Blood Moon 2025: ಆಕಾಶದಲ್ಲಿ ರಕ್ತಸಿಕ್ತ ಚಂದ್ರ, ಗ್ರಹಣ ವೀಕ್ಷಣೆ ಸಮಯ ಏನು?
ಚಂದ್ರಗ್ರಹಣಕ್ಕೆ ಕ್ಷಣಗಣನೆ ಶುರುವಾಗಿದೆ, ಆಕಾಶದಲ್ಲಿ ಮತ್ತೊಂದು ವಿಸ್ಮಯ ಘಟಿಸಲಿದೆ. ಹೀಗೆ ಮನುಷ್ಯರು ಎಂದಿಗೂ ಮರೆಯಲು ಆಗದ ಘಟನೆಗೆ ಇದೀಗ ವೇದಿಕೆ ಸಿದ್ಧವಾಗಿದ್ದು, ಕೋಟ್ಯಂತರ ಜನ ರಕ್ತಸಿಕ್ತ ಚಂದ್ರನ ಕಣ್ತುಂಬಿಕೊಳ್ಳಲು ಕಾಯುತ್ತಾ ಇದ್ದಾರೆ. ಅದರಲ್ಲೂ ಬಾಹ್ಯಾಕಾಶದಲ್ಲಿ ಈ ವಿಸ್ಮಯ ಕಂಡು ಪುಳಕಿತರಾಗಲು ವಿಜ್ಞಾನಿಗಳು ಕೂಡ ತಮ್ಮ ದೂರದರ್ಶಕ ಸಿದ್ಧಮಾಡಿದ್ದಾರೆ. ಹಾಗಾದರೆ ಭಾರತದಲ್ಲಿ ಯಾವಾಗ ಘಟಿಸಲಿದೆ ಈ ಚಂದ್ರಗ್ರಹಣ?
ಅಂದಹಾಗೆ, ಇದೀಗ ಏಷ್ಯಾ ಮತ್ತು ಯೂರೋಪ್ನ ಲಕ್ಷಾಂತರ ಜನ ಕೆಂಪು ಚಂದ್ರನ ನೋಡಿ, ಆ ವಿಸ್ಮಯಕ್ಕೆ ಸಾಕ್ಷಿಯಾಗಲು ಕಾಯುತ್ತಿದ್ದಾರೆ. ಈ ಘಟನೆಯು ಸೆಪ್ಟೆಂಬರ್ 7 ಹಾಗೂ 8 ಅಂದರೆ, ಭಾನುವಾರ & ಸೋಮವಾರ ರಾತ್ರಿ ಸಂಭವಿಸಲಿದೆ. ಏಷ್ಯಾ, ಪಶ್ಚಿಮ ಆಸ್ಟ್ರೇಲಿಯಾ, ಯುರೋಪ್ ಸೇರಿ ಜಗತ್ತಿನ ಹಲವು ಭಾಗಗಳಲ್ಲಿ ಇದೀಗ ಕೆಂಪು ಚಂದ್ರನ ದರ್ಶನ ಆಗಲಿದೆಯಂತೆ. ಹಾಗಾದರೆ ಹೀಗೆ ಆಕಾಶದಲ್ಲಿ ರಕ್ತಸಿಕ್ತ ಚಂದ್ರನನ್ನ ನೋಡುವುದು ಯಾವ ಸಮಯದಲ್ಲಿ? ಭಾರತದಲ್ಲಿ ನಾವು ನೋಡುವುದು ಹೇಗೆ?

ಶತಮಾನದಲ್ಲಿ ಒಂದು ಬಾರಿ ಈ ವಿಸ್ಮಯ!
ಸೆಪ್ಟೆಂಬರ್ 7 ಭಾನುವಾರ ಬೆಳಗ್ಗೆ 2:41ಕ್ಕೆ ಚಂದ್ರಗ್ರಹಣ ತನ್ನ ಗರಿಷ್ಠ ಹಂತ ತಲುಪಿದೆ, ಅಂದರೆ ಇದೀಗ ಚಂದ್ರ ಸಂಪೂರ್ಣವಾಗಿ ನಮ್ಮ ಗ್ರಹ ಭೂಮಿಯ ನೆರಳಿನಲ್ಲಿ ಮುಳುಗಿ ತನ್ನ ಬಣವನ್ನು ಬದಲು ಮಾಡಿಕೊಂಡಿದೆ. 'ಟೋಟಾಲಿಟಿ' ಎಂದು ವೈಜ್ಞಾನಿಕ ಭಾಷೆಯಲ್ಲಿ ಕರೆಯುವ ಈ ಘಟನೆ ಈಗಾಗಲೇ ಸಂಭವಿಸಿದ್ದು, ಈ ಬಾರಿ ಆ ಹಂತ 82 ನಿಮಿಷಗಳ ಕಾಲ ಮುಂದುವರಿದು ಭೂಮಿಯ ಮೇಲೆ ನೋಡುವವರ ಕಣ್ಣಿಗೆ ಹಬ್ಬ ತರಿಸಿದೆ. ಅದರಲ್ಲೂ ಶತಮಾನದಲ್ಲಿ ಒಂದು ಬಾರಿ ಇಂತಹ ಚಂದ್ರಗ್ರಹಣ ಸಂಭವಿಸುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications