ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ: ಅಖಿಲೇಶ್ ಯಾದವ್

|
Google Oneindia Kannada News

ಅಹಮದಾಬಾದ್‌, ಡಿಸೆಂಬರ್‌ 5: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಮೈನ್‌ಪುರಿ ಉಪಚುನಾವಣೆಯಲ್ಲಿ ತಮ್ಮ ಪಕ್ಷ ಗೆಲ್ಲಲಿದೆ ಎಂದು ಹೇಳಿದ್ದಾರೆ.

ಸೋಮವಾರ ಮೈನ್‌ಪುರಿಯಲ್ಲಿ ಮತದಾನದ ದಿನದಂದು ಮಾತನಾಡಿದ ಅಖಿಲೇಶ್ ಯಾದವ್, ಗುಜರಾತ್‌ನಲ್ಲಿ ಬಿಜೆಪಿ ಹೀನಾಯವಾಗಿ ಸೋಲುತ್ತದೆ ಎಂದು ನಾನು ಭಾವಿಸುತ್ತೇನೆ. ಮೈನ್‌ಪುರಿ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಉತ್ತಮ ಸಂಖ್ಯೆಯ ಮತಗಳನ್ನು ಪಡೆಯುತ್ತದೆ ಎಂದು ನಾನು ನಂಬುತ್ತೇನೆ. ಜನರು ನಮಗೆ ಮತ ಹಾಕುತ್ತಾರೆ. ಬಿಜೆಪಿ ಕೇಂದ್ರೀಯ ಸಂಸ್ಥೆಗಳಿಗೆ (ಚುನಾವಣಾ ಆಯೋಗ) ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು. ಬಿಜೆಪಿ ಅವುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಹೇಳಿದರು.

ಗುಜರಾತ್, ಹಿಮಾಚಲ ಚುನಾವಣೆ: ಶೀಘ್ರ, ನಿಖರ ಫಲಿತಾಂಶಕ್ಕೆ Dailyhunt ನೋಡಿಗುಜರಾತ್, ಹಿಮಾಚಲ ಚುನಾವಣೆ: ಶೀಘ್ರ, ನಿಖರ ಫಲಿತಾಂಶಕ್ಕೆ Dailyhunt ನೋಡಿ

ಗುಜರಾತ್‌ನಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಗುಜರಾತ್‌ನಲ್ಲಿ ಬಿಜೆಪಿ ಸೋಲಲಿದೆ. ಅಖಿಲೇಶ್ ಯಾದವ್ ಅವರು ಮೈನ್‌ಪುರಿ ಕ್ಷೇತ್ರವನ್ನು ಗೆಲ್ಲುವುದಾಗಿ ಹೇಳುತ್ತಿದ್ದರೂ, ಅದೇ ಸಮಯದಲ್ಲಿ ಅವರು ಭಾರತೀಯ ಜನತಾ ಪಕ್ಷದ ಕಠಿಣ ಹೋರಾಟದಿಂದಾಗಿ ಸರ್ಕಾರ ಮತ್ತು ಆಡಳಿತದ ಮೇಲೆ ವಾಗ್ದಾಳಿ ಮಾಡುತ್ತಿದ್ದಾರೆ.

ಮೈನ್‌ಪುರಿ ಉಪ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಸ್ಪರ್ಧಿಸುತ್ತಿಲ್ಲ ಎಂದು ತೋರುತ್ತಿದೆ ಎಂದು ಅಖಿಲೇಶ್ ಆರೋಪಿಸಿದ್ದಾರೆ. ಬದಲಿಗೆ ಸರ್ಕಾರ ಮತ್ತು ಆಡಳಿತವು ಬಿಜೆಪಿಗೆ ಚುನಾವಣೆಯಲ್ಲಿ ಗೆಲ್ಲಲು ಹೋರಾಡುತ್ತಿದೆ. ಅಖಿಲೇಶ್ ಯಾದವ್ ಸೇರಿದಂತೆ ಇಡೀ ಯಾದವ್ ಕುಟುಂಬವು ದಿವಂಗತ ಮುಲಾಯಂ ಸಿಂಗ್ ಯಾದವ್ ಅವರ ಹೆಸರಿನಲ್ಲಿ ಸಮಾಜವಾದಿ ಪಕ್ಷಕ್ಕೆ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡಿದರು.

Gujarat & HP Elections Exit Polls Live: ಯಾರಿಗೆ ಒಲಿಯುತ್ತೆ ಗದ್ದುಗೆ?Gujarat & HP Elections Exit Polls Live: ಯಾರಿಗೆ ಒಲಿಯುತ್ತೆ ಗದ್ದುಗೆ?

ಮುಲಾಯಂ ಸಿಂಗ್ ಯಾದವ್ ಈ ವರ್ಷ ಅಕ್ಟೋಬರ್ 10, 2022 ರಂದು ನಿಧನರಾದರು. ಜನರಲ್ಲಿ ಹೆಚ್ಚಿನ ಉತ್ಸಾಹವಿದ್ದು, ಮತದಾನದ ಶೇಕಡಾವಾರು ಪ್ರಮಾಣವು ಉತ್ತಮವಾಗಲಿದೆ. ಆದರೂ ಮತದಾನದ ಶೇಕಡಾವಾರು ಪ್ರೋತ್ಸಾಹದಾಯಕವಾಗಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿದರು. ಮೈನ್‌ಪುರಿಯಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಶೇ.20.25ರಷ್ಟು ಮತದಾನವಾಗಿದೆ.

ಮುಲಾಯಂ ಸಿಂಗ್‌ ಯಾದವ್‌ ನಿಧನದಿಂದ ಚುನಾವಣೆ

ಮುಲಾಯಂ ಸಿಂಗ್‌ ಯಾದವ್‌ ನಿಧನದಿಂದ ಚುನಾವಣೆ

ಉತ್ತರ ಪ್ರದೇಶದ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ನಿಧನದ ಹಿನ್ನೆಲೆಯಲ್ಲಿ ಮೈನ್‌ಪುರಿ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ. ಸಮಾಜವಾದಿ ಪಕ್ಷವು ಮುಲಾಯಂ ಅವರ ಸೊಸೆ ಮತ್ತು ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರನ್ನು ಕಣಕ್ಕಿಳಿಸಿದೆ. ಅವರು ಬಿಜೆಪಿಯ ಮಾಜಿ ಸಂಸದ ರಘುರಾಜ್ ಸಿಂಗ್ ಶಾಕ್ಯಾ ವಿರುದ್ಧ ಕಣಕ್ಕಿಳಿದಿದ್ದಾರೆ.

ಸಬರಕಾಂತದಲ್ಲಿ ಶೇ.57.23ರಷ್ಟು ಮತದಾನ

ಸಬರಕಾಂತದಲ್ಲಿ ಶೇ.57.23ರಷ್ಟು ಮತದಾನ

ಗುಜರಾತ್‌ನಲ್ಲಿ ಸೋಮವಾರ ನಡೆದ ಎರಡನೇ ಹಂತದ ವಿಧಾನಸಭೆ ಚುನಾವಣೆಯಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ.50.51ರಷ್ಟು ಮತದಾನವಾಗಿತ್ತು. ಇಂದು ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದ್ದು. ಮಧ್ಯಾಹ್ನ 1 ಗಂಟೆಯವರೆಗೆ ಶೇ.34.74ರಷ್ಟು ಮತದಾನವಾಗಿದೆ. ರಾಜ್ಯ ಚುನಾವಣಾ ಆಯೋಗದ ಪ್ರಕಾರ, ಸಬರಕಾಂತದಲ್ಲಿ ಅತಿ ಹೆಚ್ಚು ಶೇ.57.23ರಷ್ಟು ಮತದಾನವಾಗಿದ್ದು, ಅಹಮದಾಬಾದ್‌ನಲ್ಲಿ ಅತಿ ಕಡಿಮೆ ಅಂದರೆ ಶೇ.44.67ರಷ್ಟು ಮತದಾನವಾಗಿದೆ.

ಶೇಕಡಾ 52.05 ರಷ್ಟು ಮತದಾನ

ಶೇಕಡಾ 52.05 ರಷ್ಟು ಮತದಾನ

ಏತನ್ಮಧ್ಯೆ, ಗಾಂಧಿನಗರದಲ್ಲಿ ಪಿಎಂ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ತಮ್ಮ ಮತ ಚಲಾಯಿಸಿದ್ದು, ಶೇಕಡಾ 52.05 ರಷ್ಟು ಮತದಾನವಾಗಿದೆ. ಉತ್ತರ ಮತ್ತು ಮಧ್ಯ ಗುಜರಾತ್‌ನ 14 ಜಿಲ್ಲೆಗಳ 93 ವಿಧಾನಸಭಾ ಕ್ಷೇತ್ರಗಳಿಗೆ ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಮತದಾನ ಸೋಮವಾರ ಬಿಗಿ ಭದ್ರತೆಯ ನಡುವೆ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಯಿತು.

26,409 ಮತಗಟ್ಟೆಗಳ ಸ್ಥಾಪನೆ

26,409 ಮತಗಟ್ಟೆಗಳ ಸ್ಥಾಪನೆ

ಗುಜರಾತ್ ಚುನಾವಣೆಯ ಎರಡನೇ ಹಂತದಲ್ಲಿ 61 ಪಕ್ಷಗಳಿಂದ 833 ಅಭ್ಯರ್ಥಿಗಳು ಕಣದಲ್ಲಿದ್ದು, ಅವರ ಭವಿಷ್ಯವನ್ನು 2.51 ಕೋಟಿ ಮತದಾರರು ನಿರ್ಧರಿಸಲಿದ್ದಾರೆ. ಚುನಾವಣಾ ಆಯೋಗವು 26,409 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಸುಮಾರು 36,000 ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಈ ಉದ್ದೇಶಕ್ಕಾಗಿ ಬಳಸಲಾಗುವುದು. ಮತದಾನಕ್ಕೆ ಅನುಕೂಲವಾಗುವಂತೆ 14 ಜಿಲ್ಲೆಗಳಲ್ಲಿ ಸುಮಾರು 29,000 ಪ್ರಿಸೈಡಿಂಗ್ ಅಧಿಕಾರಿಗಳು ಮತ್ತು 84,000 ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

English summary
Former Uttar Pradesh Chief Minister and Samajwadi Party National President Akhilesh Yadav has said that his party will win the Mainpuri by-election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X