ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಗೂ ಮುನ್ನ ಬಿಜೆಪಿಯಿಂದ 64 ಬಂಡಾಯಗಾರರು ಆಮಾನತು

|
Google Oneindia Kannada News

ಭೋಪಾಲ್, ನವೆಂಬರ್ 15: ಮಧ್ಯಪ್ರದೇಶದ 230 ವಿಧಾನಸಭಾ ಕ್ಷೇತ್ರಕ್ಕಾಗಿ ನವೆಂಬರ್ 28ರಂದು ಚುನಾವಣೆ ನಡೆಯಲಿದೆ. ಆದರೆ, ಚುನಾವಣೆಗೂ ಮುನ್ನ 64 ಬಂಡಾಯಗಾರರನ್ನು ಬಿಜೆಪಿ ಪಕ್ಷದಿಂದ ಹೊರ ಹಾಕಿದೆ.

ಪ್ರಮುಖವಾಗಿ ಮಾಜಿ ಸಚಿವರಾದ ರಾಮಕೃಷ್ಣ ಕುಸ್ಮಾರಿಯಾ, ಸರ್ತಾಜ್ ಸಿಂಗ್, ಗ್ವಾಲಿಯರ್ ಮೇಯರ್ ಸಮೀಕ್ಷಾ ಪಾಂಡೆ ಹಾಗೂ ಕೆಎಲ್​ ಅಗರವಾಲ್​ಪಕ್ಷದಿಂದ ವಜಾಗೊಂಡಿದ್ದಾರೆ. ಶಿವರಾಜ್ ಸಿಂಗ್ ಚೌಹಾಣ್ ಅವರ 2008 ಹಾಗೂ 2013ರ ಸರ್ಕಾರದಲ್ಲಿ ಕುಸ್ಮಾರಿಯಾ ಅವರು ಸಚಿವರಾಗಿದ್ದರು.

ಶಿವರಾಜ್ ಸಿಂಗ್ ಚೌಹಾಣ್ ಗೆ ಭರ್ಜರಿ ಗೆಲುವು: ಟೈಮ್ಸ್ ನೌ ಸಿಎನ್ಎಕ್ಸ್ ಶಿವರಾಜ್ ಸಿಂಗ್ ಚೌಹಾಣ್ ಗೆ ಭರ್ಜರಿ ಗೆಲುವು: ಟೈಮ್ಸ್ ನೌ ಸಿಎನ್ಎಕ್ಸ್

ಅಮಾನತುಗೊಂಡರ ಪೈಕಿ ಮೂವರು ಮಾಜಿ ಶಾಸಕರು ಹಾಗೂ ಕೆಲ ಮಾಜಿ ಮೇಯರ್​ಇದ್ದಾರೆ. ಇವರೆಲ್ಲರೂ ಪಕ್ಷದ ವಿರುದ್ಧವಾಗಿ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. 2932 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 578 ನಾಮಪತ್ರಗಳು ತಿರಸ್ಕೃತಗೊಂಡಿದ್ದು, 538 ನಾಮಪತ್ರಗಳನ್ನು ಹಿಂಪಡೆಯಲಾಗಿದೆ.

BJP expels 64 rebel leaders days before MP assembly election

ನಾಮಪತ್ರ ಸಲ್ಲಿಕೆ ಮಾಡಿದ್ದ ಅಭ್ಯರ್ಥಿಗಳಿಗೆ ವಾಪಸ್​ ಪಡೆದುಕೊಳ್ಳುವಂತೆ ಬಿಜೆಪಿ ತಿಳಿಸಿತ್ತು. ಮಧ್ಯಪ್ರದೇಶ ಎಲ್ಲ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್​ 11ರಂದು ಫಲಿತಾಂಶ ಹೊರಬರಲಿದೆ.

ಈ ಎರಡು ಪ್ರದೇಶಗಳ ಮೇಲೆ ನಿಂತಿದೆ ಮಧ್ಯಪ್ರದೇಶದ ಭವಿಷ್ಯ ಈ ಎರಡು ಪ್ರದೇಶಗಳ ಮೇಲೆ ನಿಂತಿದೆ ಮಧ್ಯಪ್ರದೇಶದ ಭವಿಷ್ಯ

15 ವರ್ಷಗಳಿಂದಲೂ ಅಧಿಕಾರದಲ್ಲಿರುವ ಬಿಜೆಪಿ, ನಾಲ್ಕನೇ ಬಾರಿಯೂ ಅಧಿಕಾರ ಪಡೆಯುವ ಉತ್ಸಾಹದಲ್ಲಿದೆ. ಆದರೆ, ಪಕ್ಷದಲ್ಲಿನ ಬಂಡಾಯ ಅಭ್ಯರ್ಥಿಗಳು ಈಗ ಪಕ್ಷಕ್ಕೆ ಮುಳುವಾಗಿದೆ.

ಶಿವರಾಜ್ ಸಿಂಗ್​ಚೌಹಾಣ್ ​ಅವರ ಗೆಲುವಿನ ನಾಗಾಲೋಟ ತಡೆಯಲು ಕಮಲ್​ನಾಥ್​ ಹಾಗೂ ಜ್ಯೋತಿರಾಧಿತ್ಯ ಸಿಂದಿಯಾ ಕಣಕ್ಕಿಳಿದಿದ್ದು, ಭಾರಿ ಸ್ಪರ್ಧೆ ನಿರೀಕ್ಷಿಸಲಾಗಿದೆ.

English summary
Days before Madhya Pradesh assembly election on November 28, the Bharatiya Janata Party (BJP) has expelled 64 of its rebel leaders including former ministers Sartaj Singh, Ram Krishan Kusmaria and former Gwalior mayor Sameeksha Pandey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X