ಕಾಂಗ್ರೆಸ್ಸಿಗರಿಗೆ ಬಡತನದ ಅರ್ಥವೇ ಗೊತ್ತಿಲ್ಲ: ನರೇಂದ್ರ ಮೋದಿ
ಪಟಾಣ್, ಡಿಸೆಂಬರ್ 11: "ಕಾಂಗ್ರೆಸ್ ನಾಯಕರು ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡದು ಹುಟ್ಟಿದವರು, ಅವರಿಗೆ ಬಡತನ ಅಂದರೆ ಏನು ಅನ್ನೋದು ಗೊತ್ತಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದರು.
ಗುಜರಾತ್ ನಲ್ಲಿ ಡಿ.14 ರಂದು ನಡೆಯಲಿರುವ ಎರಡನೇ ಹಂತದ ಮತದಾನದ ಹಿನ್ನೆಲೆಯಲ್ಲಿ ಇಲ್ಲಿನ ಪಟಾಣ್ ನಲ್ಲಿ ನಡೆದ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, "ನಾವು ರೈತರ ಬಳಿಗೆ ಹೋಗುವಾಗ ಬಡವರನ್ನೇ ಹುಡುಕಿ ಹೋಗುತ್ತಿದ್ದೆವೇ ಹೊರತು, ಶ್ರೀಮಂತರನ್ನು ಹುಡುಕಿ ನೆರವು ನೀಡುತ್ತಿರಲಿಲ್ಲ" ಎಂದು ಕಾಂಗ್ರೆಸ್ಸಿಗೆ ಛಾಟಿ ಬೀಸಿದರು.

'ವಿಷಾದದ ವಿಷಯವೆಂದರೆ ಕಾಂಗ್ರೆಸ್ ನಾಯಕರೆಲ್ಲರೂ ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡೇ ಹುಟ್ಟಿದ್ದರಿಂದ ಅವರಿಗೆ ಬಡತನ ಎಂದರೆ ಏನೆಂಬುದೇ ಗೊತ್ತಿಲ್ಲ' ಎಂದರು.
"ಕಡು ಬೇಸಿಗೆಯ ಸಮಯದಲ್ಲೂ ನಾನು ಗುಜರಾತಿನ ಹಳ್ಳಿ ಹಳ್ಳಿಗೆ ಹೋಗಿ ಅಲ್ಲಿನ ಪಾಲಕರ ಬಳಿ ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ಎಂದು ಕೇಳಿದೆ. ಅವರೆಲ್ಲ ಯಾರ ಮಕ್ಕಳು? ಅಂಬಾನಿಯ ಮಕ್ಕಳೇ? ಅಲ್ಲ, ಬಡವರ ಮಕ್ಕಳು. ನಾವು ಬಡವರಿಗಾಗಿ ಕೆಲಸ ಮಾಡುತ್ತೇವೆ" ಎಂದು ಸಹ ಅವರು ಹೇಳಿದರು.
ಗುಜರಾತ್ ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಮತದಾನ ಡಿ.9 ರಂದು ನಡೆದಿದ್ದು, ಡಿ.14 ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಡಿ.18 ರಂದು ಮತದಾನ












Click it and Unblock the Notifications