ್ಲಾಘಿಸಿದರು. ಇನ್ನು ನಮ್ಮ ಅಮೂಲ್ಯವಾದ ಪರಂಪರೆಯ ಬಗ್ಗೆ ನಾವು ಹೆಮ್ಮೆ ಪಡಬೇಕು. ನಾವೆಲ್ಲರೂ ನಮ್ಮ ಪರಂಪರೆಯ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ. ನಾನು ಯಾವಾಗಲೂ 'ವಿಕಾಸ್ ಭಿ, ವಿರಾಸತ್ ಭಿ' ಎಂದು ಹೇಳುತ್ತೇನೆ. ನಮ್ಮ ಪ್ರಾಚೀನ ಕಲಾಕೃತಿಗಳನ್ನು ಯುಎಸ್ ಹಿಂದಿರುಗಿಸುವ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ ಎಂದು ಹೇಳಿದರು.












Click it and Unblock the Notifications