ಬಶಿರ್ ಲಷ್ಕರಿ- ಕಾಶ್ಮೀರ ಪೊಲೀಸರ ಹತ್ಯೆ ಹಿಂದಿನ ರೂವಾರಿ
ಶ್ರೀನಗರ(ಜಮ್ಮು ಮತ್ತು ಕಾಶ್ಮೀರ), ಜೂನ್ 17: ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಅಬಚಲ್ ಪೊಲೀಸ್ ಠಾಣೆಯ ಮೇಲೆ ನಿನ್ನೆ (ಜೂನ್ 16) ನಡೆದ ಭಯೋತ್ಪಾದಕ ದಾಳಿಯಲ್ಲಿ ಆರು ಪೊಲೀಸರು ಹತರಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ದಾಳಿಗೆ ಬಶಿರ್ ಲಷ್ಕರಿ ಎಂಬ ಭಯೋತ್ಪಾದಕನೇ ಕಾರಣ ಎಂದು ಗುರುತಿಸಲಾಗಿದೆ.
ನಿನ್ನೆ(ಜೂನ್ 16) ಕಾಶ್ಮೀರದದ ಅರ್ವಾನಿ ಗ್ರಾಮದಲ್ಲಿಬೆಳಗ್ಗೆ ಅರೆಸೇನಾ ಪಡೆಯೊಂದಿಗೆ ನಡೆದಿದ್ದ ಉಗ್ರರ ಗುಂಡಿನ ಕಾಳಗದಲ್ಲಿ ಲಷ್ಕರ್ ಎ ತೊಯ್ಬಾ ಸಂಘಟನೆಯ ಕಮಾಂಡರ್ ಜುನೈದ್ ಮಟ್ಟೂ ಹತ್ಯೆಯಾಗಿತ್ತು. ಈ ಘಟನೆಯ ಪ್ರತೀಕಾರ ತೀರಿಸಿಕೊಳ್ಳುವುದಕ್ಕಾಗಿ ನಡೆದ ಗುಂಡಿನ ದಾಳಿಯಲ್ಲಿ ಆರು ಜನ ಪೊಲೀಸರು ಹತರಾಗಿದ್ದರು.

ಸದ್ಯಕ್ಕೆ ಈ ಘಟನೆಯ ರೂವಾರಿ ಲಶ್ಕರ್ ಇ ತೋಯ್ಬಾ ಉಗ್ರ ಬಶಿರ್ ಲಷ್ಕರಿ ಎಂದು ಗುರುತಿಸಲಾಗಿದ್ದು, ಆತನ ಕುರಿತು ಮತ್ತಷ್ಟು ಮಾಹಿತಿ ಕಲೆಹಾಕಲಾಗುತ್ತಿದೆ.












Click it and Unblock the Notifications