ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಶಿರ್ ಲಷ್ಕರಿ- ಕಾಶ್ಮೀರ ಪೊಲೀಸರ ಹತ್ಯೆ ಹಿಂದಿನ ರೂವಾರಿ
ಶ್ರೀನಗರ(ಜಮ್ಮು ಮತ್ತು ಕಾಶ್ಮೀರ), ಜೂನ್ 17: ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಅಬಚಲ್ ಪೊಲೀಸ್ ಠಾಣೆಯ ಮೇಲೆ ನಿನ್ನೆ (ಜೂನ್ 16) ನಡೆದ ಭಯೋತ್ಪಾದಕ ದಾಳಿಯಲ್ಲಿ ಆರು ಪೊಲೀಸರು ಹತರಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ದಾಳಿಗೆ ಬಶಿರ್ ಲಷ್ಕರಿ ಎಂಬ ಭಯೋತ್ಪಾದಕನೇ ಕಾರಣ ಎಂದು ಗುರುತಿಸಲಾಗಿದೆ.
ಕಾಶ್ಮೀರದಲ್ಲಿ ಪರಿಸ್ಥಿತಿ ಉದ್ವಿಗ್ನ: ಶ್ರೀನಗರದಲ್ಲಿ ಕರ್ಫ್ಯೂ ಜಾರಿ
ನಿನ್ನೆ(ಜೂನ್ 16) ಕಾಶ್ಮೀರದದ ಅರ್ವಾನಿ ಗ್ರಾಮದಲ್ಲಿಬೆಳಗ್ಗೆ ಅರೆಸೇನಾ ಪಡೆಯೊಂದಿಗೆ ನಡೆದಿದ್ದ ಉಗ್ರರ ಗುಂಡಿನ ಕಾಳಗದಲ್ಲಿ ಲಷ್ಕರ್ ಎ ತೊಯ್ಬಾ ಸಂಘಟನೆಯ ಕಮಾಂಡರ್ ಜುನೈದ್ ಮಟ್ಟೂ ಹತ್ಯೆಯಾಗಿತ್ತು. ಈ ಘಟನೆಯ ಪ್ರತೀಕಾರ ತೀರಿಸಿಕೊಳ್ಳುವುದಕ್ಕಾಗಿ ನಡೆದ ಗುಂಡಿನ ದಾಳಿಯಲ್ಲಿ ಆರು ಜನ ಪೊಲೀಸರು ಹತರಾಗಿದ್ದರು.
ಸದ್ಯಕ್ಕೆ ಈ ಘಟನೆಯ ರೂವಾರಿ ಲಶ್ಕರ್ ಇ ತೋಯ್ಬಾ ಉಗ್ರ ಬಶಿರ್ ಲಷ್ಕರಿ ಎಂದು ಗುರುತಿಸಲಾಗಿದ್ದು, ಆತನ ಕುರಿತು ಮತ್ತಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ.
Comments
English summary
The police of Jammu and Kashmir have identified Bashir Lashkari as the man who led the attack at Anantnag in which 6 policemen were martyred. The attack was carried by LeT led by Bashir Lashkari. We will track him down and make sure justice is done, said J&K DGP S P Vaid.
Story first published: Saturday, June 17, 2017, 14:01 [IST]