Get Updates
Get notified of breaking news, exclusive insights, and must-see stories!

ವಿಪಕ್ಷಗಳ ಅವಿಶ್ವಾಸದ ಮೇಲೆ ಮಾತನಾಡದಂತೆ ಮಣಿಪುರ ಸಂಸದರಿಗೆ ಬಿಜೆಪಿ ಸೂಚನೆ

ನವದೆಹಲಿ, ಆಗಸ್ಟ್ 13: ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನೀರ್ಣಯ ಮೇಲೆ ಬಯಸಿದ್ದ ಮಣಿಪುರದ ಹೊರ ಕ್ಷೇತ್ರದ ನಾಗಾ ಪೀಪಲ್ಸ್ ಫ್ರಂಟ್ (NPF) ಸಂಸದ ಲೋರ್ಹೋ ಎಸ್. ಪಿಫೋಜ್ ಅವರಿಗೆ'ಮೈತ್ರಿಯಲ್ಲಿನ ಅವರ ಸ್ನೇಹಿತರು ಅದರಲ್ಲೂ ಬಿಜೆಪಿಯವರು ಈ ಕುರಿತ ಮಾತನಾಡದಂತೆ ಅನೌಪಚಾರಿಕವಾಗಿ ಸಲಹೆ ನೀಡಿದರು ಎಂದು ಸ್ವತಃ ಸಂಸದೇ ಮಾಹಿತಿ ಬಹಿರಂಗಪಡಿಸಿದ್ದಾರೆ.

ಮಣಿಪುರ ಜನಾಂಗೀಯ ಸಂಘರ್ಷದಲ್ಲಿ ಹಿಂಸಾಚಾರ ತೀವ್ರವಾಗಿದ್ದದ್ದನ್ನು ದೇಶವೇ ನೋಡಿದೆ. ಮಣಿಪುರ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಸಂಸದರು ಈ ಹಿಂಸಾಚಾರವನ್ನು ನಿಲ್ಲಿಸಬೇಕಾಗಿತ್ತು ಎಂದು ಅವರು ಅಭಿಪ್ರಾಯಪಟ್ಟರು. ಮಣಿಪುರದಲ್ಲಿ ಮತ್ತೆ ಶಾಂತಿ ಮರಳಿ ತರಲು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಕೇಂದ್ರ ಸರ್ಕಾರ ಅಲ್ಲಿನ ಮತದಾರರು ಹಾಗೂ ದೇಶದ ಜನರಿಗೆ ವಿಶ್ವಾಸ ನೀಡಿದೆ ಎಂದರು ಎಂದು ದಿ ಹಿಂದು ವರದಿ ಮಾಡಿದೆ.

BJP Advised To Not Speak On Oppositions No Confidence Motion To Manipur MP, Lorho S. Pfoze

IMD India Weather: ದೇಶದ ಈ ರಾಜ್ಯಗಳಲ್ಲಿ ಆ.14 ರವರೆಗೆ ಮಳೆ, ಪ್ರದೇಶವಾರು ಮುನ್ಸೂಚನೆ

ಮಣಿಪುರದ ಕುಕಿ-ಝೋ ವರ್ಗದವರು ಘರ್ಷನೆಯಲ್ಲಿ ಹೆಚ್ಚು ಬಳಲುತ್ತಿದ್ದು, ಅವರೆಲ್ಲ ನಮ್ಮ ಮತದಾರರು ಎಂದು ಅವರು ಹೇಳಿಕೊಂಡರು. ಅವರ ಕ್ಷೇತ್ರದಲ್ಲಿ ಬರುವ ಇತರ ಮೂರು ಜಿಲ್ಲೆಗಳ ಭಾಗಗಳಲ್ಲಿ ವಾಸಿಸುತ್ತಿದ್ದಾರೆ.

ಅಮಿತ್ ಶಾ ಮಾತನಾಡಿದ್ದಾರೆ-ನೀವು ಮಾತನಾಡುವುದು ಬೇಡ
ಮಣಿಪುರದ ವಿಚಾರವಾಗಿ ಅವಿಶ್ವಾಸ ಗೊತ್ತುವಳಿ ಮಂಡನೆ ಆಗಿದೆ ಎಂದು ತಿಳಿದು, ಸದನದಲ್ಲಿ ನಿರ್ಣಯ ಮೇಲೆ ಮಾತನಾಡಲು ಬಯಸಿದ್ದೆ. ಆದರೆ ಆಗ ಮೈತ್ರಿಕೂಟದ ನನ್ನ ಸ್ನೇಹಿತರು, ವಿಶೇಷವಾಗಿ ಬಿಜೆಪಿಯ ಕೆಲವರು ನನ್ನು ಸಂಪರ್ಕಿಸಿ ಮಾತನಾಡಬಾರದು. ಈಗಾಗಲೇ ಗೃಹ ಸಚಿವ ಅಮಿತ್ ಅವರು ಬಹಳಷ್ಟು ಮಾತನಾಡಿದ್ದು, ನೀವು ಮಾತನಾಡದಿದ್ದರೆ ಒಳಿತು ಎಂದು ಸಲಹೆ ನೀಡಿದ್ದರು. ಹೀಗಾಗಿ ನಾನು ಸ್ಪೀಕರ್ ಬಳಿ ಸಲಹೆ ಕೇಳಲಿಲ್ಲ ಎಂದರು.

ಮಣಿಪುರದ ಮತ್ತೊಬ್ಬ ಬಿಜೆಪಿ ಸಂಸದರಾದ ಮತ್ತು ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವಬಿಜೆಪಿಯ ಆರ್.ಕೆ. ರಂಜನ್ ಸಿಂಗ್ ಅವರಿಗೆ ಮಾತನಾಡದಂತೆ ಸಲಹೆ ನೀಡಲಾಯಿತು.

ಮಣಿಪುರ ಹಿಂಸಾಚಾರವಾಗಿ ಮಾತನಾಡುವಾಗಿ ಆ ಬಗ್ಗೆ ಮಣಿಪುರ ಸಂಸದರನ್ನು ಮಾತನಾಡಲು ತಿಳಿಸಬೇಕು. ಆದರೆ ಹಾಗಾಗಲಿಲ್ಲ. ಸದ್ಯ ಚುನಾವಣೆಗಳು ಬರಲಿವೆ, ಮಣಿಪುರದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿಭಾಯಿಸಲು ಸರ್ಕಾರವು ಗಂಭೀರ ಚಿಂತಿಸಬೇಕು ಎಂದು ಲೋರ್ಹೋ ಎಸ್. ಪಿಫೋಜ್ ಹೇಳಿದರು.

ಸ್ಪೀಕರ್‌ಗೆ ಮನವಿ ಮಾಡಿದರೂ ಅವಕಾಶ ನೀಡಲಿಲ್ಲ
ಅವಿಶ್ವಾಸ ನಿರ್ಣಯವನ್ನು ಮಂಡಿಸಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರು ಟ್ವಿಟ್ಟರ್ (X) ನಲ್ಲಿ ಪೋಸ್ಟ್ ಮಾಡಿದ್ದರು. ಅದರಲ್ಲಿ ಭಾರತೀಯ ಸಂಸತ್ತಿನಲ್ಲಿ ನಾನು ಸೇರಿದಂತೆ ಮಣಿಪುರದ ಬಗ್ಗೆ ಎಲ್ಲರೂ ಮಾತನಾಡಿದ್ದಾರೆ. ಆದರೆ ಬಿಜೆಪಿ 2 ಸಂಸದರಿಗೆ ಅವಕಾಶ ನೀಡಲಿಲ್ಲ. ಸ್ಪೀಕರ್ ಅವರನ್ನು ಬೇಡಿಕೊಂಡರು ಸಹ ಪ್ರಧಾನಿ ಮೋದಿ ಮತ್ತು ಗೃಹ ಅಮಿತ್ ಶಾ ಅವಬ್ಬರಿಗೂ ಮಣಿಪುರ ಸಂಸದರ ಮಾತುಗಳನ್ನು ಆಲಿಸುವ ಸೂಕ್ಷ್ಮತೆ ಅಥವಾ ತಾಳ್ಮೆ ಇರಲಿಲ್ಲ ಎಂದು ತಿಳಿಸಿದ್ದಾರೆ.

BJP Advised To Not Speak On Oppositions No Confidence Motion To Manipur MP, Lorho S. Pfoze

ಬಿಜೆಪಿ ವಿರುದ್ಧ ಜೈರಾಮ್ ರಮೇಶ್ ಕಿಡಿ
ಕಾಂಗ್ರೆಸ್‌ ನಾಯಕರಾದ ಜೈರಾಮ್ ರಮೇಶ್ ಅವರು ಆರ್.ಕೆ. ರಂಜನ್ ಸಿಂಗ್ ಅವರ ಸುದ್ದಿಯ ವಿಡಿಯೋ ಕ್ಲಿಪ್ ಹಂಚಿಕೊಂಡಿದ್ದಾರೆ. ಅವಿಶ್ವಾಸ ನಿರ್ಣಯ ಮೇಲೆ ಮಾತನಾಡಲು ಮಣಿಪುರದ ಬಿಜೆಪಿ ಸಂಸದರು ಮನವಿ ಮಾಡಿದರೂ ಸಹ ಸಂಸತ್ತಿನಲ್ಲಿ ಅವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಇದು ದುರದೃಷ್ಟಕರ ಅಷ್ಟೇ ಅಲ್ಲ, ಮಣಿಪುರದ ಜನರಿಗೆ ಮಾಡಿ ಅವಮಾನವಾಗಿದೆ. ಮಣಿಪುರದ ಬಿಜೆಪಿ ಸಂಸದರದನ್ನು ಪಕ್ಷವೇ ಮಾತನಾಡದಂತೆ ತಡೆದಿರುವುದು ನಾಚಿಕೆಗೇಡಿನ ಸಂಗತಿ ಎಂದು ಜರಿದರು.

ಕಾಂಗ್ರೆಸ್‌ನ ರಾಹುಲ್ ಗಾಂಧಿಯನ್ನು ಬಿಜೆಪಿ ವಿಧವಿಧವಾಗಿ ಪ್ರಶ್ನಿಸಿತು. ಮಣಿಪುರದ ಕುರಿತು ಪ್ರಧಾನ ಮಂತ್ರಿಯವರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಭಾಷನದಲ್ಲಿ ಪ್ರಧಾನಿ ಮೋದಿಯವರು ಹೆಚ್ಚಿನ ಸಮಯವನ್ನು ಈಶಾನ್ಯ ಪ್ರದೇಶದ ಅಭಿವೃದ್ಧಿ ಕುರಿತು ತಿಳಿಸಿದರು. ಕಾಂಗ್ರೆಸ್ ಸೇರಿದಂತೆ ರಾಜಕೀಯ ಪಕ್ಷಗಳ ಮೇಲಿನ ಟೀಕೆಗೆ ಹೆಚ್ಚು ಸಮಯ ಕಳೆದಿದ್ದಾರೆ.

ಸಂಪೂರ್ಣ ಅವಿಶ್ವಾಸ ನಿರ್ಣಯವು ಮಣಿಪುರದ ಮೇಲೆಯೇ ಕೇಂದ್ರಿಕೃತವಾಗಿತ್ತು. ಪ್ರಧಾನಿ ಮೋದಿ ಅವರು ಮೊದಲು ಮಣಿಪುರದ ಬಗ್ಗೆ ಮಾತನಾಡಬೇಕಿತ್ತು. ನಂತರ ಅವರು ತಮ್ಮ ಪ್ರಸ್ತಾವನೆಗೆ ಅಥವಾ ಮಣಿಪುರಕ್ಕೆ ಶಾಂತಿ ಮತ್ತು ಸಹಜತೆಯನ್ನು ಮರಳಿ ತರುವುದು ಹೇಗೆ ಎಂಬ ಅವರ ಯೋಜನೆಗೆ ಸ್ವಲ್ಪ ಹೆಚ್ಚು ಸಮಯವನ್ನು ನೀಡಬೇಕಿತ್ತು ಎಂದು ಎನ್‌ಪಿಎಫ್ ಲೋರ್ಹೋ ಎಸ್‌ ಪಿಫೋಜ್ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+