ಬಿಹಾರ: 3 ಬಲಿ ಪಡೆದ 'ಕೈ' ಎಂಪಿ ಭದ್ರತಾ ಸಿಬ್ಬಂದಿ ಕಾರು
ಬಿಹಾರ್ ನ ಕಾಂಗ್ರೆಸ್ ಸಂಸದೆ ರಂಜೀತ್ ರಂಜನ್ ಅವರ ಕಾರು ಗುದ್ದಿದ್ದರಿಂದಾಗಿ ಮೂವರು ಸಾವು. ರಂಜೀತ್ ಅವರ ಸ್ವಕ್ಷೇತ್ರ ನಿರ್ಮಲ್ ಪ್ರಾಂತ್ಯಕ್ಕೆ ಭೇಟಿ ನೀಡಿದ್ದಾಗ ನಡೆದ ಘಟನೆ.
ಸುಪೌಲ್, ಆಗಸ್ಟ್ 21: ಸುಪೌಲ್ ಸಂಸತ್ ಕ್ಷೇತ್ರದಿಂದ ಚುನಾಯಿತರಾಗಿರುವ ಕಾಂಗ್ರೆಸ್ ನ ಮಹಿಳಾ ನಾಯಕಿ ರಂಜೀತ್ ರಂಜನ್ ಅವರಿಗೆ ಸೇರಿದ ಭದ್ರತಾ ಸಿಬ್ಬಂದಿಯ ಕಾರು ಮೂವರನ್ನು ಬಲಿ ಪಡೆದ ಘಟನೆ ಸೋಮವಾರ (ಆಗಸ್ಟ್ 21) ನಡೆದಿದೆ.
ಕಾಂಗ್ರೆಸ್ ನ ವಕ್ತಾರರೂ ಆಗಿರುವ ರಂಜೀತ್ ಅವರು ಸುಪೌಲ್ ನ ನಿರ್ಮಲ್- ಸಿಕರ್ಹಾತಾ ಪ್ರಾಂತ್ಯಕ್ಕೆ ಭೇಟಿ ನೀಡಿದಾಗ, ರಂಜೀತ್ ಅವರ ಭದ್ರತಾ ಸಿಬ್ಬಂದಿಯ ಕಾರೊಂದು ನಿಯಂತ್ರಣ ತಪ್ಪಿ ರಸ್ತೆಯ ಅಕ್ಕಪಕ್ಕದಲ್ಲಿ ನೆರೆದಿದ್ದ ಜನರ ಮೇಲೆ ಹರಿಯಿತು. ಆಗ ಹಲವಾರು ಮಂದಿ ಗಾಯಗೊಂಡರು.

ಈ ಘಟನೆ ಜರುಗಿದಾ ನಿರ್ಮಲ್-ಸಿಕರ್ಹಾತಾ ಪ್ರಾಂತ್ಯದ ಕಾಂಗ್ರೆಸ್ ಅಧ್ಯಕ್ಷ ರಾಮ್ ಪ್ರಸೇಸ್ ಯಾದವ್ ಅವರು, ಸ್ಥಳದಲ್ಲಿದ್ದರು. ಅವರೇ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು.
ಇವರಲ್ಲಿ ಮೂವರು ಮೃತಪಟ್ಟಿದ್ದಾರೆಂದು ಹೇಳಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.












Click it and Unblock the Notifications